ರಾಜ್ಯಪಾಲರೊಂದಿಗೆ ಟಿಟಿವಿ ದಿನಕರನ್  
ದೇಶ

ಶಾಸಕರ ನಕಲಿ ಬೆಂಬಲ ಪತ್ರ: ಟಿವಿಕೆ ಪಕ್ಷದ ವಿರುದ್ಧ ಪೊಲೀಸರಿಗೆ TTV ದಿನಕರನ್ ದೂರು!

ಆರೋಪಗಳ ನಂತರ, ಟಿವಿಕೆ ವಿಜಯ್ ನೇತೃತ್ವದ ಪಕ್ಷವನ್ನು ಬೆಂಬಲಿಸಿ ಕಾಮರಾಜ್ ಬೆಂಬಲ ಪತ್ರ ಬರೆಯುತ್ತಿರುವ ವೀಡಿಯೊವನ್ನು ಬಿಡುಗಡೆ ಮಾಡಿತು. ನಕಲಿ ಪತ್ರ ಎಂಬ AMMK ಮುಖ್ಯಸ್ಥ ದಿನಕರನ್ ಅವರ ಹೇಳಿಕೆಯನ್ನು ವಿರೋಧಿಸಿತು.

ಚೆನ್ನೈ: ತಮಿಳುನಾಡಿಲ್ಲಿ ಸರ್ಕಾರ ರಚನೆ ಕಸರತ್ತು ಮುಂದುವರೆದಿದೆ. ಈ ಮಧ್ಯೆ ವಿಜಯ್ ನೇತೃತ್ವದ ಪಕ್ಷವು ತಮಿಳುನಾಡಿನಲ್ಲಿ ಸರ್ಕಾರ ರಚನೆಯಲ್ಲಿ AMMK ಬೆಂಬಲದ ನಕಲಿ ಪತ್ರವನ್ನು ಬಳಸುತ್ತಿದೆ ಎಂದು ಆರೋಪಿಸಿ, ಅಮ್ಮ ಮಕ್ಕಳ್ ಮುನ್ನೇತ್ರ ಕಳಗಂ (AMMK) ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.

AMMK ಏಕೈಕ ಶಾಸಕ ಎಸ್ ಕಾಮರಾಜ್ ಅವರ ಬೆಂಬಲದ ಕುರಿತು ಎರಡೂ ಪಕ್ಷಗಳ ನಡುವೆ ರಾಜಕೀಯ ಘರ್ಷಣೆ ಹೆಚ್ಚುತ್ತಿರುವ ಮಧ್ಯೆ ಈ ದೂರು ಸಲ್ಲಿಕೆಯಾಗಿದೆ. ಶಾಸಕ ಕಾಮರಾಜ್ ಅವರ ಪತ್ರದ "ನಕಲಿ ಪ್ರತಿಯನ್ನು" ಟಿವಿಕೆ ರಾಜ್ಯಪಾಲರೊಂದಿಗೆ ಹಂಚಿಕೊಂಡಿದೆ ಎಂದು ಟಿಟಿವಿ ದಿನಕರನ್ ಆರೋಪಿಸಿದ ನಂತರ ಈ ಬೆಳವಣಿಗೆ ಬಂದಿದೆ.

ಆರೋಪಗಳ ನಂತರ, ಟಿವಿಕೆ ವಿಜಯ್ ನೇತೃತ್ವದ ಪಕ್ಷವನ್ನು ಬೆಂಬಲಿಸಿ ಕಾಮರಾಜ್ ಬೆಂಬಲ ಪತ್ರ ಬರೆಯುತ್ತಿರುವ ವೀಡಿಯೊವನ್ನು ಬಿಡುಗಡೆ ಮಾಡಿತು. ನಕಲಿ ಪತ್ರ ಎಂಬ AMMK ಮುಖ್ಯಸ್ಥ ದಿನಕರನ್ ಅವರ ಹೇಳಿಕೆಯನ್ನು ವಿರೋಧಿಸಿತು.

TVK ನಾಯಕರು ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ಕಾಮರಾಜ್ ಪತ್ರ ಬರೆದು AMMK ಪ್ರಧಾನ ಕಾರ್ಯದರ್ಶಿ ದಿನಕರನ್ ಅವರ ಅನುಮೋದನೆಯೊಂದಿಗೆ TVK ಗೆ ಬೆಂಬಲ ನೀಡುತ್ತಿರುವುದಾಗಿ ಹೇಳುತ್ತಿರುವುದು ಕಂಡುಬರುತ್ತದೆ. ನಂತರ ಅಂತಹ ಯಾವುದೇ ಬೆಂಬಲವನ್ನು ಅಧಿಕೃತವಾಗಿ ವಿಜಯ್ ಅವರ ಪಕ್ಷಕ್ಕೆ ನೀಡಲಾಗಿದೆ ಎಂಬುದನ್ನು ನಿರಾಕರಿಸಿದ ನಂತರ ದಿನಕರನ್ "ಸುಳ್ಳು ಸುದ್ದಿ ಮತ್ತು ತಪ್ಪು ಮಾಹಿತಿ" ಹರಡುತ್ತಿದ್ದಾರೆ ಎಂದು ಟಿವಿಕೆ ಆರೋಪಿಸಿದೆ.

ದಿನಕರನ್, ಕಾಮರಾಜ್ ಅವರೊಂದಿಗೆ ಲೋಕ ಭವನದಲ್ಲಿ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರನ್ನು ಭೇಟಿ ಮಾಡಿ, ಎಐಎಡಿಎಂಕೆ ನಾಯಕ ಎಡಪ್ಪಾಡಿ ಕೆ ಪಳನಿಸ್ವಾಮಿ ಅವರನ್ನು ಬೆಂಬಲಿಸಿದ ಕೆಲವೇ ಗಂಟೆಗಳ ನಂತರ ಈ ಬೆಳವಣಿಗೆಯಾಗಿದೆ.

ದಿನಕರನ್ ತಮ್ಮ ಏಕೈಕ ಶಾಸಕ "ಕಾಣೆಯಾಗಿದ್ದಾರೆ" ಎಂದು ಆರೋಪಿಸಿದ್ದರು ಮತ್ತು ಅತಂತ್ರ ವಿಧಾನಸಭೆಯಲ್ಲಿ ಸಂಖ್ಯಾಬಲಕ್ಕಾಗಿ ತೀವ್ರ ಸ್ಪರ್ಧೆಯ ನಡುವೆ ಕುದುರೆ ವ್ಯಾಪಾರಕ್ಕೆ ಗುರಿಯಾಗಬಹುದು ಎಂದು ಹೇಳಿದರು. ಇದು ಟಿವಿಕೆಗೆ ಹಿನ್ನಡೆಯಂಟು ಮಾಡಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

JPSC-PT ರದ್ದುಗೊಳಿಸಲು ಜಾರ್ಖಂಡ್ ಸರ್ಕಾರ ಒಪ್ಪಿದ್ರೂ 6ನೇ ಸುತ್ತಿನ ಮಾತುಕತೆ ವಿಫಲ, ಪ್ರತಿಭಟನೆ ಮುಂದುವರಿಕೆ!

"ಹಮಾಸ್ ನಿಶ್ಯಸ್ತ್ರಗೊಳಿಸುದೇ ಅಂತಿಮ ಗುರಿ": ಟ್ರಂಪ್ ಗಾಜಾ ಶಾಂತಿ ಯೋಜನೆ ತಿರಸ್ಕರಿಸಿದ ಇಸ್ರೇಲ್!

ಪಾಕಿಸ್ತಾನಿಗಳು ಭಾರತೀಯರ ಹೃದಯ ವೈರಿಗಳಲ್ಲ: RSS ಮುಖ್ಯಸ್ಥ ಮೋಹನ್ ಭಾಗವತ್

ರಷ್ಯಾ-ಭಾರತ ನಡುವೆ ನೇರ ರೈಲು ಸಂಪರ್ಕ? ರಷ್ಯಾದಿಂದ ಮಹತ್ವದ ಪ್ರಸ್ತಾವನೆ!

ರಸಪ್ರಶ್ನೆ ಸ್ಪರ್ಧೆಯಲ್ಲಿ ವಿ.ಡಿ ಸಾವರ್ಕರ್ ಹೊಗಳಿಕೆಯ ಪ್ರಶ್ನೆ! ಕೇರಳದ ಶಿಕ್ಷಕ ಅಮಾನತು!