ಬ್ರಿಕ್ಸ್ ಸಮಾವೇಶದಲ್ಲಿ ಪಶ್ಚಿಮ ಏಷ್ಯಾ ಬಿಕ್ಕಟ್ಟು ಚರ್ಚೆ 
ದೇಶ

BRICS Summit: ಪಶ್ಚಿಮ ಏಷ್ಯಾ ಸಂಘರ್ಷ ಕುರಿತ ಜಂಟಿ ಹೇಳಿಕೆಗೆ ಬ್ರಿಕ್ಸ್ ರಾಷ್ಟ್ರಗಳ ಒಮ್ಮತ, ಇರಾನ್ ಸಂಘರ್ಷದಲ್ಲಿ ಪಾತ್ರ ನಿರಾಕರಿಸಿದ UAE

ಭಾರತದ ಆತಿಥ್ಯದಲ್ಲಿ ದೆಹಲಿಯಲ್ಲಿ ನಡೆಯುತ್ತಿರುವ 18ನೇ BRICS ಶೃಂಗಸಭೆಯ ಸಂದರ್ಭದಲ್ಲಿ ಈ ಒಮ್ಮತ ಮೂಡಿರುವುದು ಮಹತ್ವದ ರಾಜತಾಂತ್ರಿಕ ಬೆಳವಣಿಗೆ ಎಂದು ಪರಿಗಣಿಸಲಾಗಿದೆ.

ನವದೆಹಲಿ: ಪಶ್ಚಿಮ ಏಷ್ಯಾದ ಸಂಘರ್ಷದ ಕುರಿತು ಜಂಟಿ ಹೇಳಿಕೆಯಲ್ಲಿನ ಭಾಷೆಗೆ ಸಂಬಂಧಿಸಿದಂತೆ ಉಂಟಾಗಿದ್ದ ಭಿನ್ನಾಭಿಪ್ರಾಯಗಳನ್ನು ನಿವಾರಿಸುವಲ್ಲಿ BRICS ರಾಷ್ಟ್ರಗಳು ಯಶಸ್ವಿಯಾಗಿವೆ.

ನಾಯಕರ ಸುದೀರ್ಘ ಮಾತುಕತೆಗಳ ಬಳಿಕ ಬ್ರಿಕ್ಸ್ ನಾಯಕರು ಹೊರಡಿಸಲಿರುವ ಜಂಟಿ ಹೇಳಿಕೆಗೆ ಒಮ್ಮತ ಮೂಡಿದೆ ಎಂದು ಹೇಳಲಾಗಿದೆ.

ಭಾರತದ ಆತಿಥ್ಯದಲ್ಲಿ ದೆಹಲಿಯಲ್ಲಿ ನಡೆಯುತ್ತಿರುವ 18ನೇ BRICS ಶೃಂಗಸಭೆಯ ಸಂದರ್ಭದಲ್ಲಿ ಈ ಒಮ್ಮತ ಮೂಡಿರುವುದು ಮಹತ್ವದ ರಾಜತಾಂತ್ರಿಕ ಬೆಳವಣಿಗೆ ಎಂದು ಪರಿಗಣಿಸಲಾಗಿದೆ.

ವಿಸ್ತರಿತ BRICS ಗುಂಪಿನ ಭಾಗವಾಗಿರುವ ಇರಾನ್, ಸೌದಿ ಅರೇಬಿಯಾ ಮತ್ತು ಯುಎಇ ನಡುವೆ ಪಶ್ಚಿಮ ಏಷ್ಯಾ ಸಂಘರ್ಷದ ವಿಚಾರದಲ್ಲಿ ಭಿನ್ನ ನಿಲುವುಗಳಿರುವುದು ಮಾತುಕತೆಗಳನ್ನು ಕಠಿಣಗೊಳಿಸಿತ್ತು.

ಈ ಭಿನ್ನಾಭಿಪ್ರಾಯಗಳು ಶೃಂಗಸಭೆಯ ಜಂಟಿ ಹೇಳಿಕೆಗೆ ಅಡ್ಡಿಯಾಗದಂತೆ ಭಾರತವು ಅಧಿಕಾರಿಗಳು ಹಾಗೂ ರಾಜಕೀಯ ಮಟ್ಟದಲ್ಲಿ ನಿರಂತರ ಸಮಾಲೋಚನೆ ನಡೆಸಿತು ಎಂದು ಮೂಲಗಳು ತಿಳಿಸಿವೆ.

ಪಶ್ಚಿಮ ಏಷ್ಯಾ ಸಂಘರ್ಷಕ್ಕೆ ಸಂಬಂಧಿಸಿದ ಜಂಟಿ ಹೇಳಿಕೆ

ಪಶ್ಚಿಮ ಏಷ್ಯಾ ಸಂಘರ್ಷಕ್ಕೆ ಸಂಬಂಧಿಸಿದ ಜಂಟಿ ಹೇಳಿಕೆಯ ಭಾಷೆಯೇ ಮಾತುಕತೆಯಲ್ಲಿನ ಪ್ರಮುಖ ಸವಾಲಾಗಿತ್ತು. ಇರಾನ್ ಮೇಲೆ ನಡೆದ ಏಕಪಕ್ಷೀಯ ದಾಳಿಯನ್ನು ಸ್ಪಷ್ಟವಾಗಿ ಉಲ್ಲೇಖಿಸಬೇಕು ಹಾಗೂ ಅದು ವಿಶ್ವಸಂಸ್ಥೆಯ (UN) ಚಾರ್ಟರ್ ಉಲ್ಲಂಘನೆಯಾಗಿದೆ ಎಂಬ ತನ್ನ ನಿಲುವನ್ನು ಹೇಳಿಕೆಯಲ್ಲಿ ಸೇರಿಸಬೇಕೆಂದು ಇರಾನ್ ಒತ್ತಾಯಿಸಿತ್ತು.

ಇನ್ನೊಂದೆಡೆ, ಇರಾನ್ ತನ್ನ ಸಾರ್ವಭೌಮತ್ವ ಹಾಗೂ ಭೌಗೋಳಿಕ ಪ್ರದೇಶದ ಮೇಲೆ ದಾಳಿ ನಡೆಸಿದೆ ಎಂಬ ಯುಎಇಯ ನಿಲುವಿಗೂ ಹೇಳಿಕೆಯಲ್ಲಿ ಸೂಕ್ತ ಸ್ಥಾನ ನೀಡಬೇಕೆಂಬ ಬೇಡಿಕೆ ಇತ್ತು.

ಸಾರ್ವಭೌಮತ್ವ, ಪ್ರಾದೇಶಿಕ ಸಮಗ್ರತೆ ಮತ್ತು UN ಚಾರ್ಟರ್ ಉಲ್ಲಂಘನೆಗೆ ಸಂಬಂಧಿಸಿದ ಅಂಶಗಳನ್ನು ಸಾಮಾನ್ಯ ಹಾಗೂ ವ್ಯಾಪಕ ಭಾಷೆಯಲ್ಲಿ ಸೇರಿಸುವ ಕುರಿತು ಮಾತುಕತೆ ನಡೆದಿದೆ. ಆದರೆ ತನ್ನ ನಿರ್ದಿಷ್ಟ ನಿಲುವನ್ನು ಸಾಮಾನ್ಯ ಹೇಳಿಕೆಯೊಳಗೆ ಸೇರಿಸುವ ಪ್ರಯತ್ನಕ್ಕೆ ಇರಾನ್ ಆರಂಭದಲ್ಲಿ ಆಕ್ಷೇಪ ವ್ಯಕ್ತಪಡಿಸಿತ್ತು ಎಂದು ಮೂಲಗಳು ತಿಳಿಸಿವೆ.

ಇರಾನ್ ಸಂಘರ್ಷದಲ್ಲಿ ತನ್ನ ಪಾತ್ರ ನಿರಾಕರಿಸಿದ UAE

ಇರಾನ್ ಸಂಘರ್ಷದಲ್ಲಿ ತನ್ನ ಪಾತ್ರದ ಕುರಿತು ಮಾಡಿರುವ ಆರೋಪಗಳನ್ನು ಯುಎಇ ತಿರಸ್ಕರಿಸಿದೆ. ಇರಾನ್ ನಡೆಸಿದ ದಾಳಿಗಳು UN ಚಾರ್ಟರ್ ಮತ್ತು ಅಂತಾರಾಷ್ಟ್ರೀಯ ಕಾನೂನಿನ ಉಲ್ಲಂಘನೆ ಎಂದು ಯುಎಇ ಹೇಳಿಕೊಂಡಿದೆ.

ಮತ್ತೊಂದೆಡೆ, ಅಮೆರಿಕದ ಸೇನಾ ಕಾರ್ಯಾಚರಣೆಗಳಿಗೆ ತನ್ನ ಪ್ರದೇಶದಲ್ಲಿರುವ ಅಮೆರಿಕದ ಸೇನಾ ಮೂಲಸೌಕರ್ಯಗಳನ್ನು ಕೆಲವು ಗಲ್ಫ್ ರಾಷ್ಟ್ರಗಳು ಬಳಸಲು ಅವಕಾಶ ನೀಡಿವೆ ಎಂದು ಇರಾನ್ ಆರೋಪಿಸಿದೆ. ತನ್ನ ಪ್ರತಿದಾಳಿ ಕೇವಲ ಅಮೆರಿಕದ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡಿದೆ ಎಂದು ಇರಾನ್ ಸಮರ್ಥಿಸಿಕೊಂಡಿದೆ.

ಗಾಜಾ ಪ್ಯಾಲೆಸ್ತೀನ್ ಅವಿಭಾಜ್ಯ ಅಂಗ

ಪ್ಯಾಲೆಸ್ತೀನ್ ವಿಚಾರದಲ್ಲಿ ಮಾತ್ರ ಮಾತುಕತೆ ತುಸು ಸುಗಮವಾಗಿತ್ತು. 2025ರ ರಿಯೊ ಘೋಷಣೆಯಲ್ಲಿ ಗಾಜಾವನ್ನು ‘ಆಕ್ರಮಿತ ಪ್ಯಾಲೆಸ್ತೀನ್ ಪ್ರದೇಶದ ಅವಿಭಾಜ್ಯ ಭಾಗ’ ಎಂದು ಉಲ್ಲೇಖಿಸಿರುವ ಅಂಶವನ್ನು ಮುಂದುವರಿಸಲು ಬಹುತೇಕ ರಾಷ್ಟ್ರಗಳ ಒಪ್ಪಿಗೆ ಇತ್ತು. ಗಾಜಾ ಮತ್ತು ವೆಸ್ಟ್ ಬ್ಯಾಂಕ್ ಪ್ರದೇಶಗಳನ್ನು ಪ್ಯಾಲೆಸ್ತೀನ್ ಪ್ರಾಧಿಕಾರದ ಅಡಿಯಲ್ಲಿ ಒಗ್ಗೂಡಿಸುವ ಬಗ್ಗೆಯೂ ಜಂಟಿ ಹೇಳಿಕೆಯಲ್ಲಿ ಉಲ್ಲೇಖಿಸುವ ಸಾಧ್ಯತೆಯಿದೆ.

ಸುದೀರ್ಘ ಮಾತುಕತೆಗಳ ಬಳಿಕ ಜಂಟಿ ಹೇಳಿಕೆಗೆ ಒಮ್ಮತ ಮೂಡಿರುವುದು ಶೃಂಗಸಭೆಯ ಅಂತಿಮ ಫಲಿತಾಂಶವನ್ನು ರೂಪಿಸುವಲ್ಲಿ ಭಾರತದ ರಾಜತಾಂತ್ರಿಕ ಪ್ರಯತ್ನಗಳಿಗೆ ಮಹತ್ವದ ಯಶಸ್ಸು ಎಂದು ಪರಿಗಣಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

BRICS 'ನವದೆಹಲಿ ಘೋಷಣೆ 2026' ಗೆ ಸರ್ವಾನುಮತದ ಅಂಗೀಕಾರ: ಭಾರತಕ್ಕೆ ಪ್ರಮುಖ ರಾಜತಾಂತ್ರಿಕ ಪ್ರಗತಿ

ನನ್ನ ವಿರುದ್ಧ EDಗೆ ದೂರು ನೀಡಿದ್ದು ಯಾರು ಅಂತ ಗೊತ್ತು: ಇ.ಡಿ ದಾಳಿ ಬೆನ್ನಲ್ಲೇ ಸತೀಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ

ಕ್ಯಾಲಿಫೋರ್ನಿಯಾದ ರೆಸ್ಟೋರೆಂಟ್ ಹೊರಗೆ ಭಾರತೀಯ ಮೂಲದ ಮಹಿಳೆಗೆ ಗುಂಡಿಕ್ಕಿ ಹತ್ಯೆ, ಆರೋಪಿ ಆತ್ಮಹತ್ಯೆ!

ಇಬ್ಬರು ಮಲಯಾಳಿ ಗೆಳತಿಯರ ಹತ್ಯೆ: ಒಬ್ಬರಿಗೆ ಚಾಕುವಿನಿಂದ ಇರಿದು, ಮತ್ತೊಬ್ಬರ ಮೇಲೆ ಕಾರು ಹತ್ತಿಸಿದ್ದ ಭಾರತ ಮೂಲದ ಮಹಿಳೆ ಬಂಧನ!

ಮಸೀದಿ ಮುಂದೆ ಗಣೇಶ ಮೆರವಣಿಗೆ ಹೋಗುವಂತಿಲ್ಲ, ಪಟಾಕಿ ಸಿಡಿಸಿದ್ರೆ ಗ್ರಹಚಾರ ಬಿಡಿಸ್ತೇನೆ: ಇನ್ಸ್​​ಪೆಕ್ಟರ್ ಧನಂಜಯ್ ಗೆ ಪ್ರತಾಪ್ ಸಿಂಹ ವಾರ್ನಿಂಗ್!