ಮಂಡ್ಯದ ಗೆಜ್ಜಲಗೆರೆಯಲ್ಲಿ ಹಾಕಿದ ಬೃಹತ್ ಟೆಂಟ್ ನಲ್ಲಿ ಅಭಿಷೇಕ್-ಅವಿವಾ (Abhishek-Aviva) ವಿವಾಹ ಪ್ರಯುಕ್ತ ಬೀಗರ ಊಟ ಏರ್ಪಡಿಸಲಾಗಿತ್ತು. ಸುಮಾರು ಒಂದು ಲಕ್ಷ ಜನ ಔತಣಕೂಟದಲ್ಲಿ ಭಾಗವಹಿಸಿದ್ದರು.
ಔತಣ ಕೂಟಕ್ಕೆ ಅಂಬರೀಷ್ ಅಭಿಮಾನಿಯೊಬ್ಬರು ಎತ್ತಿಗೆ ವಿಶೇಷವಾಗಿ ಅಲಂಕಾರ ಮಾಡಿ ಹಣೆಯ ಮುದೆ ಅಂಬಿ-ಸುಮಲತಾ ಫೋಟೋ ಇಟ್ಟು ಬೆನ್ನಿನಲ್ಲಿ ಅಭಿಷೇಕ್-ಅವಿವಾ ಚಿತ್ರಗಳನ್ನು ಬಿಡಿಸಿ ಅವರ ಹೆಸರನ್ನು ಬರೆದು ತಂದಿದ್ದರು.ಎತ್ತಿನ ದೇಹದಲ್ಲಿ ವಿಶೇಷ ಅಲಂಕಾರ ಮಾಡಿ ತಂದದ್ದು ಬೀಗರಕೂಟದಲ್ಲಿ ಎಲ್ಲರ ಗಮನ ಸೆಳೆಯಿತು. ಫೋಟೋ ಮುಂದೆ ಅಂಬಿ ಕುಟುಂಬ ಫೋಸ್ ನೀಡಿ ಖುಷಿಯಿಂದ ಫೋಟೋ ತೆಗೆಸಿಕೊಂಡರು.ಅಭಿಷೇಕ್-ಅವಿವಾ ಬೀಗರ ಔತಣಕೂಟಕ್ಕೆ ಆಗಮಿಸಿದ್ದ ಅಂಬರಿಶ್ ಅಭಿಮಾನಿ ನೂತನ ವಧು-ವರರಿಗೆ ವಿಶೇಷ ರೀತಿಯಲ್ಲಿ ಶುಭಾಶಯ ಕೋರಿದ್ದಾರೆ.ನೆರೆದಿದ್ದ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ ಅಭಿಷೇಕ್ಬೆಂಗಳೂರಿನಲ್ಲಿ ಮದುವೆ ನಂತರ ಮನೆಯಲ್ಲಿ ಅಭಿ ಮತ್ತು ಅವಿವಾ ಪೋಷಕರು ಸತ್ಯನಾರಾಯಣ ಪೂಜೆ ಮಾಡಿಸಿದ್ದು ನಂತರ ಫೋಟೋಗೆ ಫೋಸ್ ನೀಡಿದರು.ಚೀರನಹಳ್ಳಿಯ ತೇಜಗೌಡ ಎಂಬಾತ ಹೀಗೆ ವಿಶೇಷವಾಗಿ ಅಭಿಷೇಕ್ ಹಾಗೂ ಅವಿವಾ ಅವರಿಗೆ ವಿವಾಹಕ್ಕೆ ಶುಭ ಕೋರಿದ್ದಾರೆ.ಅಭಿಷೇಕ್-ಅವಿವಾಮದುವೆ ದಿನ ಮಗನನ್ನು ಮುದ್ದಾಡುತ್ತಿರುವ ಸುಮಲತಾಬೀಗರೂಟದಲ್ಲಿ ಬಂದಿದ್ದ ಅಭಿಮಾನಿಗಳನ್ನು ವಿಚಾರಿಸಿ ಮಾತನಾಡಿಸಿರುವ ಅಭಿಷೇಕ್ಊಟಕ್ಕೆ ಕುಳಿತಿರುವ ಅತಿಥಿಗಳುಟೆಂಟ್ ಒಳಗೆ ಊಟಕ್ಕೆ ಕುಳಿತವರ ಕುಶಲೋಪರಿ ವಿಚಾರಿಸಿದ ಸುಮಲತಾ-ಅಭಿಷೇಕ್-ಅವಿವಾFollow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos