ಎಐ ಸೃಷ್ಟಿತ ಚಿತ್ರ 
ದೇಶ

ಮದುವೆಯಾಗಿ 25 ದಿನ... ಗಡ್ಡ ಶೇವ್ ಮಾಡುತ್ತಿದ್ದ ಪತ್ನಿ ನೋಡಿ ಬೆಚ್ಚಿಬಿದ್ದ ಪತಿ; ತೃತೀಯಲಿಂಗಿ ಎಂದು ದೂರು..!

ಮದುವೆಯಾದ 25 ದಿನಗಳ ಬಳಿಕ, ವರನ ಅತ್ತಿಗೆ (ಅಣ್ಣನ ಹೆಂಡತಿ) ಅಕಸ್ಮಾತ್ ಆಗಿ ರೂಮ್ ಒಳಗೆ ಹೋದಾಗ ಅಸಲಿ ಸತ್ಯ ಬೆಳಕಿಗೆ ಬಂದಿದೆ.

ಶಾಜಾಪುರ (ಮಧ್ಯಪ್ರದೇಶ): ಮದುವೆಯಾದ ಕೇವಲ 25 ದಿನಗಳಲ್ಲೇ ನವವಧುವೊಬ್ಬಳು ತೃತೀಯಲಿಂಗಿ ಎಂಬ ಆಘಾತಕಾರಿ ಸತ್ಯ ಬಯಲಿಗೆ ಬಂದಿದ್ದು, ಪತಿ ಪೊಲೀಸರ ಮೆಟ್ಟಿಲೇರಿರುವ ಘಟನೆ ಮಧ್ಯಪ್ರದೇಶದ ಶಾಜಾಪುರದಲ್ಲಿ ನಡೆದಿದೆ.

ಜೂನ್ 29 ರಂದು ನಡೆದ ವಿವಾಹದ ಬಳಿಕ ವಂಚನೆಗೊಳಗಾದ 32 ವರ್ಷದ ಯುವಕ ಕೊಟ್ವಾಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ವರನ ದೂರಿನ ಪ್ರಕಾರ, ಮದುವೆಯ ಮೊದಲ ರಾತ್ರಿಯಿಂದಲೇ ಸಂಗಾತಿಯು ದೈಹಿಕ ಸಂಬಂಧದಿಂದ ದೂರ ಸರಿಯಲು ಯತ್ನಿಸುತ್ತಿದ್ದಳು. ಆರಂಭದಲ್ಲಿ ಮುಟ್ಟು (Menstruation) ಎಂದು ನೆಪ ಹೇಳಿದ್ದ ವಧು, ಆನಂತರ ಹೊಟ್ಟೆನೋವು ಹಾಗೂ ಅನಾರೋಗ್ಯದ ಕಾರಣಗಳನ್ನು ನೀಡುತ್ತಾ ಕಾಲು ದೂಡುತ್ತಿದ್ದಳು. ಇದರಿಂದ ಮೊದಲಿನಿಂದಲೇ ಅನುಮಾನ ಮೂಡತೊಡಗಿತ್ತು.

ಮದುವೆಯಾದ 25 ದಿನಗಳ ಬಳಿಕ, ವರನ ಅತ್ತಿಗೆ (ಅಣ್ಣನ ಹೆಂಡತಿ) ಅಕಸ್ಮಾತ್ ಆಗಿ ರೂಮ್ ಒಳಗೆ ಹೋದಾಗ ಅಸಲಿ ಸತ್ಯ ಬೆಳಕಿಗೆ ಬಂದಿದೆ.

ನವವಧು ಶೇವಿಂಗ್ ಕ್ರೀಮ್ ಹಚ್ಚಿಕೊಂಡು ತನ್ನ ಮುಖದ ಗಡ್ಡವನ್ನು ಶೇವ್ ಮಾಡುತ್ತಿರುವುದನ್ನು ಅತ್ತಿಗೆ ರೆಡ್-ಹ್ಯಾಂಡ್ ಆಗಿ ಹಿಡಿದಿದ್ದಾರೆ. ಅಲ್ಲದೆ, ವಧುವಿನಲ್ಲಿ ಮಹಿಳೆಯರಿಗೆ ಇರದ ದೈಹಿಕ ಲಕ್ಷಣಗಳಿರುವುದನ್ನು ಕುಟುಂಬದವರು ಗಮನಿಸಿದ್ದಾರೆ.

ಈ ಮಹಾ ವಂಚನೆಯ ಬಗ್ಗೆ ಪ್ರಶ್ನಿಸಲು ವರನ ಕುಟುಂಬಸ್ಥರು ವಧುವಿನ ಮನೆಗೆ ಹೋದಾಗ, ವಧುವಿನ ಕಡೆಯವರು ವರ ಹಾಗೂ ಅವರ ಕುಟುಂಬದವರ ಮೇಲೆ ಹಲ್ಲೆ ನಡೆಸಿ, ಕೆಟ್ಟ ಪದಗಳಿಂದ ನಿಂದಿಸಿದ್ದಾರೆ ಎನ್ನಲಾಗಿದೆ.

ಸದ್ಯ ಕೊಟ್ವಾಲಿ ಪೊಲೀಸರು ವಧುವಿನ ಕುಟುಂಬದ ಐವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ವಧುವಿನ ಅಧಿಕೃತ ವೈದ್ಯಕೀಯ ತಪಾಸಣೆ (Medical Examination) ನಡೆಸಿದ ಬಳಿಕ ವಂಚನೆ (Cheating) ಪ್ರಕರಣದ ಅಡಿಯಲ್ಲಿ ಮುಂದಿನ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

"ರಾಜಕೀಯ ಭಿನ್ನಾಭಿಪ್ರಾಯ ಇರಲಿ ಆದರೆ, ಭಾಷೆ ಸಭ್ಯವಾಗಿರಲಿ": ಪ್ರಹ್ಲಾದ್ ಜೋಶಿ ಪರ ಕಿರಣ್ ರಿಜಿಜು ಬ್ಯಾಟಿಂಗ್, ರಾಹುಲ್ ಗಾಂಧಿ ವಿರುದ್ಧ ಕಿಡಿ

ಪ್ರಧಾನಿ ಮೋದಿ ವಿರುದ್ಧ ಅವಹೇಳನಕಾರಿ ಪೋಸ್ಟ್: ದೆಹಲಿ ಪೊಲೀಸರಿಂದ FIR ದಾಖಲು, ಸಾಮಾಜಿಕ ಜಾಲತಾಣ Xಗೆ ನೋಟಿಸ್ ಜಾರಿ..!

"ನಿನ್ನ ವಯಸ್ಸಿಗೆ ನಾನು ಎರಡು ರಾಷ್ಟ್ರ ಪ್ರಶಸ್ತಿ ಗೆದ್ದಿದ್ದೆ.. ನೀನು ನಿಷ್ಪ್ರಯೋಜಕ, ನಿರುದ್ಯೋಗಿ": ಸಿಜೆಪಿ ನಾಯಕ Saurav Dasಗೆ ಕಂಗನಾ ರಣಾವತ್ ತಿರುಗೇಟು

ಕಾವೇರಿ ಜಲ ವಿವಾದ: ಸರ್ವಪಕ್ಷ ಸಭೆ ಕರೆಯಲು ರಾಜ್ಯ ಸರ್ಕಾರ ನಿರ್ಧಾರ; ಇಂದು ರಾಜ್ಯಾದ್ಯಂತ ಪ್ರತಿಭಟನೆ, ಪ್ರತಿಭಟನಾಕಾರರು ವಶಕ್ಕೆ-Video

Video: 'POK ಪ್ರತಿಭಟನಾಕಾರರೂ ಭಾರತದಷ್ಟೇ ಶತ್ರುಗಳು'; 32 ಮಂದಿ ಹತ್ಯೆ ಸಮರ್ಥಿಸಿಕೊಂಡ ಪಾಕ್ ರಕ್ಷಣಾ ಸಚಿವ Khawaja Asif