ಹಾರ್ಮುಜ್ ಜಲಸಂಧಿ ದಾಟಿದ ಭಾರತದ ಹಡಗು (ಸಂಗ್ರಹ ಚಿತ್ರ) online desk
ದೇಶ

ಹಾರ್ಮುಜ್ ದಾಟಿದ LPG ಹೊತ್ತ ಭಾರತದ ಎರಡು ಹಡಗು; ದಾಳಿಯಿಂದ ಮುಳುಗಿದ ಮತ್ತೊಂದು ಟ್ಯಾಂಕರ್‌!

ಎಲ್‌ಪಿಜಿ ಟ್ಯಾಂಕರ್ ಸಿಮಿ, ಮೇ 13 ರಂದು ಜಲಸಂಧಿಯ ಮೂಲಕ ಸಾಗಿತು. ಅಲ್ಲದೆ ಎನ್‌ವಿ ಸನ್‌ಶೈನ್ ಗುರುವಾರ ಜಲಮಾರ್ಗವನ್ನು ಸುರಕ್ಷಿತವಾಗಿ ದಾಟಿತು.

ನವದೆಹಲಿ: ಪಶ್ಚಿಮ ಏಷ್ಯಾ ಸಂಘರ್ಷದ ನಡುವೆ ಭಾರತಕ್ಕೆ ಬರುತ್ತಿದ್ದ ಎರಡು ದ್ರವೀಕೃತ ಪೆಟ್ರೋಲಿಯಂ ಅನಿಲ(LPG) ಹೊತ್ತ ಹಡಗುಗಳು ಹಾರ್ಮುಜ್ ಜಲಸಂಧಿಯನ್ನು ದಾಟಿವೆ. ಆದರೆ ಭಾರತದ ಧ್ವಜ ಹೊಂದಿದ್ದ ಮತ್ತೊಂದು ಹಡಗು ಆಯಕಟ್ಟಿನ ಹಡಗು ಕಾರಿಡಾರ್ ಬಳಿ ಡಿಕ್ಕಿ ಹೊಡೆದು ಮುಳುಗಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.

ಎಲ್‌ಪಿಜಿ ಟ್ಯಾಂಕರ್ ಸಿಮಿ, ಮೇ 13 ರಂದು ಜಲಸಂಧಿಯ ಮೂಲಕ ಸಾಗಿತು. ಅಲ್ಲದೆ ಎನ್‌ವಿ ಸನ್‌ಶೈನ್ ಗುರುವಾರ ಜಲಮಾರ್ಗವನ್ನು ಸುರಕ್ಷಿತವಾಗಿ ದಾಟಿತು.

ಇದರೊಂದಿಗೆ ಎರಡು ತಿಂಗಳ ಹಿಂದೆ ಇರಾನ್ ಮೇಲೆ ಅಮೆರಿಕ-ಇಸ್ರೇಲ್ ಜಂಟಿ ದಾಳಿ ನಂತರ ಟೆಹ್ರಾನ್ ಪ್ರತೀಕಾರ ತೀರಿಸಿಕೊಳ್ಳಲು ಹಾರ್ಮುಜ್ ಮುಚ್ಚಲ್ಪಟ್ಟ ನಂತರ ಆ ಜಲ ಮಾರ್ಗವನ್ನು ದಾಟಿದ ಒಟ್ಟು ಭಾರತೀಯ ಹಡಗುಗಳ ಸಂಖ್ಯೆ 13 ಕ್ಕೆ ತಲುಪಿದೆ.

ಪ್ರತ್ಯೇಕ ಘಟನೆಯಲ್ಲಿ, ಸೊಮಾಲಿಯಾದಿಂದ ಯುಎಇಯ ಶಾರ್ಜಾಗೆ ಪ್ರಯಾಣಿಸುತ್ತಿದ್ದ ಭಾರತೀಯ ಧೋವ್ ಅಥವಾ ಯಾಂತ್ರಿಕೃತ ನೌಕಾಯಾನ ಹಡಗು(MSV) ಹಾಜಿ ಅಲಿ ಬುಧವಾರ ಬೆಳಗ್ಗೆ ಒಮಾನಿ ನೀರಿನಲ್ಲಿ ದಾಳಿಗೆ ಒಳಗಾಗಿದೆ. ದಾಳಿ ನಂತರ ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅದು ಮುಳುಗಲು ಕಾರಣವಾಯಿತು ಎಂದು ಬಂದರು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಮುಖೇಶ್ ಮಂಗಲ್ ಹೇಳಿದ್ದಾರೆ.

"(ಹಾಜಿ ಅಲಿ) ಹಡಗಿನಲ್ಲಿದ್ದ ಎಲ್ಲಾ 14 ಸಿಬ್ಬಂದಿಯನ್ನು ಒಮಾನಿ ಕರಾವಳಿ ಕಾವಲು ಪಡೆ ಸುರಕ್ಷಿತವಾಗಿ ರಕ್ಷಿಸಿದೆ ಮತ್ತು ಅವರು ಒಮಾನ್‌ನ ದಿಬ್ಬಾ ಬಂದರನ್ನು ತಲುಪಿದ್ದಾರೆ. ಸಿಬ್ಬಂದಿ ಸುರಕ್ಷಿತರಾಗಿದ್ದಾರೆಂದು ವರದಿಯಾಗಿದೆ ಮತ್ತು ಸ್ಥಳೀಯ ಅಧಿಕಾರಿಗಳೊಂದಿಗೆ ಅಗತ್ಯ ಔಪಚಾರಿಕತೆಗಳು ಪೂರ್ಣಗೊಂಡಿವೆ" ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಜನ್ಮಸಿದ್ಧ ಪೌರತ್ವ ರದ್ದತಿ ಆದೇಶಕ್ಕೆ ಸುಪ್ರೀಂ ಕೋರ್ಟ್ ಬ್ರೇಕ್; ಟ್ರಂಪ್‌ಗೆ ಭಾರೀ ಶಾಕ್, 'ದೇಶಕ್ಕೆ ಮಾರಕ' ಎಂದ ಅಮೆರಿಕ ಅಧ್ಯಕ್ಷ..!

ವಾಣಿಜ್ಯ LPG ಸಿಲಿಂಡರ್ ದರದಲ್ಲಿ ಭಾರೀ ಇಳಿಕೆ; ಇಂದಿನಿಂದ ಹೊಸ ದರ ಜಾರಿ, ಬೆಂಗಳೂರಿನಲ್ಲಿ ಇಂದಿನ ರೇಟ್ ಎಷ್ಟು..?

ಜನ್ಮಸಿದ್ಧ ಪೌರತ್ವ ವಿವಾದ: ಸುಪ್ರೀಂಕೋರ್ಟ್ ತೀರ್ಪು ಬೆನ್ನಲ್ಲೇ ಚೀನಾಗೆ ಅಭಿನಂದನೆ ತಿಳಿಸಿದ ಟ್ರಂಪ್, ಕಾರಣ..?

ಮಂಗಳೂರಿನಲ್ಲಿ ಭಾರೀ ಮಳೆಗೆ ಭೂಕುಸಿತ: ಮನೆಯ ಮೇಲೆ ಮಣ್ಣು ಕುಸಿದು ಮೂವರ ದುರ್ಮರಣ, ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ಘೋಷಣೆ..!

ರಾಜಸ್ಥಾನ: Delhi-Mumbai ಎಕ್ಸ್‌ಪ್ರೆಸ್‌ವೇ; ಟ್ರಕ್‌ಗೆ ಡಿಕ್ಕಿ ಹೊಡೆದು ಹೊತ್ತಿ ಉರಿದ ಬಸ್; 7 ಮಂದಿ ಸಜೀವ ದಹನ, 15 ಜನರಿಗೆ ಗಾಯ