ಆದಿತ್ಯ ಠಾಕ್ರೆ 
ದೇಶ

ದಿಶಾ ಸಾಲಿಯಾನ್ ಸಾವು ಪ್ರಕರಣ: ಆದಿತ್ಯ ಠಾಕ್ರೆಗೆ ₹500 ಮಾನನಷ್ಟ ಮೊಕದ್ದಮೆ ನೋಟಿಸ್!

ನ್ಯಾಯಕ್ಕಾಗಿ ಸತೀಶ್ ಸಾಲಿಯಾನ್ ನಡೆಸುತ್ತಿರುವ ಹೋರಾಟವನ್ನು 'ರಾಜಕೀಯ ಪ್ರೇರಿತ' ಎಂದು ಬಿಂಬಿಸಲು ಈ ಇಬ್ಬರೂ ನಾಯಕರು ಪ್ರಯತ್ನಿಸಿದ್ದಾರೆ ಎಂದು ನೋಟಿಸ್‌ನಲ್ಲಿ ಆರೋಪಿಸಲಾಗಿದೆ.

ನವದೆಹಲಿ/ಮುಂಬೈ: ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಲೀಗಲ್ ನೋಟಿಸ್ ಜಾರಿ ಮಾಡಲಾಗಿದೆ. ಶಿವಸೇನೆ (ಯುಬಿಟಿ) ನಾಯಕ ಆದಿತ್ಯ ಠಾಕ್ರೆ ಹಾಗೂ ಎನ್‌ಸಿಪಿ (ಎಸ್‌ಪಿ) ನಾಯಕ ಮತ್ತು ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ಅವರಿಂದ ದಿಶಾ ಅವರ ತಂದೆ ಸತೀಶ್ ಸಾಲಿಯನ್ ₹500 ಕೋಟಿ ಪರಿಹಾರ ಕೋರಿದ್ದಾರೆ.

ನ್ಯಾಯಕ್ಕಾಗಿ ಸತೀಶ್ ಸಾಲಿಯಾನ್ ನಡೆಸುತ್ತಿರುವ ಹೋರಾಟವನ್ನು 'ರಾಜಕೀಯ ಪ್ರೇರಿತ' ಎಂದು ಬಿಂಬಿಸಲು ಈ ಇಬ್ಬರೂ ನಾಯಕರು ಪ್ರಯತ್ನಿಸಿದ್ದಾರೆ ಎಂದು ನೋಟಿಸ್‌ನಲ್ಲಿ ಆರೋಪಿಸಲಾಗಿದೆ.

28 ವರ್ಷದ ದಿಶಾ ಸಾಲಿಯಾನ್ ಅವರು 2020ರ ಜೂನ್ 8ರಂದು ಮುಂಬೈನ ಮಲಾಡ್ ಪ್ರದೇಶದಲ್ಲಿರುವ ಎತ್ತರದ ವಸತಿ ಕಟ್ಟಡವೊಂದರಿಂದ ಬಿದ್ದು ಮೃತಪಟ್ಟಿದ್ದರು. ಪೊಲೀಸರು ಈ ಘಟನೆಯನ್ನು ಆಕಸ್ಮಿಕ ಸಾವು ಎಂದು ಪರಿಗಣಿಸಿ, 'ಆಕಸ್ಮಿಕ ಸಾವು ವರದಿ'ಯನ್ನು (ADR) ದಾಖಲಿಸಿಕೊಂಡರು. ಇದಾದ ಆರು ದಿನಗಳ ನಂತರ ನಟ ಸುಶಾಂತ್ ಸಿಂಗ್ ರಜಪೂತ್ (ಜೂನ್ 14) ನಿಧನರಾದರು.

ಕೆಲವು ದಿನಗಳ ನಂತರ, ಆರಂಭದಲ್ಲಿ ಯಾವುದೇ ಅಪರಾಧದ ಆಯಾಮದ ಬಗ್ಗೆ ತಮಗೆ ಸಂಶಯವಿಲ್ಲ ಎಂದು ಹೇಳಿದ್ದ ದಿಶಾ ಅವರ ತಂದೆ, ಎಫ್‌ಐಆರ್ ದಾಖಲಿಸುವಂತೆ ಮತ್ತು ಹೊಸದಾಗಿ ತನಿಖೆ ನಡೆಸುವಂತೆ ಕೋರಿ ಬಾಂಬೆ ಹೈಕೋರ್ಟ್‌ನ ಮೊರೆ ಹೋದರು. ಆದಿತ್ಯ ಠಾಕ್ರೆ, ಡಿನೋ ಮೋರಿಯಾ ಮತ್ತು ಸೂರಜ್ ಪಂಚೋಲಿ ಸೇರಿದಂತೆ ಹಲವು ವ್ಯಕ್ತಿಗಳ ವಿರುದ್ಧದ ಆರೋಪಗಳ ಕುರಿತು ತನಿಖೆ ನಡೆಸುವಂತೆ ಈ ಅರ್ಜಿಯಲ್ಲಿ ಕೋರಲಾಗಿತ್ತು.

ಆರು ವರ್ಷಗಳ ನಂತರ, ಕೇಂದ್ರೀಯ ತನಿಖಾ ದಳವು (ಸಿಬಿಐ) ತನಿಖೆಯನ್ನು ವಹಿಸಿಕೊಂಡಿದೆ.

₹500 ಕೋಟಿ ಮೊತ್ತದ ಮಾನನಷ್ಟ ಮೊಕದ್ದಮೆ

ಸತೀಶ್ ಸಾಲಿಯಾನ್ ಅವರ ಉದ್ದೇಶಗಳನ್ನು ಪ್ರಶ್ನಿಸಿದ್ದಲ್ಲದೆ, ನ್ಯಾಯಕ್ಕಾಗಿ ಅವರು ನಡೆಸಿದ ಹೋರಾಟವನ್ನು 'ರಾಜಕೀಯ ಪ್ರೇರಿತ, ದುರುದ್ದೇಶಪೂರಿತ ಮತ್ತು ತಮ್ಮ ವರ್ಚಸ್ಸಿಗೆ ಧಕ್ಕೆ ತರುವ ಗುಪ್ತ ಉದ್ದೇಶದಿಂದ ಕೂಡಿದೆ' ಎಂದು ಬಿಂಬಿಸಲು ಪ್ರಯತ್ನಿಸಿದ್ದಾರೆ ಎಂದು ಆದಿತ್ಯ ಠಾಕ್ರೆ ವಿರುದ್ಧ ₹500 ಕೋಟಿ ಲೀಗಲ್ ನೋಟಿಸ್‌ನಲ್ಲಿ ಆರೋಪಿಸಲಾಗಿದೆ.

'ಮೇಲ್ಕಂಡ ಆರೋಪಗಳು ಸುಳ್ಳು, ಆಧಾರರಹಿತ, ಬೇಜವಾಬ್ದಾರಿಯುತ ಮತ್ತು ತೀವ್ರವಾಗಿ ಮಾನಹಾನಿಕರವಾಗಿದ್ದು, ಯಾವುದೇ ವಿಶ್ವಾಸಾರ್ಹ ಸಾಕ್ಷ್ಯಾಧಾರಗಳಿಲ್ಲದೆ ಹಾಗೂ ಕೇವಲ ನಿಮ್ಮ ದುರುದ್ದೇಶಪೂರಿತ ಮತ್ತು ಅನುಚಿತ ಉದ್ದೇಶಗಳನ್ನು ಈಡೇರಿಸಿಕೊಳ್ಳುವ ಏಕೈಕ ಕಾರಣಕ್ಕಾಗಿ ಮಾಡಲಾಗಿವೆ. ತಮ್ಮ ಮಗಳ ಮೇಲಿನ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಕುರಿತು ಕಾನೂನುಬದ್ಧ ತನಿಖೆಯನ್ನು ಕೋರುತ್ತಿದ್ದ ಶೋಕತಪ್ತ ತಂದೆಯೊಬ್ಬರನ್ನು, ಅನುಚಿತ, ದುರುದ್ದೇಶಪೂರಿತ ಮತ್ತು ರಾಜಕೀಯ ಪ್ರೇರಿತ ಉದ್ದೇಶಕ್ಕಾಗಿ ನ್ಯಾಯಾಂಗ ಪ್ರಕ್ರಿಯೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ವ್ಯಕ್ತಿಯಂತೆ ಬಿಂಬಿಸುವ ಮೂಲಕ, ಈ ಆರೋಪಗಳು ನನ್ನ ಕಕ್ಷಿದಾರರ (ಸತೀಶ್ ಸಾಲಿಯಾನ್) ನೈತಿಕತೆ, ವಿಶ್ವಾಸಾರ್ಹತೆ, ಪ್ರಾಮಾಣಿಕತೆ ಮತ್ತು ಸದುದ್ದೇಶಗಳ ಮೇಲೆ ನೇರ ಹಾಗೂ ಗಂಭೀರವಾದ ಆಪಾದನೆಯನ್ನು ಹೊರಿಸುತ್ತವೆ' ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.

ಸಿಬಿಐ ಈಗಾಗಲೇ ದಿಶಾ ಸಾಲಿಯಾನ್ ಪ್ರಕರಣದ ತನಿಖೆ ನಡೆಸಿ ತಮಗೆ 'ಕ್ಲೀನ್ ಚಿಟ್' ನೀಡಿದೆ ಎಂದು ಠಾಕ್ರೆ 'ತಪ್ಪಾಗಿ ಬಿಂಬಿಸಿದ್ದಾರೆ' ಎಂದೂ ಆರೋಪಿಸಲಾಗಿದೆ.

ತಮ್ಮನ್ನು ಪೀಡಿಸಲು ಸಾಲಿಯನ್ ಅವರನ್ನು 'ಒಂದು ಸಾಧನವಾಗಿ ಬಳಸಿಕೊಳ್ಳಲಾಗುತ್ತಿದೆ' ಎಂದು ಠಾಕ್ರೆ ಹೇಳಿದ್ದಾರೆ ಎನ್ನಲಾಗಿದೆ. ಅನಿಲ್ ದೇಶಮುಖ್ ಈ ಹೇಳಿಕೆಯನ್ನು ಬೆಂಬಲಿಸಿದ್ದರು.

ನೋಟಿಸ್ ಪ್ರಕಾರ, ಮಾರ್ಚ್ 23, 2025 ರಂದು ಅನಿಲ್ ದೇಶಮುಖ್ ಅವರು, ದಿಶಾ ಸಾಲಿಯಾನ್ ಪ್ರಕರಣವು 'ಆದಿತ್ಯ ಠಾಕ್ರೆ ಅವರ ವರ್ಚಸ್ಸಿಗೆ ಧಕ್ಕೆ ತರುವ ಪಿತೂರಿ' ಎಂದು ಹೇಳಿದ್ದರು. ಈ ಹೇಳಿಕೆಯು ವ್ಯಾಪಕ ಪ್ರಚಾರ ಪಡೆಯಿತು ಮತ್ತು ಸತೀಶ್ ಸಾಲಿಯಾನ್ ಅವರನ್ನು 'ಅಪರಾಧ ನ್ಯಾಯ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಳ್ಳುವ, ಅಪ್ರಾಮಾಣಿಕ, ರಾಜಕೀಯ ಪ್ರೇರಿತ ಹಾಗೂ ದುರುದ್ದೇಶಪೂರಿತ ದಾವೆದಾರ' ಎಂದು ಬಿಂಬಿಸಿತು ಎಂದು ಆರೋಪಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಅತಿದೊಡ್ಡ ಲೋಕಾಯುಕ್ತ ದಾಳಿ: ಭೂ ದಾಖಲೆ ತಿದ್ದುಪಡಿಗೆ ಬರೋಬ್ಬರಿ 50 ಲಕ್ಷ ರೂ.ಲಂಚ; ಬಲೆಗೆ ಬಿದ್ದ ಧಾರವಾಡ ತಹಶೀಲ್ದಾರ್!

ಬದಲಾಗುತ್ತಿರುವ ಜಗತ್ತಿನ ನಡುವೆ ನಡೆದ ಬ್ರಿಕ್ಸ್ ಸಭೆಯಲ್ಲಿನ ಕಥೆ! (ಹಣಕ್ಲಾಸು)

ಅಮೆರಿಕಾ ಸುಂಕದ ಬೆದರಿಕೆಗೆ ಜಗ್ಗದ ಭಾರತ: 140 ಕೋಟಿ ಜನರ ಹಿತಾಸಕ್ತಿ ಮುಖ್ಯ, ಇಂಧನ ಭದ್ರತೆ ಕಾಪಾಡಲು ಅಗತ್ಯ ಕ್ರಮ ಎಂದ MEA

76ನೇ ವಸಂತಕ್ಕೆ ಕಾಲಿಟ್ಟ ಪ್ರಧಾನಿ ಮೋದಿ: ರಾಜಕೀಯ ನಾಯಕರಿಂದ ಶುಭಾಶಯ, ‘ವಿಶ್ವದ ಅತ್ಯಂತ ಜನಪ್ರಿಯ ನಾಯಕ’ ಎಂದು ಬಣ್ಣನೆ..!

ಜಮ್ಮು-ಕಾಶ್ಮೀರದಲ್ಲಿ ಭರ್ಜರಿ ಕಾರ್ಯಾಚರಣೆ: ಇಬ್ಬರು ಉಗ್ರರ ಹೊಡೆದುರುಳಿಸಿದ ಭಾರತೀಯ ಸೇನಾಪಡೆ, ಮುಂದುವರೆದ ಕಾರ್ಯಾಚರಣೆ..!