ಅಸಾದುದ್ದೀನ್ ಓವೈಸಿ 
ದೇಶ

ರಾಜಸ್ಥಾನದ ಗಡಿ ಜಿಲ್ಲೆಗಳಲ್ಲಿ ಮಸೀದಿಗಳ ಧ್ವಂಸವನ್ನು ನಿಲ್ಲಿಸುವಂತೆ ಅಮಿತ್ ಶಾಗೆ ಓವೈಸಿ ಒತ್ತಾಯ!

ರಾಜಸ್ಥಾನದ ಗಡಿ ಜಿಲ್ಲೆಗಳಾದ ಜೈಸಲ್ಮೇರ್, ಬಾರ್ಮರ್ ಮತ್ತು ಬಿಕಾನೇರ್‌ಗಳಲ್ಲಿನ ಧಾರ್ಮಿಕ ಸ್ಥಳಗಳ ಮೇಲೆ ಬುಲ್ಡೋಜರ್ ಮೂಲಕ ದಾಳಿ ನಡೆಸಿರುವುದು ರಾಜಕೀಯ ಕೋಲಾಹಲಕ್ಕೆ ಕಾರಣವಾಗಿದೆ.

ರಾಜಸ್ಥಾನದ ಗಡಿ ಜಿಲ್ಲೆಗಳಾದ ಜೈಸಲ್ಮೇರ್, ಬಾರ್ಮರ್ ಮತ್ತು ಬಿಕಾನೇರ್‌ಗಳಲ್ಲಿನ ಧಾರ್ಮಿಕ ಸ್ಥಳಗಳ ಮೇಲೆ ಬುಲ್ಡೋಜರ್ ಮೂಲಕ ದಾಳಿ ನಡೆಸಿರುವುದು ರಾಜಕೀಯ ಕೋಲಾಹಲಕ್ಕೆ ಕಾರಣವಾಗಿದೆ. ಮುಸ್ಲಿಂ ಧಾರ್ಮಿಕ ರಚನೆಗಳ ಗುರಿಯಾಗಿರಿಸಿಕೊಂಡು ನಡೆಸಲಾಗುತ್ತಿರುವ ಧ್ವಂಸ ಕಾರ್ಯವನ್ನು ನಿಲ್ಲಿಸಲು AIMIM ಅಧ್ಯಕ್ಷ ಅಸಾದುದ್ದೀನ್ ಓವೈಸಿ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಒತ್ತಾಯಿಸಿದರು.

ಹೈದರಾಬಾದ್ ಸಂಸದರು AIMIM ನ ಬಿಕಾನೇರ್ ಜಿಲ್ಲಾಧ್ಯಕ್ಷ ಶಫಿ ಜಮೀಲ್ ಖಾಸ್ಮಿ ಜೊತೆ ಮಾತನಾಡಿದ್ದು, ಬಿಕಾನೇರ್‌ನಲ್ಲಿ ನಾಲ್ಕು ಮಸೀದಿಗಳು ಮತ್ತು ಫಲೋಡಿ, ಜೈಸಲ್ಮೇರ್ ಮತ್ತು ಬಾರ್ಮರ್‌ನಲ್ಲಿರುವ ಒಂಬತ್ತು ಮಸೀದಿಗಳು ಮತ್ತು ದರ್ಗಾಗಳನ್ನು ಈಗಾಗಲೇ ಕೆಡವಲಾಗಿದೆ. ಈ ಬಗ್ಗೆ X ನಲ್ಲಿ ಪೋಸ್ಟ್ ಮಾಡಿದ ಓವೈಸಿ, ಅಧಿಕಾರಿಗಳು ಮುಸ್ಲಿಂ ಧಾರ್ಮಿಕ ಸ್ಥಳಗಳನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ಇನ್ನೂ ಅನೇಕ ಧಾರ್ಮಿಕ ಸ್ಥಳಗಳನ್ನು ಇದೇ ರೀತಿ ಕೆಡವಲಾಗುತ್ತದೆ ಎಂದರು. ನೂರಾರು ಇತರ ಧಾರ್ಮಿಕ ಸ್ಥಳಗಳಿಗೆ ನೋಟಿಸ್ ನೀಡಲಾಗಿದೆ ಎಂದು ವರದಿಯಾಗಿದೆ. ಈ ಧ್ವಂಸಗಳನ್ನು ರಾಷ್ಟ್ರೀಯ ಭದ್ರತಾ ಆಧಾರದ ಮೇಲೆ ಸಮರ್ಥಿಸಲಾಗುತ್ತಿದೆ. ಆದಾಗ್ಯೂ, ಈ ಪ್ರದೇಶಗಳಲ್ಲಿನ ಯಾರೂ ಅಂತಹ ಯಾವುದೇ ಚಟುವಟಿಕೆಗಳಲ್ಲಿ ಭಾಗಿಯಾಗಿಲ್ಲ. ಮುಸ್ಲಿಂ ಪೂಜಾ ಸ್ಥಳಗಳನ್ನು ಮಾತ್ರ ಗುರಿಯಾಗಿಸಲಾಗುತ್ತಿದೆ ಎಂದು ಓವೈಸಿ ಆರೋಪಿಸಿದ್ದಾರೆ.

ಕಾಂಗ್ರೆಸ್ ಕಿಡಿ

ರಾಜಸ್ಥಾನ ಕಾಂಗ್ರೆಸ್ ಅಲ್ಪಸಂಖ್ಯಾತ ವಿಭಾಗದ ರಾಜ್ಯ ಅಧ್ಯಕ್ಷ ಎಂ.ಡಿ. ಚೋಪ್ದರ್ ಈ ಕ್ರಮವನ್ನು ತೀವ್ರವಾಗಿ ಖಂಡಿಸಿದರು. ಇದು ಸಂವಿಧಾನ ಮತ್ತು ನಾಗರಿಕರ ನಂಬಿಕೆಯ ಮೇಲಿನ ಗಂಭೀರ ದಾಳಿ ಎಂದು ಕರೆದರು. ಗೃಹ ಸಚಿವ ಅಮಿತ್ ಶಾ ಅವರ ಭೇಟಿಯ ನಂತರ ಹಳೆಯ ಮಸೀದಿಗಳು, ಮದರಸಾಗಳು ಮತ್ತು ದರ್ಗಾಗಳನ್ನು ಇದ್ದಕ್ಕಿದ್ದಂತೆ ಗುರಿಯಾಗಿಸಲಾಗುತ್ತಿದೆ ಎಂದು ಅವರು ಆರೋಪಿಸಿದರು. 1965 ಮತ್ತು 1971 ರ ಯುದ್ಧಗಳಲ್ಲಿ ಈ ಗಡಿ ಪ್ರದೇಶಗಳಲ್ಲಿನ ಸಮಾಜದ ಪ್ರತಿಯೊಂದು ವರ್ಗವು ಭಾರತೀಯ ಸೇನೆಯೊಂದಿಗೆ ದೇಶವನ್ನು ರಕ್ಷಿಸಿತು ಎಂದು ಎಂ.ಡಿ. ಚೋಪ್ದರ್ ನೆನಪಿಸಿಕೊಂಡರು. ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ಈ ಏಕಪಕ್ಷೀಯ ಕ್ರಮವನ್ನು ತಕ್ಷಣವೇ ನಿಲ್ಲಿಸಬೇಕೆಂದು ಅವರು ಒತ್ತಾಯಿಸಿದರು ಮತ್ತು ಕಾಂಗ್ರೆಸ್ ಈ ದೌರ್ಜನ್ಯದ ವಿರುದ್ಧ ಒಗ್ಗಟ್ಟಿನಿಂದ ಹೋರಾಡುತ್ತದೆ ಮತ್ತು ಥಾರ್‌ನ ಸಹೋದರತ್ವಕ್ಕೆ ಹಾನಿಯಾಗಲು ಬಿಡುವುದಿಲ್ಲ ಎಂದು ಸ್ಪಷ್ಟವಾಗಿ ಎಚ್ಚರಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಾಮನ ಹೆಸರಿನಲ್ಲಿ ಲೂಟಿ: ಸುಮಾರು 5,000 ಕೋಟಿ ರೂ. ಹಣ ದುರ್ಬಳಕೆ, ಬಿಜೆಪಿ ವಿರುದ್ಧ ಖರ್ಗೆ ಕಿಡಿ!

ಅತ್ತ ಸ್ವಿಟ್ಜರ್ ಲ್ಯಾಂಡ್ ನಲ್ಲಿ ಇರಾನ್- ಅಮೆರಿಕ ಮಾತುಕತೆ; ಇತ್ತ ಮತ್ತೊಮ್ಮೆ ಕಠಿಣ ದಾಳಿಯ ಎಚ್ಚರಿಕೆ ನೀಡಿದ ಡೊನಾಲ್ಡ್ ಟ್ರಂಪ್

ಅವರಿಗೆ ಧೈರ್ಯವೇ ಇಲ್ಲ, ಪುಕ್ಕಲರು: RSS ವಿರುದ್ಧ ಬಿಕೆ ಹರಿಪ್ರಸಾದ್ ಕಿಡಿ

Tri Series Final: ವೈಭವ್ ಸೂರ್ಯವಂಶಿ ಸ್ಫೋಟಕ ಅರ್ಧಶತಕ; ಶ್ರೀಲಂಕಾ ಹುಟ್ಟಡಗಿಸಿ ಟ್ರೋಫಿಗೆ ಮುತ್ತಿಟ್ಟ ಭಾರತ!

ಗ್ರಾಹಕರನ್ನು ದಾರಿ ತಪ್ಪಿಸುವ"100%" ವಂಚನೆ ಜಾಹೀರಾತು: ಕಠಿಣ ಕ್ರಮಕ್ಕಿಳಿದ CCPA, ₹1 ಲಕ್ಷವರೆಗೆ ದಂಡ!