ಮಮತಾ ಬ್ಯಾನರ್ಜಿ  
ದೇಶ

'ನನ್ನ ಜೀವನವಿಡೀ ಹೋರಾಡುತ್ತೇನೆ': ಸತತ 3 ಗಂಟೆ ಭಾವನಿಪುರ ಸ್ಟ್ರಾಂಗ್ ರೂಂನಲ್ಲಿ ಕಳೆದು ಹೊರಬಂದ ಮಮತಾ ಬ್ಯಾನರ್ಜಿ ಹೇಳಿದ್ದೇನು? Video

ಸ್ಟ್ರಾಂಗ್‌ರೂಮ್‌ನಿಂದ ಹೊರಬಂದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಮಮತಾ ಬ್ಯಾನರ್ಜಿ, ಮಾಧ್ಯಮಗಳಲ್ಲಿ ಬಂದ ವರದಿಗಳ ನಂತರ ಈ ಸ್ಥಳವನ್ನು ಪರಿಶೀಲಿಸಲು ಬಂದೆ ಎಂದು ಹೇಳಿದರು.

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ದಕ್ಷಿಣ ಕೊಲ್ಕತ್ತಾದ ಭಾವನಿಪುರ ಕ್ಷೇತ್ರದಲ್ಲಿರುವ ಸಖಾವತ್ ಮೆಮೋರಿಯಲ್ ಶಾಲೆಯ ಸ್ಟ್ರಾಂಗ್‌ರೂಮ್‌ಗೆ ಭೇಟಿ ನೀಡಿದರು. ಇಲ್ಲಿ ವಿದ್ಯುನ್ಮಾನ ಮತಯಂತ್ರಗಳನ್ನು (EVMಗಳು) ಇರಿಸಲಾಗಿದ್ದು, ಕ್ರಮಬದ್ಧತೆಯ ಉಲ್ಲಂಘನೆ ಆರೋಪಗಳ ನಡುವೆಯೇ ಅವರು ಮೂರು ಗಂಟೆಗಳಿಗಿಂತ ಹೆಚ್ಚು ಸಮಯ ಅಲ್ಲೇ ಉಳಿದರು.

ಸ್ಟ್ರಾಂಗ್‌ರೂಮ್‌ನಿಂದ ಹೊರಬಂದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಮಮತಾ ಬ್ಯಾನರ್ಜಿ, ಮಾಧ್ಯಮಗಳಲ್ಲಿ ಬಂದ ವರದಿಗಳ ನಂತರ ಈ ಸ್ಥಳವನ್ನು ಪರಿಶೀಲಿಸಲು ಬಂದೆ ಎಂದು ಹೇಳಿದರು. ಇಲ್ಲಿ EVMಗಳಿಗಾಗಿ ಸ್ಟ್ರಾಂಗ್‌ರೂಮ್ ಇದೆ. ನಾನು ಇದನ್ನು ಟಿವಿಯಲ್ಲಿ ನೋಡಿದಾಗ, ಬರಬೇಕೆಂದು ಅನಿಸಿತು ಎಂದು ಹೇಳಿದರು.

ಕೇಂದ್ರ ಭದ್ರತಾ ಸಿಬ್ಬಂದಿ ಆರಂಭದಲ್ಲಿ ಪ್ರವೇಶವನ್ನು ನಿರಾಕರಿಸಿದರೂ, ಅಭ್ಯರ್ಥಿಯಾಗಿ ತಮ್ಮ ಹಕ್ಕನ್ನು ಉಲ್ಲೇಖಿಸಿದ ಬಳಿಕ ಅವಕಾಶ ನೀಡಿದರು ಎಂದು ಅವರು ಆರೋಪಿಸಿದರು. ಚುನಾವಣಾ ನಿಯಮಗಳ ಪ್ರಕಾರ, ಅಭ್ಯರ್ಥಿಗಳಿಗೆ ಸೀಲ್ ಮಾಡಲಾದ ಕೊಠಡಿಯ ಹೊರವಲಯದವರೆಗೆ ಹೋಗಲು ಅನುಮತಿ ಇದೆ. ನಂತರ ನನಗೆ ಒಳ ಹೋಗಲು ಅವಕಾಶ ನೀಡಲಾಯಿತು ಎಂದು ಹೇಳಿದರು.

ತೃಣಮೂಲ ಕಾಂಗ್ರೆಸ್ (TMC) ಮುಖ್ಯಸ್ಥೆಯಾದ ಮಮತಾ ಬ್ಯಾನರ್ಜಿ, ಅಕ್ರಮಗಳನ್ನು ನಾನು ವಿರೋಧಿಸುತ್ತೇನೆ ಎಂದರು. ನಾನು ಜೀವನಪೂರ್ತಿ ಹೋರಾಡುತ್ತೇನೆ. ಯಾವುದೇ ಅಕ್ರಮ ನಡೆಯುತ್ತಿದ್ದರೆ ಅದರ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ಹೇಳಿದರು. EVMಗಳಲ್ಲಿ ಹಸ್ತಕ್ಷೇಪ ಮಾಡುವ ಯಾವುದೇ ಪ್ರಯತ್ನಗಳನ್ನು ಕಠಿಣವಾಗಿ ಪ್ರತಿರೋಧಿಸುವುದಾಗಿ ಅವರು ಎಚ್ಚರಿಸಿದರು.

ಮಮತಾ ಬ್ಯಾನರ್ಜಿಯವರು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೊದಲ್ಲಿ ಮತಪೆಟ್ಟಿಗೆಗಳ ಅಸಮರ್ಪಕ ನಿರ್ವಹಣೆ ನಡೆದಿದೆ ಎಂಬ ಟಿಎಂಸಿ ಆರೋಪಗಳ ನಂತರ ಸ್ಟ್ರಾಂಗ್ ರೂಂಗೆ ಭೇಟಿ ನೀಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾವೇರಿ ವಿವಾದ: ಮಾತುಕತೆ ಅಂದ್ರೆ ರಾಜಿ ಎಂದರ್ಥವಲ್ಲ; ಬೆಂಗಳೂರು ಭೇಟಿ ಪ್ರಯತ್ನ ಸಮರ್ಥಿಸಿಕೊಂಡ ತಮಿಳುನಾಡು ಸಿಎಂ ವಿಜಯ್!

ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿ ರಾಜೀನಾಮೆ

ಮೊದಲು BJPಯ 'ದೇಶ ವಿರೋಧಿ' ಟೀಕೆಗಳಿಗೆ ಬ್ರೇಕ್ ಹಾಕಿ; ಮೋದಿಗೆ ನೀವು ಗಾಡ್‌ಫಾದರ್ ಇದ್ದಂತೆ: Gen Z ಬೆಂಬಲಿಸಿದ ಮೋಹನ್ ಭಾಗವತ್​ಗೆ ದೀಪ್ಕೆ ಆಗ್ರಹ!

ಆಹಾರ ಸುರಕ್ಷತೆ: ಹೋಟೆಲ್‌ಗಳ ಮೇಲೆ ಕರ್ನಾಟಕ ಆರೋಗ್ಯ ಇಲಾಖೆ ದಿಢೀರ್ ದಾಳಿ, ತಪಾಸಣೆಗೆ 30 ವಿಶೇಷ ತಂಡ ರಚನೆ, Video

ಸಂಸತ್ತಿನಲ್ಲಿ ತೀವ್ರ ಗದ್ದಲ: ಅಮಿತ್ ಶಾ ಹೇಳಿಕೆಗೆ ವಿಪಕ್ಷಗಳ ಪಟ್ಟು, ಆಗಸ್ಟ್ 10ರವರೆಗೆ ಲೋಕಸಭೆ-ರಾಜ್ಯಸಭೆ ಕಲಾಪ ಮುಂದೂಡಿಕೆ..!