ಪ್ರಧಾನಿ ಮೋದಿ 
ದೇಶ

ನಕ್ಸಲ್ ಹಿಂಸಾಚಾರ ಉತ್ತುಂಗದಲ್ಲಿದ್ದಾಗ ಕಾಂಗ್ರೆಸ್ಸಿನವರಿಗೆ ಧೈರ್ಯವೇ ಇರಲಿಲ್ಲ- ಪ್ರಧಾನಿ ಮೋದಿ ವಾಗ್ದಾಳಿ

ರಿಪಬ್ಲಿಕ್ ಶೃಂಗಸಭೆ 2026" ಅನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಭಾರತವು ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಮಾತ್ರವಲ್ಲದೆ, ವಿಶ್ವಾಸಾರ್ಹ ಜಾಗತಿಕ ಶಕ್ತಿಯಾಗಿದೆ ಮತ್ತು ದೇಶವು ಮುಂದಿನ 1,000 ವರ್ಷಗಳ ಭವಿಷ್ಯವನ್ನು ರೂಪಿಸುತ್ತಿದೆ ಎಂದು ಹೇಳಿದರು.

ನವದೆಹಲಿ: ದಶಕಗಳ ನಕ್ಸಲ್ ಹಿಂಸಾಚಾರದ ಬಗ್ಗೆ ಕಾಂಗ್ರೆಸ್ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಸೋಮವಾರ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಈಗ ಸಂವಿಧಾನ ರಕ್ಷಕರು ಎಂದು ಹೇಳಿಕೊಳ್ಳುತ್ತಿರುವವರಿಗೆ ನಕ್ಸಲ್ ಹಿಂಸಾಚಾರ ಉತ್ತುಂಗದಲ್ಲಿದ್ದಾಗ ಧೈರ್ಯವೇ ಇರಲಿಲ್ಲ ಎಂದು ಹೇಳಿದ್ದಾರೆ.

ರಿಪಬ್ಲಿಕ್ ಶೃಂಗಸಭೆ 2026" ಅನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಭಾರತವು ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಮಾತ್ರವಲ್ಲದೆ, ವಿಶ್ವಾಸಾರ್ಹ ಜಾಗತಿಕ ಶಕ್ತಿಯಾಗಿದೆ ಮತ್ತು ದೇಶವು ಮುಂದಿನ 1,000 ವರ್ಷಗಳ ಭವಿಷ್ಯವನ್ನು ರೂಪಿಸುತ್ತಿದೆ ಎಂದು ಹೇಳಿದರು.

ಹಿಂದಿನ ಕಾಂಗ್ರೆಸ್ ಆಡಳಿತಗಳೊಂದಿಗೆ ತಮ್ಮ ಸರ್ಕಾರದ ವಿಧಾನವನ್ನು ವ್ಯತಿರಿಕ್ತವಾಗಿ ಹೇಳಿದ ಮೋದಿ, ನಕ್ಸಲ್ ಹಿಂಸಾಚಾರದಿಂದ ಹಿಂದುಳಿದಿದ್ದ ಪ್ರದೇಶಗಳು ಈಗ ಅಭಿವೃದ್ಧಿಯಾಗುತ್ತಿವೆ. ಎನ್‌ಡಿಎ ಸರ್ಕಾರವು ಅವುಗಳನ್ನು ಮಹತ್ವಾಕಾಂಕ್ಷೆಯ ಜಿಲ್ಲೆಗಳು ಮತ್ತು ಬ್ಲಾಕ್‌ಗಳಾಗಿ ಬದಲಾಯಿಸಿದ್ದು, ಅವು ಈಗ ಪ್ರಾದೇಶಿಕ ಅಭಿವೃದ್ಧಿಗೆ ಚಾಲನೆ ನೀಡುತ್ತಿವೆ ಎಂದರು.

ಒಂದು ಕಾಲದಲ್ಲಿ ನಕ್ಸಲ್ ಪೀಡಿತ ಪ್ರದೇಶದಲ್ಲಿ ಬಡತನವು ವ್ಯಾಪಕವಾಗಿತ್ತು. ಆದರೆ ಅಭಿವೃದ್ಧಿ ಪ್ರಯತ್ನಗಳು ಜೀವನ ಪರಿಸ್ಥಿತಿ ಸುಧಾರಿಸಲು ಸಹಾಯ ಮಾಡಿವೆ. ಮಹತ್ವಾಕಾಂಕ್ಷೆಯ ಜಿಲ್ಲೆಗಳು ಲಕ್ಷಾಂತರ ಜನರನ್ನು ಬಡತನದಿಂದ ಹೊರತರುವಲ್ಲಿ ಮತ್ತು ಹಿಂದೆ ನಕ್ಸಲಿಸಂನಿಂದ ಪ್ರಭಾವಿತವಾದ ಪ್ರದೇಶಗಳ ಅಭಿವೃದ್ಧಿಯಲ್ಲಿ ಗಣನೀಯ ಕೊಡುಗೆ ನೀಡಿವೆ ಎಂದು ಅವರು ಹೇಳಿದರು.

2004 ಮತ್ತು 2014 ರ ನಡುವೆ, ಮಾವೋವಾದಿ ಭಯೋತ್ಪಾದನೆಯಿಂದಾಗಿ 17,000 ಕ್ಕೂ ಹೆಚ್ಚು ಹಿಂಸಾತ್ಮಕ ಘಟನೆಗಳು ಸಂಭವಿಸಿವೆ ಮತ್ತು ಸುಮಾರು 7,000 ಜೀವಗಳು ಬಲಿಯಾಗಿವೆ. 2014 ರ ನಂತರ, ಪರಿಸ್ಥಿತಿಯನ್ನು ಬದಲಾಯಿಸಲು ನಾವು 'ನೇಷನ್ ಫಸ್ಟ್' ಎಂಬ ಸಂಕಲ್ಪದೊಂದಿಗೆ ಮುಂದುವರೆದಿದ್ದೇವೆ ಎಂದು ತಿಳಿಸಿದರು.

ಇಂದು, ದೇಶದಲ್ಲಿ ನಕ್ಸಲ್ ಚಟುವಟಿಕೆಯನ್ನು ಮಟ್ಟಹಾಕಿದ್ದೇವೆ. ಇಂದು ಸಂವಿಧಾನ ರಕ್ಷಕರು ಎಂದು ಹೇಳಿಕೊಳ್ಳುತ್ತಿರುವವರು ಕೈ ಆಗ ಸಂವಿಧಾನವನ್ನು ತೋರಿಸಲು ಸಹ ನಡುಗುತ್ತಿದ್ದವು ಎಂದು ಅವರು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬಿಡದಿ ಟೌನ್​​ಶಿಪ್ ಕದನ: HDK ಸವಾಲು ಸ್ವೀಕರಿಸಿದ CM; ಬೈರಮಂಗಲ ಬೇಡ, ವಿಧಾನಸೌಧಕ್ಕೆ ಬನ್ನಿ- ಡಿಕೆಶಿ ಪಂಥಾಹ್ವಾನ!

ಆಗಸ್ಟ್ 21ರವರೆಗೆ ಇರಾನ್ ತೈಲದ ಮೇಲಿನ ನಿರ್ಬಂಧ ಸ್ಥಗಿತಗೊಳಿಸಿದ ಅಮೆರಿಕ

ಭಾರತದ ಅಪಾಚೆ ಹೆಲಿಕಾಫ್ಟರ್‌, M777 ಹೊವಿಟ್ಜರ್‌ಗಳಿಗೆ $482.2 ಮಿಲಿಯನ್ ಮೊತ್ತದ ಅಮೆರಿಕದ ಬೆಂಬಲದ ಪ್ಯಾಕೇಜ್!

370 ರೂ. ಬಿರಿಯಾನಿ ಹೇಳಿಕೆ ವಿವಾದ: ಹಾಸ್ಯ ನಟ ಪ್ರಣಿತ್ ಮೋರ್, ಹಿಮಾಂಶು ಜಾಂಗ್ರಾ NCW ಮುಂದೆ ವಿಚಾರಣೆಗೆ ಹಾಜರು!

ನಮ್ಮದೆ 'ನಿಜವಾದ TMC': ಮಮತಾ ಬ್ಯಾನರ್ಜಿಯನ್ನೇ ಪಕ್ಷದಿಂದ ಹೊರ ಹಾಕಿದ ರಿತಬ್ರತಾ; ಹೊಸ ಅಧ್ಯಕ್ಷರ ನೇಮಕ!