ಮೈದಾನ್ ಚಿತ್ರ TNIE
ಸಿನಿಮಾ ಸುದ್ದಿ

ಅಜಯ್ ದೇವಗನ್ ನಟನೆಯ ಮೈದಾನ್ ಚಿತ್ರಕ್ಕೆ ಮೈಸೂರು ಕೋರ್ಟ್ ನಿಂದ ತಡೆ!

ಅಜಯ್ ದೇವಗನ್ ನಟಯನೆಯ ಬಹುನಿರೀಕ್ಷಿತ ಚಿತ್ರ ಮೈದಾನ್ ಬಿಡುಗಡೆಗೆ ಮೈಸೂರು ಕೋರ್ಟ್ ತಡೆ ನೀಡಿದೆ.

ಮೈಸೂರು: ಅಜಯ್ ದೇವಗನ್ ನಟಯನೆಯ ಬಹುನಿರೀಕ್ಷಿತ ಚಿತ್ರ ಮೈದಾನ್ ಬಿಡುಗಡೆಗೆ ಮೈಸೂರು ಕೋರ್ಟ್ ತಡೆ ನೀಡಿದೆ. ಚಿತ್ರದ ವಿರುದ್ಧ ಮೈಸೂರು ನಗರದ ಕಥೆಗಾರ ಅನಿಲ್ ಕುಮಾರ್ ಅವರು ಕೃತಿಚೌರ್ಯದ ಹಕ್ಕು ಮಂಡಿಸಿದ್ದು, ಕೋರ್ಟ್ ತಡೆ ನೀಡಿರುವುದರಿಂದ ಚಿತ್ರದ ಬಿಡುಗಡೆ ದಿನಾಂಕ ಅನಿಶ್ಚಿತವಾಗಿದೆ.

ಮೈಸೂರು ಪ್ರಧಾನ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಲಯ ಚಿತ್ರ ಬಿಡುಗಡೆಗೆ ತಡೆ ನೀಡಿದೆ.

ಈ ಬಗ್ಗೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿರುವ ವಕೀಲ ಜೆಎಂ ಅಯ್ಯಣ್ಣ, ತಮ್ಮ ಕಕ್ಷಿದಾರ ಅನಿಲ್ ಕುಮಾರ್ ಅವರ ಚಿತ್ರಕಥೆಯಿಂದ ಮೈದಾನ್ ಚಿತ್ರ ತಂಡ ಬಹಳಷ್ಟನ್ನು ತೆಗೆದುಕೊಂಡಿದೆ. ಇದು 1950 ರ ಫಿಫಾ ವಿಶ್ವಕಪ್ ನಿಂದ ಭಾರತ ಫುಟ್ಬಾಲ್ ತಂಡವನ್ನು ಹೊರಗಿಡಲಾದ ಘಟನೆಯನ್ನು ಆಧರಿಸಿದ ಕಥೆಯಾಗಿದೆ ಎಂದು ಹೇಳಿದ್ದಾರೆ.

2010 ರಲ್ಲಿ ಅನಿಲ್ ಈ ಚಿತ್ರ ಕಥೆ ಆರಂಭಿಸಿದ್ದರು. 2019 ರಲ್ಲಿ ಸುಖ್ ದಾಸ್ ಸೂರ್ಯವಂಶಿ ಅವರೊಂದಿಗೆ ಈ ಚಿತ್ರಕಥೆ ಬಗ್ಗೆ ಚರ್ಚಿಸಿದ್ದರು. ಅವರು ಈ ಚಿತ್ರಕಥೆಗೆ ಪತ್ಗಂಡುಗ ಎಂಬ ಹೆಸರನ್ನು ಬಾಂಬೆಯಲ್ಲಿ ಕಥಾ ಲೇಖಕರ ಸಂಘದಲ್ಲಿ ನೋಂದಣಿ ಮಾಡಿಸಿದ್ದರು. ಇತ್ತೀಚೆಗೆ, ಅವರ ಕಥೆ ಮತ್ತು "ಮೈದಾನ" ಚಿತ್ರ ಕಥೆ ನಡುವಿನ ಗಮನಾರ್ಹ ಸಾಮ್ಯತೆಗಳನ್ನು ಕಂಡುಹಿಡಿದ ನಂತರ, ಅನಿಲ್ ಕಾನೂನು ಕ್ರಮ ತೆಗೆದುಕೊಳ್ಳಲು ನಿರ್ಧರಿಸಿದರು," ಎಂದು ವಕೀಲರು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕ ನಾಳೆ ಜಾರಿ: ಕರಡು ಸೂಚನೆ ಹೊರಡಿಸಿದ ಅಮೆರಿಕ

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

ವಿಧಾನಪರಿಷತ್'ಗೆ ನಾಮನಿರ್ದೇಶನ: ನಾಲ್ವರು MLC ಅಭ್ಯರ್ಥಿಗಳು ಹೆಸರು ಬದಲು, ಪಟ್ಟಿಯಲ್ಲಿ TNIE ಮೈಸೂರು ವಿಭಾಗದ ಮುಖ್ಯಸ್ಥನಿಗೆ ಸ್ಥಾನ

ಬಾನು ಮುಷ್ತಾಕ್‌ ದಸರಾ ಉದ್ಘಾಟನೆಗೆ ಆಕ್ಷೇಪ; ಮುಸ್ಲಿಂ ದ್ವೇಷ ಮನಸ್ಥಿತಿಯನ್ನು ಬದಿಗಿಟ್ಟು, ಸಂವಿಧಾನದ ಆಶಯ ಅರ್ಥ ಮಾಡಿಕೊಳ್ಳಿ: ಸಚಿವ ಹೆಚ್.ಸಿ.ಮಹದೇವಪ್ಪ

SCROLL FOR NEXT