ದೇಶ

ನೈರುತ್ಯ ಮುಂಗಾರು ಇಂದು ಕೇರಳ ಪ್ರವೇಶ; ಈ ವರ್ಷ ಮಳೆ ಪ್ರಮಾಣ ಸಾಮಾನ್ಯಕ್ಕಿಂತ ಕಡಿಮೆ: IMD

ಈ ಹಿಂದೆ ಹವಾಮಾನ ಇಲಾಖೆ ಮೇ 26ರಂದು ಮುಂಗಾರು ಕೇರಳವನ್ನು ತಲುಪಲಿದೆ ಎಂದು ಅಂದಾಜಿಸಿತ್ತು. ಆದರೆ ವಿವಿಧ ಹವಾಮಾನ ಕಾರಣಗಳಿಂದ ಅದರ ಆಗಮನದಲ್ಲಿ ವಿಳಂಬ ಉಂಟಾಯಿತು.

ನವದೆಹಲಿ: ನೈಋತ್ಯ ಮುಂಗಾರು ಇಂದು ಗುರುವಾರ ಕೇರಳವನ್ನು ಪ್ರವೇಶಿಸಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಘೋಷಿಸಿದೆ. ಇದರೊಂದಿಗೆ ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ಸಾಗುವ ನಾಲ್ಕು ತಿಂಗಳ ನೈಋತ್ಯ ಮುಂಗಾರು ಋತುವಿಗೆ ಅಧಿಕೃತ ಚಾಲನೆ ದೊರೆತಿದೆ. ಸಾಮಾನ್ಯವಾಗಿ ಮುಂಗಾರು ಜೂನ್ 1ರ ಸುಮಾರಿಗೆ ಕೇರಳ ತಲುಪುತ್ತದೆ.

ಐಎಂಡಿ ಪ್ರಕಟಣೆಯ ಪ್ರಕಾರ, ನೈಋತ್ಯ ಮುಂಗಾರು ಅರಬ್ಬಿ ಸಮುದ್ರದ ನೈಋತ್ಯ ಮತ್ತು ಆಗ್ನೇಯ ಭಾಗಗಳ ಉಳಿದ ಪ್ರದೇಶಗಳಿಗೆ, ಪಶ್ಚಿಮ-ಮಧ್ಯ ಮತ್ತು ಪೂರ್ವ-ಮಧ್ಯ ಅರಬ್ಬಿ ಸಮುದ್ರದ ಕೆಲವು ಭಾಗಗಳಿಗೆ, ಲಕ್ಷದ್ವೀಪ ದ್ವೀಪಸಮೂಹದ ಸಂಪೂರ್ಣ ಪ್ರದೇಶಕ್ಕೆ, ಕೇರಳ, ಕರ್ನಾಟಕ ಹಾಗೂ ತಮಿಳುನಾಡಿನ ಕೆಲವು ಭಾಗಗಳಿಗೆ, ಕನ್ಯಾಕುಮಾರಿ (Cape Comorin) ಸುತ್ತಮುತ್ತಲಿನ ಸಮುದ್ರ ಪ್ರದೇಶಗಳಿಗೆ, ಉಳಿದ ಭಾಗಗಳಿಗೆ ಹಾಗೂ ಬಂಗಾಳ ಕೊಲ್ಲಿಯ ಆಗ್ನೇಯ, ನೈಋತ್ಯ, ಪಶ್ಚಿಮ-ಮಧ್ಯ, ಪೂರ್ವ-ಮಧ್ಯ ಮತ್ತು ಈಶಾನ್ಯ ಭಾಗಗಳ ಇನ್ನಷ್ಟು ಪ್ರದೇಶಗಳಿಗೆ ವಿಸ್ತರಿಸಿದೆ.

ಈ ಹಿಂದೆ ಹವಾಮಾನ ಇಲಾಖೆ ಮೇ 26ರಂದು ಮುಂಗಾರು ಕೇರಳವನ್ನು ತಲುಪಲಿದೆ ಎಂದು ಅಂದಾಜಿಸಿತ್ತು. ಆದರೆ ವಿವಿಧ ಹವಾಮಾನ ಕಾರಣಗಳಿಂದ ಅದರ ಆಗಮನದಲ್ಲಿ ವಿಳಂಬ ಉಂಟಾಯಿತು.

ಈ ವರ್ಷ ಮಳೆ ಪ್ರಮಾಣ ಸಾಮಾನ್ಯಕ್ಕಿಂತ ಕಡಿಮೆ

ಕಳೆದ ವಾರ ಐಎಂಡಿ ತನ್ನ ಋತುಮಾನದ ಮಳೆ ಮುನ್ಸೂಚನೆಯನ್ನು ಪರಿಷ್ಕರಿಸಿದ್ದು, ಈ ವರ್ಷದ ಮಳೆ ಪ್ರಮಾಣ ಸಾಮಾನ್ಯಕ್ಕಿಂತ ಕಡಿಮೆ ಇರಬಹುದು ಎಂದು ತಿಳಿಸಿತ್ತು.

ದೇಶಾದ್ಯಂತ ಈ ವರ್ಷ ಮಳೆಯ ಪ್ರಮಾಣ ದೀರ್ಘಾವಧಿ ಸರಾಸರಿ (Long Period Average - LPA) ಯ ಶೇಕಡಾ 90ರಷ್ಟು ಇರಲಿದೆ ಎಂದು ಇಲಾಖೆ ಅಂದಾಜಿಸಿದೆ.

LPA ಎಂದರೆ ಒಂದು ನಿರ್ದಿಷ್ಟ ಪ್ರದೇಶದಲ್ಲಿ 30 ರಿಂದ 50 ವರ್ಷಗಳಂತಹ ದೀರ್ಘ ಅವಧಿಯಲ್ಲಿ ದಾಖಲಾಗಿರುವ ಮಳೆಯ ಸರಾಸರಿ ಪ್ರಮಾಣ. 1971ರಿಂದ 2020ರವರೆಗಿನ ಅಂಕಿಅಂಶಗಳ ಆಧಾರದ ಮೇಲೆ ದೇಶದ ಒಟ್ಟಾರೆ ಋತುಮಾನದ ಮಳೆಯ ದೀರ್ಘಾವಧಿ ಸರಾಸರಿ 87 ಸೆಂಟಿಮೀಟರ್ ಆಗಿದೆ.

ಮುಂಗಾರು ಅವಧಿಯಲ್ಲಿ ಮಳೆಯ ಪ್ರಮಾಣ ಎಲ್ ಪಿಎಯ ಶೇಕಡಾ 90ಕ್ಕಿಂತ ಕಡಿಮೆಯಾದರೆ, ಅದನ್ನು ಹವಾಮಾನ ಇಲಾಖೆ ಕೊರತೆಯ ಮಳೆ (Deficient Rainfall) ಎಂದು ವರ್ಗೀಕರಿಸುತ್ತದೆ.

ಎಲ್ ನಿನೋ ಪ್ರಭಾವದ ಆತಂಕ

ಈ ವರ್ಷ ಮಳೆ ಪ್ರಮಾಣ ಕಡಿಮೆಯಾಗುವ ಸಾಧ್ಯತೆಗೆ ಪ್ರಮುಖ ಕಾರಣಗಳಲ್ಲಿ ಒಂದಾಗಿ ಎಲ್ ನಿನೋ (El Niño) ಪರಿಸ್ಥಿತಿಗಳ ಬೆಳವಣಿಗೆಯನ್ನು ಪರಿಗಣಿಸಲಾಗಿದೆ. ಎಲ್ ನಿನೋ ಸಾಮಾನ್ಯವಾಗಿ ಭಾರತದಲ್ಲಿ ಮುಂಗಾರು ಮಳೆಯ ಪ್ರಮಾಣ ಕಡಿಮೆಯಾಗಲು ಕಾರಣವಾಗುತ್ತದೆ.

ಐಎಂಡಿ ಪ್ರಕಾರ, ಜೂನ್ ತಿಂಗಳಲ್ಲಿ ಎಲ್ ನಿನೋ ಪರಿಣಾಮ ದುರ್ಬಲವಾಗಿರುವ ಸಾಧ್ಯತೆ ಇದ್ದರೂ, ಸೆಪ್ಟೆಂಬರ್ ವೇಳೆಗೆ ಅದು ಮಧ್ಯಮ ಅಥವಾ ಬಲಿಷ್ಠ ಮಟ್ಟಕ್ಕೆ ತಲುಪುವ ಸಾಧ್ಯತೆ ಇದೆ.

ಹೀಗಾಗಿ, ಈ ವರ್ಷದ ಮುಂಗಾರು ಋತುವಿನ ಪ್ರಗತಿ ಹಾಗೂ ಎಲ್ ನಿನೋ ಬೆಳವಣಿಗೆಗಳ ಮೇಲೆ ಕೃಷಿ ಮತ್ತು ಜಲಸಂಪನ್ಮೂಲ ಕ್ಷೇತ್ರಗಳು ನಿಕಟ ನಿಗಾ ಇಡುವ ಅಗತ್ಯವಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಹಿರಿಯ ನಟ ಅನಂತ್ ನಾಗ್ ಗೆ ಪ್ರತಿಷ್ಠಿತ 'ದಾದಾ ಸಾಹೇಬ್ ಫಾಲ್ಕೆ' ಪ್ರಶಸ್ತಿ ಪ್ರಕಟ! ಪ್ರಧಾನಿ ಮೋದಿ, ಸಿಎಂ ಡಿಕೆಶಿ ಅಭಿನಂದನೆ

ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ, ಟಿ20 ಸರಣಿಗೆ ಭಾರತ ತಂಡ ಪ್ರಕಟ: ಹಾರ್ದಿಕ್, ಪಂತ್'ಗೆ ಬಿಗ್ ಶಾಕ್; ವಿರಾಟ್, ರೋಹಿತ್​ ಶರ್ಮಾಗೆ ಚಾನ್ಸ್

‘ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಬಂದ್ರೂ ನಂಬದ ಅನಂತ್ ನಾಗ್; ‘ಸುಳ್ಳು ಸುದ್ದಿ’ ಎಂದು ನಕ್ಕಿ ಮಲಗಿದ್ರು’

CBFC ಪುನಾರಚನೆ: ಸುನಿಲ್ ಶೆಟ್ಟಿ, ಪ್ರೀತಿ ಜಿಂಟಾ, ರಿಕಿ ಕೇಜ್ ಸೇರಿದಂತೆ 18 ಸದಸ್ಯರ ಆಯ್ಕೆ!

ಬಿಸಿಸಿಐನಿಂದ WPL 2027ರ ವೇಳಾಪಟ್ಟಿ ಪ್ರಕಟ: ಇದೇ ಅಕ್ಟೋಬರ್‌ನಲ್ಲಿ ಹರಾಜು ಪ್ರಕ್ರಿಯೆ