ಭಾರತೀಯ ವಾಯುಪಡೆ ಹೆಲಿಕಾಪ್ಟರ್ ನಲ್ಲಿ ಪ್ರಯಾಣಿಸುತ್ತಿದ್ದ ಸೇನಾ ದಂಡ ನಾಯಕ ಜನರಲ್ ಬಿಪಿನ್ ರಾವತ್ ಮತ್ತವರ ಪತ್ನಿ ಸೇರಿದಂತೆ 12 ಮಂದಿ ಅಧಿಕಾರಿಗಳು ಇಂದು ತಮಿಳುನಾಡಿನ ಕೂನೂರು ಬಳಿ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಈ ಹಿಂದೆ ಭಾರತ ಹಲವು ಮಹನೀಯರು ಹೆಲಿಕಾಪ್ಟರ್ ಇಲ್ಲವೇ ವಿಮಾನ ಅವಘಡದಲ್ಲಿ ಮೃತಪಟ್ಟ
ಸುಭಾಷ್ ಚಂದ್ರ ಬೋಸ್- ಸ್ವಾತಂತ್ರ್ಯ ಸೇನಾನಿ ಬೋಸ್ ಅವರು 1945ರಲ್ಲಿ ತೈವಾನ್ ನಲ್ಲಿ ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದರು. ಅದು ಮುಂದೆ ವಿವಾದಕ್ಕೂ ಕಾರಣವಾಗಿತ್ತು.ಸಂಜಯ್ ಗಾಂಧಿ- ಇಂದಿರಾಗಾಂಧಿಯವರ ಹಿರಿಯ ಪುತ್ರನಾಗಿದ್ದ ಸಂಜಯ್ 1980ರಲ್ಲಿ ಸಂಭವಿಸಿದ ಗ್ಲೈಡರ್ ಅಪಘಾತದಲ್ಲಿ ಮೃತರಾಗಿದ್ದರು.ಸುರೇಂದ್ರ ನಾಥ್- ಪಂಜಾಬ್ ರಾಜ್ಯಪಾಲರಾಗಿದ್ದ ಸುರೇಂದ್ರ ನಾಥ್ ಅವರು 1994ರಲ್ಲಿ 9 ಮಂದಿ ಕುಟುಂಬ ಸದಸ್ಯರೊಡನೆ ಹೆಲಿಕಾಪ್ಟರ್ ನಲ್ಲಿ ಪ್ರಯಾಣಿಸುತ್ತಿದ್ದರು. ಪರ್ವತಕ್ಕೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿ ಎಲ್ಲರೂ ಮೃತಪಟ್ಟಿದ್ದರು.ಮಾಧವ ರಾವ್ ಸಿಂಧಿಯ- ಹಿರಿಯ ಕಾಂಗ್ರೆಸ್ ಮುಖಂಡ ಮಾಧವ ರಾವ್ ಸಿಂಧಿಯ 2001ರಲ್ಲಿ ರಾಲಿಯಲ್ಲಿ ಪಾಲ್ಗೊಳ್ಲಲು ತೆರಳುವ ವೇಳೆ ಹೆಲಿಕಾಪ್ಟರ್ ಪತನಗೊಂಡು ಸಾವನ್ನಪ್ಪಿದ್ದರು.ಜಿ.ಎಂ.ಸಿ. ಬಾಲಯೋಗಿ- ಲೋಕಸಭಾ ಸ್ಪೀಕರ್ ಆಗಿದ್ದ ಆಂದ್ರಪ್ರದೇಶದ ತೆಲುಗುದೇಶಂ ನಾಯಕ ಜಿಎಂಸಿ ಬಾಲಯೋಗಿ 2002ರಲ್ಲಿ ಹೆಲಿಕಾಪ್ಟರ್ ಅವಘಡದಲ್ಲಿ ಮೃತಪಟ್ಟಿದ್ದರು.ಒ.ಪಿ. ಜಿಂದಾಲ್- 2005ರಲ್ಲಿ ಹರಿಯಾಣಾದ ಇಂಧನ ಸಚಿವರಾಗಿದ್ದ ಒ.ಪಿ ಜಿಂದಾಲ್ ಅವರು ರಾಜ್ಯ ಕೃಷಿ ಸಚಿವ ಸುರೇಂದ್ರ ಸಿಂಗ್ ಅವರೊಂದಿಗೆ ಹೆಲಿಕಾಪ್ಟರ್ ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಅಪಘಾತ ಸಂಭವಿಸಿ ಇಬ್ಬರೂ ಮೃತಪಟ್ಟಿದ್ದರು.ವೈ.ಎಸ್ ರಾಜಶೇಖರ ರೆಡ್ಡಿ- 2009ರಲ್ಲಿ ಆಂಧ್ರಪ್ರದೇಶ ಮುಖ್ಯಮಂತ್ರಿಯಾಗಿದ್ದ ರಾಜಕೀಯ ಧುರೀಣ ವೈ.ಎಸ್ ರಾಜಶೇಖರ ರೆಡ್ಡಿ. ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ನಾಪತ್ತೆಯಾಗಿತ್ತು. 27 ಗಂಟೆಗಳ ನಂತರ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿರುವುದು ಪತ್ತೆಯಾಗಿತ್ತು.ದೋರ್ಜಿ ಕಾಂದು- ಅರುಣಾಚಲ ಮುಖ್ಯಮಂತ್ರಿಯಾಗಿದ್ದ ದೋರ್ಜಿ ಖಾಂದು ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ 2011ರಲ್ಲಿ 5 ದಿನಗಳ ಕಾಲ ನಾಪತ್ತೆಯಾಗಿತ್ತು. ನಂತರ ಅವರ ಹೆಲಿಕಾಪ್ತರ್ ಅಪಘಾತಗೊಂಡ ಸ್ಥಿತಿಯಲ್ಲಿ ಚೀನಾ ಗಡಿಯಲ್ಲಿ ಪತ್ತೆಯಾಗಿತ್ತು.Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos