ದೇಶ

ಅರೆಂಜ್ ಮ್ಯಾರೇಜ್‌ ತಪ್ಪಿಸಲು ರಸ್ತೆಯಲ್ಲೇ ತಲೆ ಬೋಳಿಸಿಕೊಂಡ ಯುವತಿ; ವಿಡಿಯೋ ವೈರಲ್​!

"ನನ್ನ ತಾಯಿ ನನಗೆ ಮದುವೆ ಮಾಡಲು ಯೋಜಿಸಿದ್ದರು" ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್ ಮಾಡಲಾದ ಈ ವಿಡಿಯೋ ಸಾಮಾಜಿಕ ಮಾಧ್ಯದಲ್ಲಿ ವ್ಯಾಪಕ ಗಮನ ಸೆಳೆದಿದೆ.

ಯುವತಿಯೊಬ್ಬಳು ಅರೆಂಜ್ ಮ್ಯಾರೇಜ್ ಕಪ್ಪಿಸಲು ರಸ್ತೆಯಲ್ಲೇ ತಲೆ ಬೋಳಿಸಿಕೊಂಡಿದ್ದು, ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಪರ, ವಿರೋಧ ಚರ್ಚೆಗೆ ಕಾರಣವಾಗಿದೆ.

ಸ್ವತಃ ಯುವತಿಯೇ ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಈ ವಿಚಿತ್ರ ಘಟನೆಯ ವಿಡಿಯೋ ಹಂಚಿಕೊಂಡಿದ್ದಾರೆ. ಕೀರ್ತನಾ ಮೆನನ್ ಎಂಬ ಯುವತಿ ಕ್ಷೌರಿಕನ ಕುರ್ಚಿಯಲ್ಲಿ ಕುಳಿತು ತಮ್ಮ ಉದ್ದನೆಯ ಕೂದಲನ್ನು ಸಂಪೂರ್ಣವಾಗಿ ನುಣ್ಣಗೆ ಬೋಳಿಸಿಕೊಂಡಿದ್ದಾರೆ.

ಕೀರ್ತನಾ ಮೆನನ್​ ಎಂಬ ಯುವತಿ ಹಂಚಿಕೊಂಡಿರುವ ವಿಡಿಯೋನಲ್ಲಿ, ಆಕೆಯ ಮನೆಯಲ್ಲಿ ಅರೆಂಜ್​ ಮ್ಯಾರೇಜ್​ ಮಾಡುವ ಯೋಜನೆ ರೂಪಿಸಿದ್ದರಂತೆ. ಆದರೆ ಈ ಮದುವೆ ಕೀರ್ತನಾಗೆ ಇಷ್ಟವಿರದ ಕಾರಣ, ಆಕೆ ತನ್ನ ತಲೆ ಕೂದಲನ್ನು ಸಂಪೂರ್ಣವಾಗಿ ಬೋಳಿಸಿಕೊಂಡಿದ್ದಾರೆ.

"ನನ್ನ ತಾಯಿ ನನಗೆ ಮದುವೆ ಮಾಡಲು ಯೋಜಿಸಿದ್ದರು" ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್ ಮಾಡಲಾದ ಈ ವಿಡಿಯೋ ಸಾಮಾಜಿಕ ಮಾಧ್ಯದಲ್ಲಿ ವ್ಯಾಪಕ ಗಮನ ಸೆಳೆದಿದೆ. ಕ್ಲಿಪ್‌ನಾದ್ಯಂತ, ಕ್ಷೌರಿಕ ತಲೆಯನ್ನು ಬೋಳಿಸಿಕೊಳ್ಳುತ್ತಿರುವಾಗ ಕೀರ್ತನಾ ಸಂಯಮದಿಂದ ಕೂಳಿತಿದ್ದು, ಒಂದು ಲೈನ್ ಶೀರ್ಷಿಕೆಯನ್ನು ಬಿಟ್ಟು ಬೇರೆ ಯಾವುದೇ ವಿವರಣೆಯನ್ನು ನೀಡಿಲ್ಲ.

ಕೀರ್ತನಾಳ ತಲೆ ಬೋಳಿಸಿಕೊಳ್ಳುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿದ್ದಂತೆ ಇದಕ್ಕೆ ಜನರಿಂದ ಮಿಶ್ರ ಪ್ರತಿಕ್ರಿಯೆ ಸಿಗುತ್ತಿದೆ.

ಕೆಲವರು ಈ ಯುವತಿ ತನ್ನ ತಲೆ ಕೂದಲನ್ನೇ ತೆಗೆಸಿಕೊಂಡಿದ್ದಾಳೆಂದರೆ ಮನೆಯಲ್ಲಿ ಮದುವೆ ಬಗ್ಗೆ ಎಷ್ಟು ಹಿಂಸೆ ಮಾಡಿದ್ದಾರೆಂದು ತಿಳಿಯುತ್ತದೆ ಎಂದು ಕಮೆಂಟ್​ ಮಾಡಿದ್ದಾರೆ. ಇನ್ನು ಕೆಲವರು ತನಗೆ ಮದುವೆ ಬೇಡ ಎಂದು ತನ್ನ ಹೆತ್ತವರನ್ನೇ ಒಪ್ಪಿಸಲಾಗದವಳು, ಸಂಸಾರವನ್ನು ಹೇಗೆ ಮಾಡುವಳೋ? ಎಂದು ಕೀರ್ತನಾಳ ನಡೆಯನ್ನು ಪ್ರಶ್ನಿಸಿದ್ದಾರೆ.

ಮದುವೆ ಎನ್ನುವುದು ಕೇವಲ ಸಂಪ್ರದಾಯ ಮಾತ್ರವಲ್ಲ, ಇದು ನಿಸರ್ಗದ ನಿಯಮ. ಇಕೆ ತಲೆ ಬೋಳಿಸಿಕೊಳ್ಳುವುದು, ಬಿಡುವುದು ಆಕೆಯ ವೈಯಕ್ತಿಕ ಅಭಿಪ್ರಾಯ. ಆದರೆ ಎಲ್ಲರೂ ಇಕೆಯಂತೆ ಮದುವೆ ಬೇಡ ಎಂದರೆ, ಮಾನವ ಸಂಕುಲದ ನಾಶ ಖಂಡಿತ ಎಂದು ಮತ್ತೊಬ್ಬರು ನೀತಿ ಪಾಠವನ್ನು ಬೋಧಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬಿಡದಿ ಟೌನ್ ಶಿಪ್: ಸರ್ವೇಗೆ ಬಂದ ಅಧಿಕಾರಿಗಳಿಗೆ ರೈತ ಮಹಿಳೆಯರಿಂದ ಪೊರಕೆ ಏಟು: ಕಾರಿನ ಗ್ಲಾಸ್ ಪೀಸ್!

ಲಾರ್ಡ್ಸ್‌ನಲ್ಲಿ ಇತಿಹಾಸ ಸೃಷ್ಟಿಸಿದ ವನಿತೆಯರು: 142 ವರ್ಷಗಳಷ್ಟು ಹಳೆಯ ಮೈದಾನದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯ ಗೆದ್ದ ಭಾರತ!

ಪೋಕ್ಸೋ ಪ್ರಕರಣ: ವಚನಾನಂದ ಶ್ರೀಗೆ ಬಿಗ್ ರಿಲೀಫ್​​; ಜಾಮೀನು ಮಂಜೂರು

ಇಂಥಹ ಹಠಾತ್ ಸಾವುಗಳಿಗೆ ಸಿದ್ಧರಾಗಿ: ಟ್ರಂಪ್ ಆಪ್ತ ಲಿಂಡ್ಸೆ ಗ್ರಹಾಂ ಸಾವಿನ ಬೆನ್ನಲ್ಲೇ ಇರಾನ್ ಸಂದೇಶ

CCTV ಕಡ್ಡಾಯ: ಮುಜರಾಯಿ ದೇವಾಲಯಗಳಲ್ಲಿ ಭದ್ರತೆ, ದೇಣಿಗೆಗಳ ಪಾರದರ್ಶಕತೆಗಾಗಿ ರಾಜ್ಯ ಸರ್ಕಾರದಿಂದ SOP