ಸೆಪ್ಟೆಂಬರ್ 9 ಮತ್ತು 10 ರಂದು ನವದೆಹಲಿಯಲ್ಲಿ ನಡೆದ ಜಿ 20 ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಜಾಗತಿಕ ನಾಯಕರ ಪತ್ನಿಯರಿಗೆ ಸಾಂಪ್ರದಾಯಿಕ ಉಡುಗೊರೆ ನೀಡಿ ಗೌರವಿಸಿದರು. 
ದೇಶ

ಅಕ್ಷತಾ ಮೂರ್ತಿ ಸೇರಿದಂತೆ ವಿಶ್ವದ ಪ್ರಥಮ ಮಹಿಳೆಯರಿಗೆ ಪ್ರಧಾನಿ ಮೋದಿ ನೀಡಿದ ವಿಶಿಷ್ಟ ಬಗೆಯ ಆಕರ್ಷಕ ಗಿಫ್ಟ್- PHOTOS

ಸೆಪ್ಟೆಂಬರ್ 9 ಮತ್ತು 10 ರಂದು ನವದೆಹಲಿಯಲ್ಲಿ ನಡೆದ ಜಿ 20 ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಜಾಗತಿಕ ನಾಯಕರ ಪತ್ನಿಯರಿಗೆ ಸಾಂಪ್ರದಾಯಿಕ ಉಡುಗೊರೆಗಳನ್ನು ನೀಡಿದರು.

ಯುನೈಟೆಡ್ ಕಿಂಗ್‌ಡಂನ ಪ್ರಥಮ ಮಹಿಳೆ ಅಕ್ಷತಾ ಮೂರ್ತಿ ಅವರಿಗೆ ಕದಮ್ ವುಡ್ ಬಾಕ್ಸ್‌ನಲ್ಲಿ ಟೈಮ್‌ಲೆಸ್ ಮೋಡಿ ಹೊಂದಿರುವ ಬನಾರಸಿ ಶಾಲನ್ನು ಉಡುಗೊರೆಯಾಗಿ ನೀಡಲಾಯಿತು.
ಅರ್ಜೆಂಟೀನಾ ಅಧ್ಯಕ್ಷರ ಪತ್ನಿ ಮಾರ್ಸೆಲಾ ಲುಚೆಟ್ಟಿ ಅವರಿಗೆ ಕೇರಳದ ಕುಶಲಕರ್ಮಿಗಳು ತಯಾರಿಸಿದ ಕರಕುಶಲ ಎಬೊನಿ ಜಾಲಿ ಪೆಟ್ಟಿಗೆಯಲ್ಲಿ ಬನಾರಸಿ ರೇಷ್ಮೆ ಶಾಲನ್ನು ಉಡುಗೊರೆಯನ್ನು ನೀಡಲಾಯಿತು.
ಬ್ರೆಜಿಲಿಯನ್ ಪ್ರಥಮ ಮಹಿಳೆ ರೊಸಾಂಗೆಲಾ ಲುಲಾ ಡ ಸಿಲ್ವಾ ಅವರಿಗೆ ಕಾಶ್ಮೀರಿ ಪಾಶ್ಮಿನಾ ಶಾಲನ್ನು ಅಲಂಕಾರಿಕ ಪೇಪಿಯರ್ ಮ್ಯಾಚೆ ಬಾಕ್ಸ್‌ನಲ್ಲಿ ಉಡುಗೊರೆಯಾಗಿ ನೀಡಲಾಯಿತು, ಇದು ಜಮ್ಮು-ಕಾಶ್ಮೀರದ ಹೆಸರಾಂತ ಕರಕುಶಲ ವಸ್ತುಗಳಲ್ಲಿ ಒಂದಾಗಿದೆ.
ಆಸ್ಟ್ರೇಲಿಯಾದ ಪ್ರಧಾನಿಯವರ ಪತ್ನಿ ಕಾರ್ಮೆಲ್ ಟೆಬ್ಬಟ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಕಾಶ್ಮೀರಿ ಪಶ್ಮಿನಾ ಶಾಲನ್ನು ಪೇಪಿಯರ್ ಮ್ಯಾಚೆ ಬಾಕ್ಸ್‌ನಲ್ಲಿ ಉಡುಗೊರೆಯಾಗಿ ನೀಡಿದರು.
ಜಪಾನ್ ಪ್ರಧಾನಿ ಪತ್ನಿ ಯುಕೋ ಕಿಶಿದಾ ಅವರಿಗೆ ಕದಮ್ ವುಡ್ ಜಾಲಿ ಬಾಕ್ಸ್‌ನಲ್ಲಿ ಕಾಂಜೀವರಂ ಶಾಲನ್ನು ಉಡುಗೊರೆಯಾಗಿ ನೀಡಿದರು.
ಇಂಡೋನೇಷಿಯಾದ ಪ್ರಥಮ ಮಹಿಳೆ ಇರಿಯಾನಾ ಜೋಕೊ ವಿಡೋಡೊ ಅವರಿಗೆ ಕದಮ್ ವುಡ್ ಬಾಕ್ಸ್‌ನಲ್ಲಿ ಮುಗಾ ರೇಷ್ಮೆ ಬಳಸಿ ನುರಿತ ಕುಶಲಕರ್ಮಿಗಳು ತಯಾರಿಸಿದ ಅಸ್ಸಾಂ ಶಾಲನ್ನು ನೀಡಲಾಯಿತು

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಪ್ರಧಾನಿ ಮೋದಿ ಎರಡು ದಿನಗಳ ಇಸ್ರೇಲ್‌ ಪ್ರವಾಸ ಆರಂಭ; ಸಂಸತ್ತು ನೆಸ್ಸೆಟ್ ಭಾಷಣ ಮಾಡುವ ಮೊದಲ ಭಾರತ ಪ್ರಧಾನಿ-Video

'ಮತ್ತೆ ವೈಭವದತ್ತ ಮರಳಿದ್ದೇವೆ, ಹಿಂದೆಂದಿಗಿಂತ ಶ್ರೀಮಂತ ಮತ್ತು ಬಲಿಷ್ಠರಾಗಿದ್ದೇವೆ': ದೇಶವನ್ನುದ್ದೇಶಿಸಿ Donald Trump ಭಾಷಣ-Video

'ಸಂಪುಟಕ್ಕೆ ಹೊಸ ಪೀಳಿಗೆ, ಹೊಸ ಆಲೋಚನೆ ಇರುವವರು ಸೇರಬೇಕು, ನಾವು ಎಷ್ಟು ದಿನ ಗೂಟ ಹೊಡೆದುಕೊಂಡು ಕೂರಲು ಸಾಧ್ಯ'?: ಡಿ ಕೆ ಶಿವಕುಮಾರ್

ಕೇರಳ- ಕೇರಳಂ: ಯಾವುದೇ ಪ್ರಯೋಜನವಿಲ್ಲ, ಹೆಸರು ಬದಲಿಸುವ ಬದಲು ಹೆಚ್ಚಿನ ಅನುದಾನ ಘೋಷಿಸಿ; ಅಚ್ಚರಿ ಮೂಡಿಸಿದ ಶಶಿ ತರೂರ್ ವಿರೋಧ!

ಕೃಷಿ ಭೂಮಿ ಸೇರಿದಂತೆ ಎಲ್ಲಾ ಸ್ವತ್ತಿಗೂ ಸ್ವಯಂ ಚಾಲಿತ ಮ್ಯುಟೇಷನ್‌: ಕಂದಾಯ ಸಚಿವ ಕೃಷ್ಣಬೈರೇಗೌಡ

SCROLL FOR NEXT