ಮಿಸ್ ವರ್ಲ್ಡ್ 2021 ಸ್ಪರ್ಧೆಯಲ್ಲಿ ಅಮೆರಿಕವನ್ನು ಪ್ರತಿನಿಧಿಸಿದ್ದ ಭಾರತ ಮೂಲದ ಇಂಡೋ-ಅಮೆರಿಕನ್ ಶ್ರೀ ಸೈನಿ ಅವರು ಮೊದಲ ರನ್ನರ್ ಆಪ್ ಸ್ಥಾನ ಪಡೆದಿದ್ದಾರೆ. (ಚಿತ್ರ: ಶ್ರೀಸೈನಿ ಟ್ವಿಟರ್ ಖಾತೆ) 
ಸಿನಿಮಾ

ಮಿಸ್ ವರ್ಲ್ಡ್ 2021: ಭಾರತ ಮೂಲದ ಇಂಡೋ-ಅಮೆರಿಕನ್ ಶ್ರೀ ಸೈನಿ ಮೊದಲ ರನ್ನರ್ ಆಪ್ ಸ್ಥಾನ!

ಮಿಸ್ ವರ್ಲ್ಡ್ 2021 ಸ್ಪರ್ಧೆಯಲ್ಲಿ ಅಮೆರಿಕವನ್ನು ಪ್ರತಿನಿಧಿಸಿದ್ದ ಭಾರತ ಮೂಲದ ಇಂಡೋ-ಅಮೆರಿಕನ್ ಶ್ರೀ ಸೈನಿ ಅವರು ಮೊದಲ ರನ್ನರ್ ಆಪ್ ಸ್ಥಾನ ಪಡೆದಿದ್ದು, ಪೋಲೆಂಡ್‌ನ ಕರೋಲಿನಾ ಬಿಲಾವ್ಸ್ಕಾ ಅವರು ಪ್ರಶಸ್ತಿಯನ್ನು ಜಯಿಸಿದ್ದಾರೆ.

ಮಿಸ್ ವರ್ಲ್ಡ್ 2021 ಸ್ಪರ್ಧೆಯಲ್ಲಿ ಪೋಲೆಂಡ್‌ನ ಕರೋಲಿನಾ ಬಿಲಾವ್ಸ್ಕಾ ಅವರು ಪ್ರಶಸ್ತಿಯನ್ನು ಜಯಿಸಿದ್ದಾರೆ. (ಚಿತ್ರ: ಶ್ರೀಸೈನಿ ಟ್ವಿಟರ್ ಖಾತೆ)
ಕೋವಿಡ್-19 ಕಾರಣದಿಂದಾಗಿ 2020 ರಲ್ಲಿ ನಡೆಯಬೇಕಿದ್ದ ಮಿಸ್ ವರ್ಲ್ಡ್ 2021 ಸ್ಪರ್ಧೆ ತಡವಾಗಿ ಆಯೋಜನೆಯಾಗಿದ್ದು, ಪೋರ್ಟೊ ರಿಕೊದ ಸ್ಯಾನ್ ಜುವಾನ್‌ನಲ್ಲಿ ಮಾರ್ಚ್ 16 ರಂದು (ಮಾರ್ಚ್ 17 IST) ಪ್ರದರ್ಶನ ನಡೆಯಿತು. (ಚಿತ್ರ: ಶ್ರೀಸೈನಿ ಟ್ವಿಟರ್ ಖಾತೆ)
ಈ ಸ್ಪರ್ಧೆಯಲ್ಲಿ ಪೋಲೆಂಡ್‌ನ ಕರೋಲಿನಾ ಬಿಲಾವ್ಸ್ಕಾ ಅವರು ಅಂತರರಾಷ್ಟ್ರೀಯ ಸೌಂದರ್ಯ ಸ್ಪರ್ಧೆಯ ವಿಶ್ವ ಸುಂದರಿ 2021 ಪ್ರಶಸ್ತಿಯನ್ನು ಗೆದ್ದಿದ್ದಾರೆ. (ಚಿತ್ರ: ಶ್ರೀಸೈನಿ ಟ್ವಿಟರ್ ಖಾತೆ)
ಉಳಿದಂತೆ ಅಮೆರಿಕವನ್ನು ಪ್ರತಿನಿಧಿಸಿದ್ದ ಭಾರತ ಮೂಲದ ಶ್ರೀ ಸೈನಿ ಮೊದಲ ರನ್ನರ್-ಅಪ್ ಪ್ರಶಸ್ತಿಯನ್ನು ಪಡೆದರೆ ಕೋಟ್ ಡಿ'ಐವೊರ್‌ನ ಒಲಿವಿಯಾ ಯೇಸ್ ಎರಡನೇ ರನ್ನರ್ ಅಪ್ ಆದರು.
ಈ ಸ್ಪರ್ಧೆಯಲ್ಲಿ ಭಾರತದಿಂದ ಈ ಹಿಂದೆ ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್ 2020 ಆಗಿದ್ದ ಮಾನಸಾ ವಾರಣಾಸಿ ಅವರು ಸ್ಪರ್ದಿಸಿಸಿದ್ದರು. ಅವರು ಟಾಪ್ 13 ಸ್ಪರ್ಧಿಗಳನ್ನು ತಲುಪಿ, ಟಾಪ್ 6 ಫೈನಲಿಸ್ಟ್‌ಗಳಿಗೆ ಪ್ರವೇಶ ಪಡೆಯುವಲ್ಲಿ ವಿಫಲರಾದರು. (ಚಿತ್ರ: ಶ್ರೀಸೈನಿ ಟ್ವಿಟರ್ ಖಾತೆ)
ಕೊನೆಯದಾಗಿ ವಿಶ್ವ ಸುಂದರಿ ಕಿರೀಟವನ್ನು ಜಮೈಕಾದ 2019 ರ ವಿಶ್ವ ಸುಂದರಿ ಟೋನಿ-ಆನ್ ಸಿಂಗ್ ಪಡೆದಿದ್ದರು. ಭಾರತವು ಕೊನೆಯ ಬಾರಿಗೆ 2017 ರಲ್ಲಿ ಮಾನುಷಿ ಚಿಲ್ಲರ್ ಅವರ ಮೂಲಕ ಮಿಸ್ ವರ್ಲ್ಡ್ ಕಿರೀಟವನ್ನು ಗೆದ್ದುಕೊಂಡಿತು. (ಚಿತ್ರ: ಶ್ರೀಸೈನಿ ಟ್ವಿಟರ್ ಖಾತೆ)
ಶ್ರೀ ಸೈನಿ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಬೂಕರ್ ಪ್ರಶಸ್ತಿ ಮಹತ್ವ ತಿಳಿದಿದ್ದರೆ ನನ್ನನ್ನು ಟೀಕಿಸುತ್ತಿರಲಿಲ್ಲ, ಸಾಹಿತ್ಯ ಸಮ್ಮೇಳನದ ವಿಡಿಯೋ ತಿರುಚಲಾಗಿದೆ: ಬಾನು ಮುಷ್ತಾಕ್

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

ಕೃಷ್ಣಾ ಮೇಲ್ದಂಡೆ ಯೋಜನೆ-3: ಸರ್ವಪಕ್ಷ ನಾಯಕರೊಂದಿಗೆ ಶೀಘ್ರದಲ್ಲೇ ಸಭೆ; ಡಿಕೆ.ಶಿವಕುಮಾರ್

SCROLL FOR NEXT