ಪತ್ನಿ ಜತೆ ಯಾಸಿನ್ ಮಲಿಕ್ 
ದೇಶ

'ನನಗಾಗಿ ವಿಧವೆಯಂತೆ ಬದುಕುವುದು ಇಷ್ಟವಿಲ್ಲ': ತಿಹಾರ್‌ ಜೈಲಿಂದಲೇ ಪಾಕ್ ಪತ್ನಿಗೆ ವಿಚ್ಛೇದನ ನೀಡಲು ಮುಂದಾದ ಯಾಸಿನ್ ಮಲಿಕ್!

2019 ರಿಂದ ತಿಹಾರ್‌ನಲ್ಲಿರುವ ಮಲಿಕ್, ಬುಧವಾರ ತಮ್ಮ ವಕೀಲ ಅಬು ಆದಿಲ್ ಪಂಡಿತ್ ಮೂಲಕ ಶ್ರೀನಗರದ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯಕ್ಕೆ 25 ಪುಟಗಳ ಅಫಿಡವಿಟ್‌ ಸಲ್ಲಿಸಿದ್ದು, ಅದರಲ್ಲಿ ಪತ್ನಿಗೆ ವಿಚ್ಛೇದನ ನೀಡುವ ವಿಷಯವನ್ನು ತಿಳಿಸಿದ್ದಾನೆ.

ನವದೆಹಲಿ: ತಿಹಾರ್ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಪ್ರತ್ಯೇಕತಾವಾದಿ ನಾಯಕ ಮತ್ತು ನಿಷೇಧಿತ ಉಗ್ರ ಸಂಘಟನೆಯಾದ ಜಮ್ಮು ಮತ್ತು ಕಾಶ್ಮೀರ ಲಿಬರೇಶನ್ ಫ್ರಂಟ್ (ಜೆಕೆಎಲ್‌ಎಫ್) ಮುಖ್ಯಸ್ಥ ಯಾಸಿನ್ ಮಲಿಕ್ ತನ್ನ ಪಾಕಿಸ್ತಾನದ ಪತ್ನಿ ಮುಷಾಲ್ ಹುಸೇನ್ ಗೆ ವಿಚ್ಛೇದನ ನೀಡಲು ನಿರ್ಧರಿಸಿದ್ದಾನೆ.

1990ರ ಸರಳಾ ಭಟ್ ಕೊಲೆ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಯಾಸಿನ್ ಮಲಿಕ್ ತನ್ನ ಶಿಕ್ಷೆಯನ್ನು ಪ್ರಶ್ನಿಸುವುದಿಲ್ಲ ಎಂದು ಹೇಳಿದ್ದಾರೆ.

2019 ರಿಂದ ತಿಹಾರ್‌ನಲ್ಲಿರುವ ಮಲಿಕ್, ಬುಧವಾರ ತಮ್ಮ ವಕೀಲ ಅಬು ಆದಿಲ್ ಪಂಡಿತ್ ಮೂಲಕ ಶ್ರೀನಗರದ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯಕ್ಕೆ 25 ಪುಟಗಳ ಅಫಿಡವಿಟ್‌ ಸಲ್ಲಿಸಿದ್ದು, ಅದರಲ್ಲಿ ಪತ್ನಿಗೆ ವಿಚ್ಛೇದನ ನೀಡುವ ವಿಷಯವನ್ನು ತಿಳಿಸಿದ್ದಾನೆ.

ಕಾಶ್ಮೀರಿ ಪಂಡಿತ್ ನರ್ಸ್ ಸರಳಾ ಭಟ್ ಕೊಲೆ ಪ್ರಕರಣದಲ್ಲಿ ತನಗೆ ವಿಧಿಸಲಾಗಿರುವ ಗಲ್ಲು ಶಿಕ್ಷೆಯನ್ನು ಪ್ರಶ್ನಿಸಲು ಬಯಸುವುದಿಲ್ಲ ಎಂದು ಮಲಿಕ್ ಹೇಳಿದ್ದಾನೆ. ಆದಾಗ್ಯೂ, ತನ್ನ ಈ ನಿರ್ಧಾರವನ್ನು ತಪ್ಪೊಪ್ಪಿಗೆ ಎಂದು ಅರ್ಥೈಸಿಕೊಳ್ಳಬಾರದು ಎಂದು ಸ್ಪಷ್ಟಪಡಿಸಿದ್ದಾರೆ.

ನನಗಾಗಿ ವಿಧವೆಯಂತೆ ಬದುಕುವುದು ಇಷ್ಟವಿಲ್ಲ

ಕಳೆದ 8 ವರ್ಷಗಳಿಂದ ಮುಷಾಲ್ ಜೊತೆ ಮಾತನಾಡಿಲ್ಲ ಮತ್ತು ಫೋನ್ ಕಾಲ್‌, ವಿಡಿಯೋ ಕಾಲ್‌ನಲ್ಲಿಯೂ ಸಹ ಆಕೆಯೊಂದಿಗೆ ಮಾತನಾಡಲು ಅವಕಾಶ ನೀಡಿಲ್ಲ ಎಂದು ಮಲಿಕ್ ಅಫಿಡವಿಟ್‌ನಲ್ಲಿ ತಿಳಿಸಿದ್ದಾನೆ.

ನನ್ನನ್ನು ಮದುವೆಯಾಗಿದ್ದರೂ ಒಂಟಿಯಾಗಿ ಜೀವನ ನಡೆಸುತ್ತಿರುವ ಮುಷಾಲ್‌ಳನ್ನು ನನ್ನ ಅನಿಶ್ಚಿತತೆಯ ಜೀವನದಿಂದ ಮುಕ್ತಗೊಳಿಸಲು ಈ ನಿರ್ಧಾರವನ್ನು ನಾನು ತೆಗೆದುಕೊಂಡಿದ್ದೇನೆ ಎಂದು ಮಲಿಕ್ ಸ್ಪಷ್ಟಪಡಿಸಿದ್ದಾನೆ.

ವಿಚ್ಛೇದನ ಕೋರಲು ಕಾರಣವನ್ನು ವಿವರಿಸಿದ ಯಾಸಿನ್ ಮಲಿಕ್. ಆಕೆ ಮದುವೆಯಾಗಿದ್ದರೂ ನನಗಾಗಿ ವಿಧವೆಯಂತೆ ಬದುಕುತ್ತಿರುವುದು ನನಗೆ ಇಷ್ಟವಿಲ್ಲ. ಇನ್ನಾದರೂ ಮುಷಾಲ್‌ ತನ್ನ ಮೇಲಿನ ಹೊರೆಯನ್ನು ಇಳಿಸಿಕೊಂಡು ಹೊಸದಾಗಿ ಸುಂದರ ಜೀವನ ಪ್ರಾರಂಭಿಸಬೇಕೆಂದು ನಾನು ಬಯಸುತ್ತೇನೆ. ಮುಷಾಲ್‌ ನನಗಿಂತ 20 ವರ್ಷ ಚಿಕ್ಕವಳು. ಅವಳಿಗಿನ್ನೂ ಹೊಸ ಬದುಕು ರೂಪಿಸಿಕೊಳ್ಳಲು ಅವಕಾಶವಿದೆ. ಆದ್ದರಿಂದ ನನ್ನನ್ನು ಮರೆತು ಹೊಸ ಹೆಜ್ಜೆ ಹಾಕಲು ಮುಂದಾಗು ಎಂದು ವಿನಂತಿಸಿಕೊಂಡಿದ್ದಾನೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಪಾಕ್‌ನ F-16 ವಿಮಾನ ಹೊಡೆದುರುಳಿಸಿದ್ದ ಅಭಿನಂದನ್ ಅವಧಿಗೂ ಮುನ್ನವೇ ನಿವೃತ್ತಿ; ಈಗ ಗೋವಾ ಏರ್ಲೈನ್ಸ್ ಪೈಲಟ್!

KPSC ಹಗರಣ: ಕುಮಾರಸ್ವಾಮಿ ವಿರುದ್ದವೇ ಪ್ರಾಸಿಕ್ಯೂಷನ್ ಅಸ್ತ್ರ? ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಸಾಧ್ಯತೆ

Asian Games 2026: ಟೀಂ ಇಂಡಿಯಾ ಮುಖ್ಯ ಕೋಚ್ ಆಗಿ ವಿವಿಎಸ್ ಲಕ್ಷ್ಮಣ್ ನೇಮಕ

ಜೈಲು ಕೈದಿ ಜೊತೆಗೆ ಸರಸ ಸಲ್ಲಾಪ: PSI ಜಯಶ್ರೀ ಸಸ್ಪೆಂಡ್!

ಹಾಸನ: KSRTC ಬಸ್, ATM ವಾಹನದ ನಡುವೆ ಭೀಕರ ಅಪಘಾತ; ಓರ್ವ ಸಾವು, ನಾಲ್ವರಿಗೆ ಗಂಭೀರ ಗಾಯ