ಒಂದೂವರೆ ದಶಕಗಳ ಕಾಲದ ತಮ್ಮ ವೃತ್ತಿಜೀವನದಲ್ಲಿ 50 ಅಂತರರಾಷ್ಟ್ರೀಯ ಗೋಲುಗಳನ್ನು ಗಳಿಸಿದ ಮೊದಲ ಭಾರತೀಯ ಫುಟ್‌ಬಾಲ್‌ ಆಟಗಾರ ಎಂಬ ಹೆಗ್ಗಳಿಕೆಗೆ ಚೆಟ್ರಿ ಭಾಜನರಾಗಿದ್ದಾರೆ, 
ಕ್ರೀಡೆ

ಭಾರತ ಫುಟ್‌ಬಾಲ್‌ ಟೀಂ ಕ್ಯಾಪ್ಟನ್ ಜನ್ಮದಿನ: ಹೆಮ್ಮೆ ಮೂಡಿಸುವ ಸುನಿಲ್ ಚೆಟ್ರಿ ಜೀವನದ 7 ಸಂಗತಿಗಳು

ಭಾರತ ಉಪಖಂಡದಲ್ಲಿ ಫುಟ್‌ಬಾಲ್‌ನ ಜನಪ್ರಿಯತೆಗೆ ಇತ್ತೀಚಿನ ಕಾರಣವೆಂದರೆ ಭಾರತ ಫುಟ್‌ಬಾಲ್‌ ತಂಡದ ನಾಯಕ ಸುನೀಲ್ ಚೆಟ್ರಿ. ಚೆಟ್ರಿ ಅವರಿಗೆ ಇಂದು 36ನೇ ಜನ್ಮದಿನದ ಸಂಭ್ರಮ. ಬೆಂಗಳೂರು ಎಫ್‌ಸಿ ನಲ್ಲಿ  15 ವರ್ಷಗಳಿಗಿಂತ ಹೆಚ್ಚು ಕಾಲ ವೃತ್ತಿಜೀವನದ ಸಂಬಂಧ ಹೊಂದಿರುವ  'ಕ್ಯಾಪ್ಟನ್ ಫೆಂಟಾಸ್ಟಿಕ್' ಚೆಟ್ರಿ ಬಗೆಗಿನ ಕೆಲ ಕುತೂಹಲಕರ ಮಾಹಿತ್ರಿ ಇಲ್ಲಿದೆ

ಹೆಚ್ಚು ಅಂತರರಾಷ್ಟ್ರೀಯ ಗೋಲುಗಳನ್ನು ಗಳಿಸಿದ ಎರಡನೇ ಸಕ್ರಿಯ ಫುಟ್‌ಬಾಲ್‌ ಆಟಗಾರ ಸುನೀಲ್ ಚೆಟ್ರಿ ಅವರಾಗಿದ್ದು ಅವರು 112 ಪ್ರವಾಸದಿಂದ 72 ಬಾರಿ ಗೋಲು ಗಳಿಸಿದ್ದಾರೆ. ಇನ್ನು ಕ್ರಿಸ್ಟಿಯಾನೊ 164 ಪ್ರವಾಸದಿಂದ 99 ಗೋಲುಗಳನ್ನು ಗಳಿಸಿದ್ದಾರೆ. ಲಿಯೋನೆಲ್ ಮೆಸ್ಸಿ 70 (138) ರೊಂದಿಗೆ ಚೆಟ್ರಿಯ ಬೆನ್ನ ಹಿಂದಿ
ಚೆಟ್ರಿ ಒಟ್ಟೂ 115 ಬಾರಿ ಬ್ಲೂ ಸ್ಟ್ರೈಪ್ಸ್ ಧರಿಸುವ ಮೂಲಕ ಅತಿ ಹೆಚ್ಚು ಬಾರಿ ಈ ಸಾಧನೆ ಮಾಡಿದ ಭಾರತದ ಫುಟ್‌ಬಾಲ್‌ ಆಟಗಾರರಾಗಿದ್ದಾರೆ.
2018 ರ ಇಂಟರ್‌ಕಾಂಟಿನೆಂಟಲ್ ಕಪ್‌ನ ಫೈನಲ್‌ನಲ್ಲಿ ಭಾರತ ಕೀನ್ಯಾವನ್ನು ಸೋಲಿಸಿ ಟ್ರೋಫಿಯನ್ನು ಎತ್ತಿ ಹಿಡಿದಿದ್ದ ಸಮಯದಲ್ಲಿ ಚೆಟ್ರಿ ಪಂದ್ಯಾವಳಿಯ ಅತ್ಯುತ್ತಮ ಆಟಗಾರನೆಂದು ಘೋಷಿಸಲ್ಪಟ್ಟರು, ಚೆಟ್ರಿ ಬೇರೆಲ್ಲಾ ಆಟಗಾರರನ್ನು ಹಿಂದಿಕ್ಕಿ ಎಂಟು ಬಾರಿ ಅತ್ಯುತ್ತಮ ಆಟಗಾರ ಎಂಬ ಕೀರ್ತಿಗೆ ಪಾತ್ರವಾಗಿದ್ದರು.
2010 ರಲ್ಲಿ, ಸುನಿಲ್ ಚೆಟ್ರಿ ಕನ್ಸಾಸ್ ಸಿಟಿ ವಿಜಾರ್ಡ್ಸ್ ಟೀಂನ ಭಾಗವಾಗಿದ್ದರು, ಇದು ಇಂಗ್ಲೆಂಡ್ ನ ದೈತ್ಯ ತಂಡವಾಗಿದ್ದ ಮ್ಯಾಂಚೆಸ್ಟರ್ ಯುನೈಟೆಡ್ ವಿರುದ್ಧ ಅಚ್ಚರಿಯ ಗೆಲುವು ಸಾಧಿಸಿತು ಮೈದಾನದಲ್ಲಿ ಟೀಲ್ ಬನ್‌ಬರಿಯನ್ನು ಬದಲಿಸಿದ ಚೆಟ್ರಿ ಪಂದ್ಯದ ಮುಕ್ತಾಯಕ್ಕೆ 21 ನಿಮಿಷಗಳು ಬಾಕಿ ಉಳಿದಿದ್ದಂತೆ ಹೊಡೆತ
ಸುನಿಲ್ ಚೆಟ್ರಿ ’ಮೋಸ್ಟ್ ಎಐಎಫ್ಎಫ್ ಮೆನ್ಸ್ ಪ್ಲೇಯರ್ ಆಫ್ ದಿ ಇಯರ್” ಪ್ರಶಸ್ತಿ ಗಳಿಸಿದ್ದಾರೆ. ಚೆಟ್ರಿ ಒಟ್ಟಾರೆ ಆರು ಬಾರಿ ಈ ಗೌರವಕ್ಕೆ ಭಾಜನರಾಗಿದ್ದಾರೆ. , ಐಎಂ ವಿಜಯನ್ ಮೂರು ಬಾರಿ ಈ ಗೌರವ ಹೊಂದುವುದರೊಡನೆ ಎರಡನೇ ಸ್ಥಾನದಲ್ಲಿದ್ದಾರೆ.
ಸುನೀಲ್ ಚೆಟ್ರಿ ಅವರಿಗೆ 2011 ರಲ್ಲಿ ಅರ್ಜುನ ಪ್ರಶಸ್ತಿ ಒಲಿದು ಬಂದಿತು.
ಭಾರತೀಯ ಫುಟ್‌ಬಾಲ್ ತಂಡದ ನಾಯಕ ಸುನಿಲ್ ಚೆಟ್ರಿಗೆ ಜನ್ಮದಿನದ ಸಂಭ್ರಮ
ಭಾರತೀಯ ಫುಟ್‌ಬಾಲ್ ತಂಡದ ನಾಯಕ ಸುನಿಲ್ ಚೆಟ್ರಿಗೆ ಜನ್ಮದಿನದ ಸಂಭ್ರಮ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT