ಕ್ಯಾಪ್ಟನ್ ಭರತ್ ಭಾರಧ್ವಾಜ್ ತಮ್ಮ ಗೆಳತಿ ಆರೂಷಿ ಜೊತೆ 
ದೇಶ

'ಇಂತಹ ವರ್ತನೆ ಸರಿಯಲ್ಲ': ಪಾಸಿಂಗ್ ಔಟ್ ಪೆರೇಡ್ ಬಳಿಕ ಗೆಳತಿಗೆ ಪ್ರೇಮ ನಿವೇದನೆ ಮಾಡಿದ ಸೇನಾ ಪೈಲಟ್‌ ವಿರುದ್ಧ ಟೀಕೆ; Video

ವರದಿಗಳ ಪ್ರಕಾರ, ಭಾರತೀಯ ಸೇನೆ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಸಂಬಂಧಿತ ಅಧಿಕಾರಿಯಿಂದ ವಿವರಣೆ ಕೇಳುವ ಸಾಧ್ಯತೆ ಇದೆ.

ನಾಸಿಕ್: ಮಹಾರಾಷ್ಟ್ರದ ನಾಸಿಕ್‌ನಲ್ಲಿ ಮೊನ್ನೆ ಮಂಗಳವಾರ ನಡೆದ ಪಾಸಿಂಗ್ ಔಟ್ ಪೆರೇಡ್ ಬಳಿಕ ಹೊಸದಾಗಿ ನಿಯೋಜನೆಗೊಂಡ ಸೇನಾ ಪೈಲಟ್ ತನ್ನ ಪ್ರೇಯಸಿಗೆ ವಿವಾಹ ಪ್ರಸ್ತಾಪ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆದರೆ ಈ ವಿಡಿಯೋ ಮತ್ತು ಆ ದಿನದ ಛಾಯಾಚಿತ್ರಗಳು ಸೇನಾ ನಿಯಮಾವಳಿಗಳ ಉಲ್ಲಂಘನೆಯ ಬಗ್ಗೆ ಆನ್‌ಲೈನ್‌ನಲ್ಲಿ ಚರ್ಚೆಗೆ ಕಾರಣವಾಗಿವೆ.

ವರದಿಗಳ ಪ್ರಕಾರ, ಭಾರತೀಯ ಸೇನೆ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಸಂಬಂಧಿತ ಅಧಿಕಾರಿಯಿಂದ ವಿವರಣೆ ಕೇಳುವ ಸಾಧ್ಯತೆ ಇದೆ.

ಮಾಹಿತಿಯಂತೆ, ಸೇನೆಯಿಂದ ನಿಗದಿಪಡಿಸಲಾದ ಕೆಲವು ಶಿಸ್ತು ಮತ್ತು ಶಿಷ್ಠಾಚಾರಗಳನ್ನು ಈ ಘಟನೆ ಉಲ್ಲಂಘಿಸಿರಬಹುದು ಎಂದು ಹೇಳಲಾಗುತ್ತಿದೆ. ಕ್ಯಾಪ್ಟನ್ ಭರತ್ ಭಾರಧ್ವಾಜ್ ಅವರು ಸೇನಾ ಸಮವಸ್ತ್ರ ಧರಿಸಿ, ಪಾಸಿಂಗ್ ಔಟ್ ಪೆರೇಡ್ ಮಾದರಿಯ ಅಧಿಕೃತ ಕಾರ್ಯಕ್ರಮದ ಸಂದರ್ಭದಲ್ಲಿ, ಸೇನಾ ಉಪಕರಣಗಳ ಎದುರು ತಮ್ಮ ಗೆಳತಿಗೆ ಪ್ರಪೋಸ್ ಮಾಡುವ ಮೂಲಕ ಸೇನಾ ಸಂಪ್ರದಾಯ ಮತ್ತು ಶಿಸ್ತಿಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಸೇನಾ ಮೂಲಗಳ ಪ್ರಕಾರ, ಸಮಯ, ಸ್ಥಳ ಮತ್ತು ಸಂಪ್ರದಾಯದ ದೃಷ್ಟಿಯಿಂದ ಈ ಕೃತ್ಯ ಸೂಕ್ತವಲ್ಲ ಎಂದು ಸೇನೆ ಅಸಮಾಧಾನ ವ್ಯಕ್ತಪಡಿಸಿದೆ.

ಹೇಗಿತ್ತು ಪ್ರಪೋಸಲ್?

ನಾಸಿಕ್‌ನ ಕಾಂಬಾಟ್ ಆರ್ಮಿ ಏವಿಯೇಷನ್ ಟ್ರೈನಿಂಗ್ ಸ್ಕೂಲ್ (CAATS) ನಲ್ಲಿ ಹಾರಾಟ ತರಬೇತಿ ಪೂರ್ಣಗೊಳಿಸಿದ ಬಳಿಕ ಭಾರತೀಯ ಸೇನಾ ಏವಿಯೇಷನ್ ವಿಭಾಗದ ಕ್ಯಾಪ್ಟನ್ ಭರತ್ ಭಾರಧ್ವಾಜ್ ತಮ್ಮ ಗೆಳತಿ ಆರೂಷಿ ಅವರಿಗೆ ಅಚ್ಚರಿ ಮೂಡಿಸುವ ರೀತಿಯಲ್ಲಿ ವಿವಾಹ ಪ್ರಸ್ತಾಪ ಮಾಡಿದರು.

ವಿಧಿವಿಧಾನಗಳಿಗೆ ಅನುಗುಣವಾದ ಸೇನಾ ಸಮವಸ್ತ್ರ ಧರಿಸಿದ್ದ ಅವರು ವಿಮಾನ ನಿಲ್ದಾಣದ ಟಾರ್ಮ್ಯಾಕ್ ಪ್ರದೇಶಕ್ಕೆ ನಡೆದು ಬಂದು, ಆರೂಷಿಯ ಮುಂದೆ ಮಂಡಿಯೂರಿ ಕುಳಿತು ಉಂಗುರ ಹಾಕಿ ವಿವಾಹ ಪ್ರಸ್ತಾಪ ಮಾಡಿದರು. ಈ ದೃಶ್ಯವನ್ನು ಅಲ್ಲಿದ್ದವರು ಚಿತ್ರೀಕರಿಸಿದ್ದು, ನಂತರ ಅದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಯಿತು.

ಕಾಂಬಾಟ್ ಆರ್ಮಿ ಏವಿಯೇಷನ್ ಟ್ರೈನಿಂಗ್ ಸ್ಕೂಲ್

ನಾಸಿಕ್‌ನಲ್ಲಿರುವ ಕಾಂಬಾಟ್ ಆರ್ಮಿ ಏವಿಯೇಷನ್ ಟ್ರೈನಿಂಗ್ ಸ್ಕೂಲ್ (CAATS) ಭಾರತೀಯ ಸೇನೆಯ ಪ್ರಮುಖ ಹಾರಾಟ ತರಬೇತಿ ಸಂಸ್ಥೆಗಳಲ್ಲಿ ಒಂದಾಗಿದೆ. ಈ ಸಂಸ್ಥೆಯು ಸೇನಾ ಅಧಿಕಾರಿಗಳಿಗೆ ವಿಮಾನಯಾನ ಕಾರ್ಯಾಚರಣೆಗಳು ಹಾಗೂ ಯುದ್ಧ ಹೆಲಿಕಾಪ್ಟರ್ ಕಾರ್ಯಾಚರಣೆಗಳಿಗೆ ಅಗತ್ಯವಾದ ಉನ್ನತ ಮಟ್ಟದ ತರಬೇತಿಯನ್ನು ನೀಡುತ್ತದೆ.

ಸೇನಾ ಏವಿಯೇಷನ್ ಪೈಲಟ್‌ಗಳಾಗಲು ಅಧಿಕಾರಿಗಳು ಕಠಿಣ ತರಬೇತಿಯನ್ನು ಪೂರ್ಣಗೊಳಿಸಬೇಕಾಗುತ್ತದೆ. ಆದ್ದರಿಂದ ಈ ತರಬೇತಿಯಿಂದ ಪದವಿ ಪಡೆಯುವುದು ಸೇನಾ ವೃತ್ತಿಜೀವನದ ಮಹತ್ವದ ಮೈಲಿಗಲ್ಲು ಎಂದು ಪರಿಗಣಿಸಲಾಗುತ್ತದೆ.

ಈ ಘಟನೆಯು ಸಾಮಾಜಿಕ ಜಾಲತಾಣಗಳಲ್ಲಿ ಕೆಲವರಿಂದ ಪ್ರಶಂಸೆಗೆ ಪಾತ್ರವಾಗಿದ್ದರೆ, ಮತ್ತೊಂದೆಡೆ ಸೇನಾ ಶಿಸ್ತು ಮತ್ತು ಸಂಪ್ರದಾಯಗಳ ದೃಷ್ಟಿಯಿಂದ ಇದು ಸೂಕ್ತವೇ ಎಂಬ ಪ್ರಶ್ನೆಯನ್ನೂ ಹುಟ್ಟುಹಾಕಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಜಾತಿ, ಧರ್ಮ ಯಾವುದೇ ಪ್ರಭಾವಕ್ಕೂ ಮಣಿಯಬೇಡಿ: ಪಾರದರ್ಶಕವಾಗಿ ಕೆಲಸ ಮಾಡುವಂತೆ ಅಧಿಕಾರಿಗಳಿಗೆ ಡಿಕೆಶಿ ಸೂಚನೆ​​

'ನಾನೇರಿದೆತ್ತರಕ್ಕೆ ನೀನೇರಬಲ್ಲೆಯಾ'? ನಿರ್ಗಮನಕ್ಕೂ ಉನ್ನತ ಹುದ್ದೆ ಅಲಂಕರಿಸಿ ವಿರೋಧಿಗಳಿಗೆ ಸೆಡ್ಡು ಹೊಡೆದ 'ರಾಜನೀತಿಜ್ಞ' ಸಿದ್ದರಾಮಯ್ಯ!

ಹಿಜ್ಬುಲ್ಲಾಗೆ ಕಟ್ಟುನಿಟ್ಟಿನ ಕಡಿವಾಣ: ಮಧ್ಯಪ್ರಾಚ್ಯದಲ್ಲಿ ಶಾಂತಿ ಸ್ಥಾಪನೆಗೆ ಇಸ್ರೇಲ್-ಲೆಬನಾನ್ ಮಹತ್ವದ ಒಪ್ಪಂದ, ಅಮೆರಿಕಾ ಮಧ್ಯಸ್ಥಿಕೆ..!

ಮುಂದಿನ ಶತಮಾನ ಯಾರಿಗೆ ಸೇರಿದ್ದು? ನಿರ್ಧರಿಸುವುದು R&D ಮೇಲಿನ ಹೂಡಿಕೆ! (ಹಣಕ್ಲಾಸು)

ಕುಸ್ತಿಪಟು ವಿನೇಶ್ ಫೋಗಟ್ ಪ್ರಕರಣ; WFIಗೆ ಭಾರೀ ಹಿನ್ನೆಡೆ, ಅರ್ಜಿ ಅನಗತ್ಯ ಎಂದು ವಜಾಗೊಳಿಸಿದ ಸುಪ್ರೀಂ ಕೋರ್ಟ್..!

SCROLL FOR NEXT