ಸಾಂದರ್ಭಿಕ ಚಿತ್ರ online desk
ದೇಶ

ವಿವಾಹ ಪ್ರಸ್ತಾವ ತಿರಸ್ಕರಿಸಿದ್ದಕ್ಕಾಗಿ 14 ಬಾರಿ ವಿದ್ಯಾರ್ಥಿನಿಗೆ ಇರಿದ ವ್ಯಕ್ತಿ!

19 ವರ್ಷದ ಕಾಲೇಜು ವಿದ್ಯಾರ್ಥಿನಿಯನ್ನು ವ್ಯಕ್ತಿಯೊಬ್ಬ ಅಡ್ಡಗಟ್ಟಿ ವಿವಾಹವಾಗುವಂತೆ ಪೀಡಿಸಿದ್ದ. ಆಕೆ ನಿರಾಕರಿಸಿದ್ದಕ್ಕಾಗಿ ಆ ವ್ಯಕ್ತಿ 47 ಸೆಕೆಂಡುಗಳಲ್ಲಿ 14 ಬಾರಿ ಇರಿದಿದ್ದಾನೆ.

ಉಜ್ಜೈನ್: ವಿವಾಹ ಪ್ರಸ್ತಾವ ತಿರಸ್ಕರಿಸಿದ್ದಕ್ಕಾಗಿ ವ್ಯಕ್ತಿಯೊಬ್ಬ ವಿದ್ಯಾರ್ಥಿನಿಗೆ 14 ಬಾರಿ ಇರಿದಿರುವ ಘಟನೆ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ನಡೆದಿದೆ.

19 ವರ್ಷದ ಕಾಲೇಜು ವಿದ್ಯಾರ್ಥಿನಿಯನ್ನು ವ್ಯಕ್ತಿಯೊಬ್ಬ ಅಡ್ಡಗಟ್ಟಿ ವಿವಾಹವಾಗುವಂತೆ ಪೀಡಿಸಿದ್ದ. ಆಕೆ ನಿರಾಕರಿಸಿದ್ದಕ್ಕಾಗಿ ಆ ವ್ಯಕ್ತಿ 47 ಸೆಕೆಂಡುಗಳಲ್ಲಿ 14 ಬಾರಿ ಇರಿದಿದ್ದು, ಸಂತ್ರಸ್ತ ಯುವತಿ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ. ಆರೋಪಿಯನ್ನು ಸುನಿಲ್ ಜರೋಲಿ ಎಂದು ಗುರುತಿಸಲಾಗಿದೆ.

21 ವರ್ಷದ ಸುನಿಲ್ ಜರೋಲಿಯಾನನ್ನು ಬಂಧಿಸಲಾಗಿದೆ. ಆಕೆ ತನ್ನ ಪ್ರಸ್ತಾವವನ್ನು ನಿರಾಕರಿಸಿ ಆತನೊಂದಿಗೆ ಮಾತನಾಡಲು ನಿರಾಕರಿಸಿದಾಗ, ಆತ ಅಪರಾಧ ಎಸಗಿದ್ದಾನೆ ಎಂದು ತಿಳಿದುಬಂದಿದೆ. ದಾಳಿಯ ನಂತರ, ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದು. ಗೋಡೆ ಹಾರಲು ಹೋಗಿ ಕಾಲು ಮುರಿದುಕೊಂಡಿದ್ದಾನೆ ಎಂದು ತಿಳಿದುಬಂದಿದೆ.

ಪೂಜಾ ಅಲಿಯಾಸ್ ಗುಂಗುನ್, ಸಂತ್ರಸ್ತ ಯುವತಿಯಾಗಿದ್ದು, ಬಾಪು ನಗರದ ಪ್ರಥಮ ವರ್ಷದ ಬಿ.ಎ. ವಿದ್ಯಾರ್ಥಿನಿಯಾಗಿದ್ದಾಳೆ. ಆಕೆ ದಾವಾ ಬಜಾರ್‌ನಲ್ಲಿರುವ ಔಷಧಾಲಯವೊಂದರಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದಳು. ಶುಕ್ರವಾರ ಮಧ್ಯಾಹ್ನ 12:45 ರ ಸುಮಾರಿಗೆ, ಆಕೆ ಕೆಲಸಕ್ಕೆ ನಡೆದುಕೊಂಡು ಹೋಗುತ್ತಿದ್ದಾಗ ಆರೋಪಿ ಮಾಧವ್ ಕ್ಲಬ್ ಬಳಿ ಆಕೆಯನ್ನು ಅಡ್ಡಗಟ್ಟಿದನೆಂದು ಆರೋಪಿಸಲಾಗಿದೆ. ಆಕೆಯನ್ನು ತನ್ನೊಂದಿಗೆ ಮಾತನಾಡಲು ಮನವೊಲಿಸಲು ವಿಫಲವಾದ ನಂತರ ಆತ ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ. ಈ ಘಟನೆಯಲ್ಲಿ ಆಕೆಯ ಹೊಟ್ಟೆ, ಕುತ್ತಿಗೆ ಮತ್ತು ಕೈಗಳಿಗೆ ಗಂಭೀರ ಗಾಯಗಳಾಗಿವೆ.

ಜನರು ಸಹಾಯ ಮಾಡಲು ಧಾವಿಸಿದಾಗ ಜನದಟ್ಟಣೆಯ ಮಾರುಕಟ್ಟೆಯಲ್ಲಿ ಭಯ ಆವರಿಸಿತು. ಮೊದಲು ಆಕೆಯನ್ನು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತು, ನಂತರ ಪಾಟಿದಾರ್ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಆಕೆಯ ಸ್ಥಿತಿ ಇನ್ನೂ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಪೂಜಾ ಮತ್ತು ಆರೋಪಿ ಸುಮಾರು ನಾಲ್ಕು ವರ್ಷಗಳ ಹಿಂದೆ ಇನ್‌ಸ್ಟಾಗ್ರಾಮ್‌ ಮೂಲಕ ಸ್ನೇಹಿತರಾಗಿದ್ದರು. ಕಳೆದ 10 ದಿನಗಳಿಂದ ಆಕೆ ತನ್ನ ಕರೆಗಳಿಗೆ ಉತ್ತರಿಸುವುದನ್ನು ನಿಲ್ಲಿಸಿದ್ದರಿಂದ ಆತ ಅಸಮಾಧಾನಗೊಂಡಿದ್ದ. ಆಕೆಯ ತಾಯಿ ಇಬ್ಬರ ಸ್ನೇಹವನ್ನು ವಿರೋಧಿಸಿದ್ದರಿಂದ ಆಕೆ ಯುವಕನೊಂದಿಗೆ ಮಾತು ಬಿಟ್ಟಿದ್ದಳು ಎಂದು ತಿಳಿದುಬಂದಿದೆ.

ಉಜ್ಜಯಿನಿ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಶರ್ಮಾ ಮಾತನಾಡಿ, ಆಕೆ ಆರೋಪಿಯೊಂದಿಗೆ ಮಾತನಾಡಲು ಇಷ್ಟಪಡುತ್ತಿರಲಿಲ್ಲ. ಆದ್ದರಿಂದ ಮಾತನಾಡುವಂತೆ ಆರೋಪಿಯು ಯುವತಿಗೆ ಕಿರುಕುಳ ನೀಡುತ್ತಿದ್ದ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Op Sindoor: ವರ್ಷದ ಬಳಿಕ ಮಹತ್ವದ ಮಾಹಿತಿ ಬಹಿರಂಗಪಡಿಸಿದ ಕೇಂದ್ರ ಸರ್ಕಾರ, ಆರು ಹುತಾತ್ಮ ಯೋಧರ ಹೆಸರು ಪ್ರಕಟ!

ಮುಂದಿನ ಚುನಾವಣೆಯಲ್ಲಿ ನೀನು ಸೋತರೆ HDK ಮನೆಯ ವಾಚ್ ಮೆನ್ ಆಗ್ತೀಯಾ? ಪ್ರದೀಪ್ ಈಶ್ವರ್ ಗೆ JDS ಶಾಸಕನ ಸವಾಲು

ಮಹಾರಾಷ್ಟ್ರದಲ್ಲಿ ಮತ್ತೆ ಆಪರೇಷನ್ ಟೈಗರ್?: ಸಂಸದರ ಆಯ್ತು, ಈಗ ಉದ್ಧವ್ ಠಾಕ್ರೆ ಪಕ್ಷದ ಶಾಸಕರ ಬುಟ್ಟಿಗೆ ಕೈಹಾಕಿದ ಶಿಂಧೆ ಬಣ!

One Flight, Handshake: ಒಂದೇ ವಿಮಾನದಲ್ಲಿ ಫಡ್ನವೀಸ್, ಉದ್ಧವ್ ಠಾಕ್ರೆ! ಮುಂದೆ ಏನಾಯಿತು? ಈ Video ವೀಕ್ಷಿಸಿ...

2024ರಿಂದ 20 ಬಾರಿ Namma Metro ಸೇವೆಯಲ್ಲಿ ಅಡಚಣೆ: ಸಚಿವ ಕೃಷ್ಣಬೈರೇಗೌಡಗೆ ತೇಜಸ್ವಿ ಸೂರ್ಯ ಪತ್ರ!