ನನ್ನನ್ನು ರೇಪ್ ಅಥವಾ ಕೊಲೆ ಮಾಡುತ್ತಾರಾ ಎಂಬ ಭಯ ಇತ್ತು ಎಂದು ಬಾಲಿವುಡ್ ನಟಿ ಶಾಕಿಂಗ್ ಹೇಳಿಕೆ ನೀಡಿದ್ದಾರೆ.
ಇತ್ತೀಚೆಗಷ್ಟೇ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಲೋಕಜನಶಕ್ತಿ ಪಕ್ಷದ ಅಭ್ಯರ್ಥಿ ಪರ ಪ್ರಚಾರ ಮಾಡಿದ್ದ ಅಮೀಶಾ ಪಟೇಲ್ ಅವರು ಅಚ್ಚರಿಕೆಯ ಹೇಳಿಕೆ ನೀಡಿದ್ದಾರೆ.ಎಲ್ ಜೆಪಿ ಪಕ್ಷದ ಅಭ್ಯರ್ಥಿ ಡಾ. ಪ್ರಕಾಶ್ ಚಂದ್ರ ಪರ ನಾನು ಪ್ರಚಾರ ಮಾಡಿದ್ದೆ. ಈ ವೇಳೆ ಅವರು ನನ್ನೊಂದಿಗೆ ಅಸಭ್ಯವಾಗಿ ವರ್ತಿಸಿದರು. ಇದರ ಜೊತೆಗೆ ಜೀವ ಬೆದರಿಕೆಯನ್ನು ಹಾಕಿ, ಬ್ಲಾಕ್ ಮೇಲ್ ಮಾಡುತ್ತಿದ್ದಾರೆ ಎಂದು ಅಮೀಶಾ ಆರೋಪಿಸಿದ್ದಾರೆ.ಬಿಹಾರದ ಚುನಾವಣಾ ಪ್ರಚಾರ ಮುಗಿಸಿ ಹಿಂತಿರುಗುವ ಸಂದರ್ಭದಲ್ಲಿ ನನ್ನ ವಿಮಾನ ತಪ್ಪುವಂತೆ ಮಾಡಿ ನನ್ನನ್ನು ಹಳ್ಳಿಯೊಂದರಲ್ಲಿ ಉಳಿಯುವಂತೆ ಮಾಡಿದರು. ಅಲ್ಲಿಂದ ಹೊರಹೋಗಲು ಬಿಟ್ಟಿರಲಿಲ್ಲ ಎಂದು ಹೇಳಿದ್ದಾರೆ.ಅಲ್ಲಿದ್ದ ಸಂದರ್ಭದಲ್ಲಿ ನಿಜಕ್ಕೂ ನನಗೆ ನನ್ನ ಮೇಲೆ ಅತ್ಯಾಚಾರ ನಡೆಯಬಹುದು ಎಂದು ಭಾವಿಸಿದ್ದೆ. ಅಲ್ಲಿ ಈ ಮಾತುಗಳನ್ನು ಹೇಳುವ ಅವಕಾಶ ಇರಲಿಲ್ಲ. ಹೀಗಾಗಿ ಮುಂಬೈಗೆ ಬಂದು ಹೇಳುತ್ತಿದ್ದೇನೆ ಎಂದರು.ಅಮೀಶಾ ಪಟೇಲ್ಅಮೀಶಾ ಪಟೇಲ್ಅಮೀಶಾ ಪಟೇಲ್ಅಮೀಶಾ ಪಟೇಲ್ಅಮೀಶಾ ಪಟೇಲ್ಅಮೀಶಾ ಪಟೇಲ್ಅಮೀಶಾ ಪಟೇಲ್ಅಮೀಶಾ ಪಟೇಲ್ಅಮೀಶಾ ಪಟೇಲ್Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos