ಮಮತಾ ಬ್ಯಾನರ್ಜಿ 
ದೇಶ

ಮಹಾರಾಷ್ಟ್ರದಲ್ಲಿ ಶಿವಸೇನೆಯಂತೆ ವಿಭಜನೆಯತ್ತ ಸಾಗುತ್ತಿದೆ TMC!

ಟಿಎಂಸಿ ಅನಿವಾರ್ಯವಾಗಿ ವಿಭಜನೆಯಾಗುತ್ತಿದೆ ಎಂದು ಪ್ರತಿಪಾದಿಸಿದ ಮಣಿಕ್ತಾಲಾದ ಬಿಜೆಪಿ ಶಾಸಕ, ಅದು ಅಂತಿಮವಾಗಿ ರಾಜ್ಯ ರಾಜಕೀಯದಿಂದಲೇ ಕಣ್ಮರೆಯಾಗುತ್ತದೆ ಎಂದು ಹೇಳಿದ್ದಾರೆ.

ಕೋಲ್ಕತ್ತಾ: ಇತ್ತೀಚಿಗೆ ನಡೆದ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಹೀನಾಯ ಸೋಲು ಅನುಭವಿಸಿರುವ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಇದೀಗ ಮಹಾರಾಷ್ಟ್ರದಲ್ಲಿ ಶಿವಸೇನೆಯಂತೆ ವಿಭಜನೆಯತ್ತ ಸಾಗುತ್ತಿದೆ.

ವಿರೋಧ ಪಕ್ಷ ಟಿಎಂಸಿ, ಮಹಾರಾಷ್ಟ್ರದಲ್ಲಿ ಶಿವಸೇನೆಯಂತೆಯೇ ವಿಭಜನೆಯತ್ತ ಸಾಗುತ್ತಿದೆ ಎಂದು ಮಂಗಳವಾರ ಪಶ್ಚಿಮ ಬಂಗಾಳ ಸಚಿವ ತಪಸ್ ರಾಯ್ ಅವರು ಹೇಳಿದ್ದಾರೆ.

ವಿಧಾನಸಭೆಯ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ರಾಯ್, ಟಿಎಂಸಿ, ರಾಜಕೀಯ ಹಿನ್ನೆಲೆ ಹೊಂದಿರದ ಜನರಿಗೆ ಅವಕಾಶ ನೀಡಿದೆ ಮತ್ತು ಈಗ ಆಂತರಿಕ ವಿರೋಧಾಭಾಸಗಳು ಹೊರಹೊಮ್ಮುತ್ತಿವೆ ಎಂದು ಹೇಳಿದ್ದಾರೆ.

ಟಿಎಂಸಿ ಅನಿವಾರ್ಯವಾಗಿ ವಿಭಜನೆಯಾಗುತ್ತಿದೆ ಎಂದು ಪ್ರತಿಪಾದಿಸಿದ ಮಣಿಕ್ತಾಲಾದ ಬಿಜೆಪಿ ಶಾಸಕ, ಅದು ಅಂತಿಮವಾಗಿ ರಾಜ್ಯ ರಾಜಕೀಯದಿಂದಲೇ ಕಣ್ಮರೆಯಾಗುತ್ತದೆ ಎಂದು ಹೇಳಿದ್ದಾರೆ.

"ಟಿಎಂಸಿಯ ಹಲವು ನಾಯಕರು ಮತ್ತು ಶಾಸಕರಲ್ಲಿ ಅತೃಪ್ತಿ ಹೆಚ್ಚುತ್ತಿದೆ. ಪಕ್ಷವು ವಿಭಜನೆಯತ್ತ ಸಾಗುತ್ತಿದೆ ಎಂದು ಈ ಬೆಳವಣಿಗೆಗಳು ಸೂಚಿಸುತ್ತಿವೆ. ಮಹಾರಾಷ್ಟ್ರದಲ್ಲಿ ನಡೆದಂತೆಯೇ ಇಲ್ಲಿಯೂ ನಡೆಯುತ್ತಿದೆ" ಎಂದು 2024ರಲ್ಲಿ ಟಿಎಂಸಿಯಿಂದ ಬಿಜೆಪಿ ಸೇರ್ಪಡೆಯಾದ ಹಿರಿಯ ನಾಯಕ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಭವಿಷ್ಯ ಕಾಣುತ್ತಿಲ್ಲ'; ಬಿಜೆಪಿ ನಾಯಕತ್ವ ಭೇಟಿ ಮಾಡಿದ Annamalai; ಸ್ವತಂತ್ರ ರಾಜಕೀಯ ಪಯಣದ ಸುಳಿವು!

ಸ್ವಾಮೀಜಿ, ಫಾದರ್, ಮೌಲ್ವಿ ಸಮ್ಮುಖದಲ್ಲಿ ಮುಖ್ಯಮಂತ್ರಿಯಾಗಿ ಡಿಕೆಶಿ ಪ್ರಮಾಣವಚನ; ರಾಜ್ಯದ ಇತಿಹಾಸದಲ್ಲೇ ಮೊದಲು!

‘Kala Hiran’ ತಂಡಕ್ಕೆ ಲೀಗಲ್ ನೋಟಿಸ್ ಕಳುಹಿಸಿದ ಸಲ್ಮಾನ್ ಖಾನ್ ! ಬೆದರಿಸುವ ತಂತ್ರ ಎಂದ ನಿರ್ಮಾಪಕರು ಏನಿದು ವಿವಾದ?

ಮಹಾರಾಷ್ಟ್ರ: ಪಶ್ಚಾತ್ತಾಪ ಪಡುತ್ತಿದ್ದರೆ ಉದ್ಧವ್ ಠಾಕ್ರೆ ನೇತೃತ್ವದ ಪಕ್ಷಕ್ಕೆ ಮರಳಿ: ಶಿಂಧೆ ಬಣದ ನಾಯಕರಿಗೆ ರಾವತ್ ಆಹ್ವಾನ!

ಇನ್ನೂ 114 ರಾಫೆಲ್ ಜೆಟ್ ಖರೀದಿಗೆ ಭಾರತ ಮುಂದು; ಫ್ರಾನ್ಸ್ ಗೆ ವಾಯುಪಡೆ ಮುಖ್ಯಸ್ಥರ ಭೇಟಿ

SCROLL FOR NEXT