ಲೀಮಾ ರೋಸ್ ಮಾರ್ಟಿನ್. ಆಧವ್ ಅರ್ಜುನ್ ಮತ್ತು ಜೋಸ್ ಚಾರ್ಲ್ಸ್ ಮಾರ್ಟಿನ್ 
ದೇಶ

ತಮಿಳುನಾಡು, ಪುದುಚೇರಿ ಚುನಾವಣೆ: ಲಾಟರಿ ದೊರೆ 'ಮಾರ್ಟಿನ್' ಕುಟುಂಬದಲ್ಲಿ ತ್ರಿಕೋನ ರಾಜಕೀಯ; 3 ಪಕ್ಷಗಳಿಂದ ಸ್ಪರ್ಧೆ- ಮೂರು ಸ್ಥಾನಗಳಲ್ಲಿ ಗೆಲುವು!

ಲಾಟರಿ ದೊರೆ ಅವರ ಪತ್ನಿ ಲೀಮಾ ರೋಸ್ ಮಾರ್ಟಿನ್ ಎಐಎಡಿಎಂಕೆ ಟಿಕೆಟ್‌ನಲ್ಲಿ ಲಾಲ್ಗುಡಿಯಿಂದ ಸ್ಪರ್ಧಿಸಿದರು, ಅವರ ಅಳಿಯ ಆಧವ್ ಅರ್ಜುನ್ ವಿಲ್ಲಿವಕ್ಕಂನಿಂದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದಿಂದ ಕಣಕ್ಕಿಳಿದಿದ್ದರು.

ಚೆನ್ನೈ: ವಿವಾದಾತ್ಮಕ ಲಾಟರಿ ದೊರೆ ಸ್ಯಾಂಟಿಯಾಗೊ ಮಾರ್ಟಿನ್ ಅವರ ಕುಟುಂಬದ ಹಲವು ಸದಸ್ಯರು, ಚುನಾವಣಾ ಬಾಂಡ್‌ಗಳ ಮೂಲಕ ಪ್ರಮುಖ ರಾಜಕೀಯ ದೇಣಿಗೆದಾರರಾಗಿದ್ದಾರೆ, ಇದರಲ್ಲಿ ಡಿಎಂಕೆಗೆ 500 ಕೋಟಿ ರೂ.ಗಳಿಗೂ ಹೆಚ್ಚು ಹಣ ನೀಡಲಾಗಿದೆ.

ಇತ್ತೀಚಿನ ವಿಧಾನಸಭೆ ಚುನಾವಣೆಯಲ್ಲಿ ವಿವಿಧ ಪಕ್ಷಗಳಿಂದ ಸ್ಪರ್ಧಿಸಿದ್ದರೂ ಸಹ ವಿಧಾನಸಭಾ ಚುನಾವಣೆಯಲ್ಲಿ ಮೂರು ಸ್ಥಾನ ಪಡೆದಿದ್ದಾರೆ. ಲಾಟರಿ ದೊರೆ ಅವರ ಪತ್ನಿ ಲೀಮಾ ರೋಸ್ ಮಾರ್ಟಿನ್ ಎಐಎಡಿಎಂಕೆ ಟಿಕೆಟ್‌ನಲ್ಲಿ ಲಾಲ್ಗುಡಿಯಿಂದ ಸ್ಪರ್ಧಿಸಿದರು, ಅವರ ಅಳಿಯ ಆಧವ್ ಅರ್ಜುನ್ ವಿಲ್ಲಿವಕ್ಕಂನಿಂದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದಿಂದ ಕಣಕ್ಕಿಳಿದಿದ್ದರು.

ಅವರ ಮಗ ಜೋಸ್ ಚಾರ್ಲ್ಸ್ ಮಾರ್ಟಿನ್ ಪುದುಚೇರಿಯ ಕಾಮರಾಜ್ ನಗರದಿಂದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಜೊತೆ ಮೈತ್ರಿ ಮಾಡಿಕೊಂಡಿರುವ ತಮ್ಮದೇ ಪಕ್ಷ (ಲಚ್ಚಿಯ ಜನನಾಯಕ ಕಚ್ಚಿ) ಪರವಾಗಿ ಸ್ಪರ್ಧಿಸಿದರು. ಈ ಮೂವರೂ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ.

ಡಿಎಂಕೆ ಪಕ್ಷದ ಭದ್ರಕೋಟೆ ಎಂದು ದೀರ್ಘಕಾಲದಿಂದ ಪರಿಗಣಿಸಲ್ಪಟ್ಟ ಕ್ಷೇತ್ರವಾದ ಲಾಲ್ಗುಡಿಯಿಂದ ಲೀಮಾ ಗೆದ್ದಿದ್ದಾರೆ. ಅವರು ಟಿವಿಕೆಯ ಕು.ಪ ಕೃಷ್ಣನ್ ಅವರನ್ನು 2,739 ಮತಗಳಿಂದ ಸೋಲಿಸಿ, ಡಿಎಂಕೆಯ ಎ ಪರಿವಲ್ಲಲ್ ಮೂರನೇ ಸ್ಥಾನಕ್ಕೆ ತಳ್ಳಿದ್ದಾರೆ. 2021, 2016, 2011 ಮತ್ತು 2006 ರ ತಮಿಳುನಾಡು ವಿಧಾನಸಭಾ ಚುನಾವಣೆಗಳಲ್ಲಿ ಡಿಎಂಕೆ ಈ ಸ್ಥಾನವನ್ನು ಗೆದ್ದಿತ್ತು.

ಆಧವ್, ಡಿಎಂಕೆಯ ಮತ್ತೊಂದು ಭದ್ರಕೋಟೆಯಾದ ವಿಲ್ಲಿವಕ್ಕಂನಿಂದ ಗೆದ್ದರು. ಅವರು ಡಿಎಂಕೆಯ ಕಾರ್ತಿಕ್ ಮೋಹನ್ ಅವರನ್ನು 17,302 ಮತಗಳ ಅಂತರದಿಂದ ಸೋಲಿಸಿದರು. ಕಳೆದ ಎರಡು ಚುನಾವಣೆಗಳಲ್ಲಿ ಡಿಎಂಕೆ ಈ ಕ್ಷೇತ್ರವನ್ನು ತನ್ನ ವಶದಲ್ಲಿಟ್ಟುಕೊಂಡಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Trump ಯುದ್ಧ ನೀತಿಗೆ ಅಮೆರಿಕಾ ಸೆನೆಟ್ ಬ್ರೇಕ್: ಕಾಂಗ್ರೆಸ್ ಅನುಮತಿ ಇಲ್ಲದೆ ಯುದ್ಧ ಬೇಡ; ಮಹತ್ವದ ನಿರ್ಣಯಕ್ಕೆ ಅನುಮೋದನೆ..!

US-Iran ಶಾಂತಿ ಒಪ್ಪಂದ ಎಫೆಕ್ಟ್: Hormuzನಲ್ಲಿ ಹಡಗು ಸಂಚಾರ ಚೇತರಿಕೆ, ಜಲಸಂಧಿ ದಾಟಿದ ಭಾರತದ 11 ಹಡಗುಗಳು..!

ಸಚಿವ ಸಂಪುಟ ವಿಸ್ತರಣೆ ಕಸರತ್ತು: ಜೂನ್ 27ಕ್ಕೆ ದೆಹಲಿಗೆ CM ಡಿಕೆಶಿ; ಕೇರಳ ರೆಸಾರ್ಟ್‌ನಲ್ಲಿ ಸಿದ್ದು ‘ಕ್ಯಾಂಪ್’, ಹೆಚ್ಚಿದ ಕುತೂಹಲ

Cross voting ವಿವಾದ: BJP ಹೈಕಮಾಂಡ್‌ಗೆ ರಾಜ್ಯ ನಾಯಕರ ವರದಿ; ದ್ರೋಹ ಬಗೆದವರ ವಿರುದ್ಧ ಶಿಸ್ತು ಕ್ರಮಕ್ಕೆ ನಿತಿನ್ ನಬೀನ್ ಸೂಚನೆ?

ಕಬ್ಬನ್ ಪಾರ್ಕ್ Namma Metro ತಾಂತ್ರಿಕ ದೋಷ ಸರಿಪಡಿಸಿದ BMRCL; ನೇರಳೆ ಮಾರ್ಗದಲ್ಲಿ ಸಂಚಾರ ಪುನರಾರಂಭ