ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಘೋಷಣೆಯಾಗುವ ಕೇವಲ 45 ನಿಮಿಷಗಳ ಮೊದಲು, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇಂದು ಮಧ್ಯಾಹ್ನ ಪ್ರಮುಖ ರಾಜಕೀಯ ಹೆಜ್ಜೆ ಇಟ್ಟಿದ್ದಾರೆ. ಎರಡು ಪ್ರಮುಖ ಘೋಷಣೆಗಳನ್ನು ಮಾಡಿದರು. ಮಮತಾ ಬ್ಯಾನರ್ಜಿ ರಾಜ್ಯ ಸರ್ಕಾರದಿಂದ ಅರ್ಚಕರು ಮತ್ತು ಮೌಲ್ವಿಗಳಿಗೆ ನೀಡಲಾಗುವ ಗೌರವಧನದಲ್ಲಿ 500 ಹೆಚ್ಚಳ ಮಾಡಿದ್ದು ಒಟ್ಟಾರೆ 2,000 ರೂಪಾಯಿ ಮಾಡಿದೆ. ಮತ್ತೊಂದೆಡೆ ಈ ಮಾರ್ಚ್ನಿಂದ ರಾಜ್ಯ ಸರ್ಕಾರಿ ನೌಕರರು/ಪಿಂಚಣಿದಾರರು ಮತ್ತು ಶಿಕ್ಷಕರಿಗೆ ಬಾಕಿ ಇರುವ ಡಿಎ ಪಾವತಿಯನ್ನು ಘೋಷಿಸಿದರು.
ಮಮತಾ ಬ್ಯಾನರ್ಜಿ ತಮ್ಮ ಇನ್ಸ್ಟಾಗ್ರಾಮ್ ಹ್ಯಾಂಡಲ್ನಲ್ಲಿ ಪ್ರತ್ಯೇಕ ಪೋಸ್ಟ್ಗಳ ಮೂಲಕ ಈ ಘೋಷಣೆ ಮಾಡಿದ್ದಾರೆ. ನಮ್ಮ ಸಮುದಾಯಗಳ ಆಧ್ಯಾತ್ಮಿಕ ಮತ್ತು ಸಾಮಾಜಿಕ ಜೀವನವನ್ನು ಉಳಿಸಿಕೊಳ್ಳುವ ಸೇವೆ ಸಲ್ಲಿಸುವ ನಮ್ಮ ಪುರೋಹಿತರು ಮತ್ತು ಮೌಲ್ವಿಗಳ ಮಾಸಿಕ ಗೌರವಧನದಲ್ಲಿ 500 ರೂಪಾಯಿ ಹೆಚ್ಚಳವನ್ನು ಘೋಷಿಸಲು ನನಗೆ ಸಂತೋಷವಾಗಿದೆ ಎಂದು ಬರೆದುಕೊಂಡಿದ್ದಾರೆ. ಈ ಹೆಚ್ಚಳದೊಂದಿಗೆ, ಅವರು ಈಗ ತಿಂಗಳಿಗೆ 2,000 ರೂಪಾಯಿ ಪಡೆಯುತ್ತಾರೆ.
ನಮ್ಮ 'ಮಾ-ಮತಿ-ಮಾನುಷ್' ಸರ್ಕಾರವು ತನ್ನ ಎಲ್ಲಾ ಉದ್ಯೋಗಿಗಳು ಮತ್ತು ಪಿಂಚಣಿದಾರರಿಗೆ, ಹಾಗೆಯೇ ನಮ್ಮ ಶಿಕ್ಷಣ ಸಂಸ್ಥೆಗಳ ಲಕ್ಷಾಂತರ ಶಿಕ್ಷಕರು ಮತ್ತು ಬೋಧಕೇತರ ಸಿಬ್ಬಂದಿಗೆ ಮತ್ತು ಪಂಚಾಯತ್ಗಳು, ಪುರಸಭೆಗಳು ಮತ್ತು ಇತರ ಸ್ಥಳೀಯ ಸಂಸ್ಥೆಗಳಂತಹ ನಮ್ಮ ಇತರ ಅನುದಾನಿತ ಸಂಸ್ಥೆಗಳ ನೌಕರರು/ಪಿಂಚಣಿದಾರರಿಗೆ ನೀಡಿದ ಭರವಸೆಯನ್ನು ಈಡೇರಿಸಿದೆ ಎಂದು ನಿಮಗೆ ತಿಳಿಸಲು ನನಗೆ ಸಂತೋಷವಾಗಿದೆ ಎಂದು ಬರೆದುಕೊಂಡಿದ್ದಾರೆ.
ನಮ್ಮ ಹಣಕಾಸು ಇಲಾಖೆ ಹೊರಡಿಸಿದ ಅಧಿಸೂಚನೆಗಳಲ್ಲಿ ಹೇಳಲಾದ ನಿಯಮಗಳ ಪ್ರಕಾರ, ಅವರು ಮಾರ್ಚ್ 2026 ರಿಂದ ತಮ್ಮ ಬಾಕಿ ಇರುವ ಡಿಎ (ತುಟಿ ಭತ್ಯೆ) ಪಡೆಯಲು ಪ್ರಾರಂಭಿಸುತ್ತಾರೆ. ರಾಜ್ಯ ಹಣಕಾಸು ಇಲಾಖೆಯು ಭಾನುವಾರ ಈ ನಿಟ್ಟಿನಲ್ಲಿ ಅಧಿಕೃತ ಅಧಿಸೂಚನೆಯನ್ನು ಸಹ ಹೊರಡಿಸಿದೆ.
ಚುನಾವಣಾ ಆಯೋಗವು ಬಂಗಾಳ ಸೇರಿದಂತೆ ಪಂಚರಾಜ್ಯಗಳ ಸಂಜೆ 4 ಗಂಟೆಗೆ ಚುನಾವಣಾ ದಿನಾಂಕಗಳನ್ನು ಘೋಷಿಸಲಿರುವ ಸಮಯದಲ್ಲಿ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಈ ಎರಡು ದೊಡ್ಡ ಘೋಷಣೆಗಳನ್ನು ಮಾಡಿದ್ದಾರೆ.