ವಿಮಾನ ಸೇವೆ (ಸಂಗ್ರಹ ಚಿತ್ರ) online desk
ದೇಶ

Iran-Israel War: ಗಲ್ಫ್ ವಾಯುಪ್ರದೇಶ ಸಂಚಾರ ತಪ್ಪಿಸಿ; ವಿಮಾನಯಾನ ಸಂಸ್ಥೆಗಳಿಗೆ DGCA ಎಚ್ಚರಿಕೆ

ಬಹ್ರೇನ್, ಇರಾನ್, ಇರಾಕ್, ಇಸ್ರೇಲ್, ಜೋರ್ಡಾನ್, ಕುವೈತ್, ಲೆಬನಾನ್, ಕತಾರ್, ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ವಾಯುಪ್ರದೇಶಗಳಲ್ಲಿ ಹಾರಾಟ ನಡೆಸದಂತೆ ಹೇಳಿದೆ.

ನವದೆಹಲಿ: ಪಶ್ಚಿಮ ಏಷ್ಯಾದಲ್ಲಿನ ಇರಾನ್‑ಇಸ್ರೇಲ್ ಯುದ್ಧ ಹಿನ್ನೆಲೆ ಗಲ್ಫ್ ವಾಯುಪ್ರದೇಶಗಳಲ್ಲಿನ ಸಂಚಾರ ತಪ್ಪಿಸುವಂತೆ ವಿಮಾನಯಾನ ಸಂಸ್ಥೆಗಳಿಗೆ ಭಾರತದ ವಿಮಾನಯಾನ ನಿಯಂತ್ರಣ ಪ್ರಾಧಿಕಾರ (DGCA) ಸೂಚನೆ ನೀಡಿದೆ.

ನಾಗರಿಕ ವಿಮಾನಯಾನ ನಿರ್ದೇಶನಾಲಯ (DGCA) 9 ವಾಯುಪ್ರದೇಶಗಳಲ್ಲಿ ಹಾರಾಟ ನಡೆಸದಂತೆ ವಿಮಾನಯಾನ ಸಂಸ್ಥೆಗಳಿಗೆ ಡಿಜಿಸಿಎ ಸಲಹೆ ಕೊಟ್ಟಿದೆ.

ಬಹ್ರೇನ್, ಇರಾನ್, ಇರಾಕ್, ಇಸ್ರೇಲ್, ಜೋರ್ಡಾನ್, ಕುವೈತ್, ಲೆಬನಾನ್, ಕತಾರ್, ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ವಾಯುಪ್ರದೇಶಗಳಲ್ಲಿ ಹಾರಾಟ ನಡೆಸದಂತೆ ಹೇಳಿದೆ.

ಭಾರತೀಯ ವಿಮಾನಯಾನ ಸಂಸ್ಥೆಗಳು, ಕೆಲವು ಷರತ್ತುಗಳನ್ನು ಪಾಲಿಸಿ, ಒಮನ್ ಹಾಗೂ ಸೌದಿ ಅರೇಬಿಯಾ ವಾಯುಪ್ರದೇಶಗಳ ಮೇಲೆ ಹಾರಾಟ ನಡೆಸಬಹುದು ಎಂದು ತಿಳಿಸಿದೆ.

ಅಂದರೆ ವಿಮಾನ ಹಾರಾಟ ನಡೆಸುವಾಗ FL 300 ಅಥವಾ 32 ಸಾವಿರ ಅಡಿಗಿಂತ ಕಡಿಮೆ ಎತ್ತರದಲ್ಲಿ ಕಾರ್ಯನಿರ್ವಹಿಸಬಾರದು ಎಂದು ಷರತ್ತು ವಿಧಿಸಲಾಗಿದೆ.

ಇರಾನ್ ಪ್ರದೇಶಗಳ ಮೇಲೆ ಇಸ್ರೇಲ್ ಹಾಗೂ ಅಮೇರಿಕ ನಡೆಸುತ್ತಿರುವ ದಾಳಿಗಳಿಂದಾಗಿ, ನಾಗರಿಕ ವಿಮಾನಯಾನಕ್ಕೆ ಅಪಾಯ ಉಂಟಾಗುತ್ತಿದೆ. ಹೀಗಾಗಿ ಡಿಜಿಸಿಎ ಈ ಎಚ್ಚರಿಕೆ ಕ್ರಮಗಳನ್ನು ಮಾರ್ಚ್ 28 ರವರೆಗೂ ಅನುಸರಿಸುವಂತೆ ತಿಳಿಸಿದೆ.‌ ಇದೇ ವೇಳೆ ನಿರ್ವಾಹಕರು ತಮ್ಮ ವಿಮಾನ ಸಿಬ್ಬಂದಿಗೆ ಇತ್ತೀಚಿನ ನೊಟಮ್​, ವಾಯುಪ್ರದೇಶದ ನಿರ್ಬಂಧಗಳ ಬಗ್ಗೆ ಮಾಹಿತಿಯನ್ನು ಒದಗಿಸುವಂತೆ ಸೂಚಿಸಿದೆ.

ಇರಾನ್​ ಗುರಿಯಾಗಿಸಿಕೊಂಡು ಅಮೆರಿಕ ಮತ್ತು ಇಸ್ರೇಲ್​ ನಡುವಿನ ಯುದ್ದವು ಮೂರನೇ ವಾರವೂ ಮುಂದುವರೆದಿದ್ದು, ಯುದ್ದದ ಪರಿಣಾಮಗಳು ಮಧ್ಯಪ್ರಾಚ್ಯದಲ್ಲೂ ಉಂಟಾಗಿದೆ. ಇದರಿಂದ ಈ ಪ್ರದೇಶಗಳು ವಿಮಾನಯಾನ ಕಾರ್ಯಾಚರಣೆಗೆ ಹೆಚ್ಚಿನ ಅಪಾಯಕಾರಿಯಾಗಿದೆ.

ಗಲ್ಫ್​ ರಾಷ್ಟ್ರಗಳ ಮೇಲೆ ಪ್ರತೀಕಾರದ ಕ್ರಮವಾಗಿ ಇರಾನ್​ ದಾಳಿ ನಡೆಸಿದ್ದು, ಇದು ನಾಗರಿಕ ವಿಮಾನ ಕಾರ್ಯಾಚರಣೆಗಳಿಗೆ ಹೆಚ್ಚಿನ ಅಪಾಯ ಉಂಟು ಮಾಡಿದೆ.

ಇತ್ತೀಚಿಗೆ ಅತ್ಯಂತ ಜನನಿಬಿಡ ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇಂದು ಡ್ರೋನ್ ದಾಳಿ ನಡೆಸಿತ್ತು. ಇದರಿಂದ ಬೆಂಕಿ ಹೊತ್ತಿಕೊಂಡಿದ್ದು ಮುನ್ನೆಚ್ಚರಿಕಾ ಕ್ರಮವಾಗಿ ವಿಮಾನ ಸಂಚಾರವನ್ನು ಬಂದ್​ ಮಾಡಲಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ವಿಧಾನಸೌಧದಲ್ಲಿ 'ಫ್ರೀಡಂ ಹಬ್ಬ: ಈ ಮೂರು ನಿಲ್ದಾಣದಲ್ಲಿ ಮೆಟ್ರೋ ನಿಲುಗಡೆ ಇಲ್ಲ!

ತಂದೆ ಎಲ್ಲಿದ್ದಾರೆ ಅಂತ ತಾಯಿನ ಕೇಳಿ; ವಿಧಾನಸಭೆಯಲ್ಲಿ ಹುಡುಕಬೇಡಿ; CM Vijay ಬಗ್ಗೆ ಬಿಜೆಪಿ ಅಧ್ಯಕ್ಷರ ಹೇಳಿಕೆ ವಿವಾದಕ್ಕೆ ಗುರಿ!

Hockey World Cup 2026: ಸ್ವಾತಂತ್ರ್ಯ ದಿನಾಚರಣೆಯಂದೇ ಭಾರತ ಶುಭಾರಂಭ, ವೇಲ್ಸ್ ವಿರುದ್ಧ 3-1 ಅಂತರದ ಭರ್ಜರಿ ಜಯ

India vs Sri Lanka 1st Test: ಕನ್ನಡಿಗರ ಅರ್ಭಟ, ಪಡಿಕ್ಕಲ್ ಚೊಚ್ಚಲ ಶತಕ, ರಾಹುಲ್ ಅರ್ಧಶತಕದೊಂದಿಗೆ ಭಾರತಕ್ಕೆ ಮೇಲುಗೈ!

‘ಯುವಕರು ದೇಶದ ಡೆಮೋಗ್ರಾಫಿಕ್ ಡಿವಿಡೆಂಡ್, ಯುವಶಕ್ತಿಯ ಸರಿಯಾಗಿ ಬಳಸಿದರೆ ದೇಶಕ್ಕೆ ಅಪಾರ ಲಾಭ': Mohan Bhagwat