ಆಸ್ಟ್ರೇಲಿಯಾದಲ್ಲಿ ನಡೆದ ಬಾರ್ಡರ್ ಗವಾಸ್ಕರ್ ಟ್ರೋಫಿಯ ಟೆಸ್ಟ್ ಸರಣಿಯನ್ನು ಗೆದ್ದಿರುವ ಭಾರತ ಕ್ರಿಕೆಟ್ ತಂಡದ ಐತಿಹಾಸಿಕ ಗೆಲುವಿಗೆ ಜಾಗತಿಕ ಮಟ್ಟದಲ್ಲಿ ಪ್ರಶಂಸೆ ವ್ಯಕ್ತವಾಗುತ್ತಿದೆ. 
ಕ್ರೀಡೆ

ಆಸ್ಟ್ರೇಲಿಯಾ ವಿರುದ್ಧ ಭಾರತದ ಐತಿಹಾಸಿಕ ಗೆಲುವು: ಸುಂದರ್ ಪಿಚ್ಚೈ, ಕೆವಿನ್ ಪೀಟರ್ಸನ್ ಸೇರಿ ಖ್ಯಾತನಾಮರ ಅಭಿನಂದನೆ

ಆಸ್ಟ್ರೇಲಿಯಾದಲ್ಲಿ ನಡೆದ ಬಾರ್ಡರ್ ಗವಾಸ್ಕರ್ ಟ್ರೋಫಿಯ ಟೆಸ್ಟ್ ಸರಣಿಯನ್ನು ಗೆದ್ದಿರುವ ಭಾರತ ಕ್ರಿಕೆಟ್ ತಂಡದ ಐತಿಹಾಸಿಕ ಗೆಲುವಿಗೆ ಜಾಗತಿಕ ಮಟ್ಟದಲ್ಲಿ ಪ್ರಶಂಸೆ ವ್ಯಕ್ತವಾಗುತ್ತಿದೆ.

ಮತ್ತೋವ ಭಾರತ ಕ್ರಿಕೆಟ್ ನ ದಿಗ್ಗಜ ವಿವಿಎಸ್ ಲಕ್ಷ್ಮಣ್ ಸಹ ಭಾರತ ಕ್ರಿಕೆಟ್ ತಂಡದ ಸಾಧನೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದು, ಅಜಿಂಕ್ಯಾ ರೆಹಾನೆ ಅವರಿಂದ ಅದ್ಭುತ ನಾಯಕತ್ವವಾಗಿತ್ತು, ಅಷ್ಟೇ ಅಲ್ಲದೇ ನಾಥನ್ ಲ್ಯೋನ್ ನ 100 ನೇ ಟೆಸ್ಟ್ ಪಂದ್ಯದ ಅಂಗವಾಗಿ ಸನ್ಮಾನ ಮಾಡಿದ್ದು ಭಾರತ ತಂಡ ಹಾಗೂ ಅಜಿಂಕ್ಯಾ ರೆಹಾನ
ಕೇಂದ್ರ ಸಚಿವ ಕಿರಣ್ ರಿಜಿಜು ಪ್ರತಿಕ್ರಿಯೆ ನೀಡಿದ್ದು, ನಮ್ಮ ಯುವ ಆಟಗಾರರ ದೃಢ ಸಂಕಲ್ಪದಿಂದ ಗೆಲುವು ದಕ್ಕಿದೆ ಹೆಮ್ಮೆಯಾಗುತ್ತಿದೆ ಎಂದಿದ್ದಾರೆ.
ಪ್ರತಿ ಸೀಸನ್ ನಲ್ಲೂ ಓರ್ವ ಹೊಸ ಹಿರೋ ಸಿಕ್ಕಿದರು- ಸಚಿನ್, ಭಾರತದ ಗೆಲುವಿಗೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅಭಿನಂದನೆ ಸಲ್ಲಿಸಿದ್ದು, 'ಪ್ರತಿ ಸೀಸನ್ ನಲ್ಲೂ ಓರ್ವ ಹಿರೋ ಸಿಕ್ಕಿದ್ದಾರೆ. ಗಾಯಗಳು, ಅನಿಶ್ಚಿತತೆಯ ನಡುವೆಯೂ ಗೆಲುವನ್ನು ದಕ್ಕಿಸಿಕೊಂಡಿದ್ದೇವೆ, ಅದ್ಭುತ, ಶ್ರೇಷ್ಠವಾದ ಸರಣಿ ಜಯ ಇದಾಗಿದೆ
ಶ್ರೇಷ್ಠ ಸರಣಿಗಳ ಪೈಕಿ ಇದು ಒಂದಾಗಿದ್ದು, ಭಾರತದ ಗೆಲುವಿಗೆ ಅಭಿನಂದನೆ ಸಲ್ಲಿಸುತ್ತೇನೆ, ಆಸ್ಟ್ರೇಲಿಯಾ ಸಹ ಉತ್ತಮವಾಗಿ ಆಡಿತು. ಭಾರತಕ್ಕೆ ಅಭಿನಂದನೆಗಳು- ಸುಂದರ್ ಪಿಚ್ಚೈ
ಇನ್ನು ಪಿತೃತ್ವ ರಜೆಯಲ್ಲಿರುವ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದು, ಅಡಿಲೇಡ್ ನಂತರದ ಪಂದ್ಯಗಳಲ್ಲಿ ನಮ್ಮನ್ನು ಅನುಮಾನಿಸಿದವರು ಎದ್ದು ನಿಂತು ನೋಡುವಂತಾಗಿದೆ. ಆದರ್ಶಪ್ರಾಯ ಪ್ರದರ್ಶನ ಭಾರತೀಯ ತಂಡದ್ದಾಗಿತ್ತು ಎಂದಿದ್ದಾರೆ
ಭಾರತೀಯ ಕ್ರಿಕೆಟ್ ನ ಮತ್ತೋರ್ವ ಲೆಜೆಂಡ್ ಆಟಗಾರ ವಿರೇಂದ್ರ ಸೆಹ್ವಾಗ್ ಕೂಡ ಭಾರತದ ಗೆಲುವಿಗೆ ಅಭಿನಂದನೆ ಸಲ್ಲಿಸಿದ್ದು ಭಾರತೀಯ ತಂಡದ ಆಟಗಾರ ಭಾರತ ಕ್ರಿಕೆಟ್ ತಂಡದಲ್ಲಿ ಹಲವು ಆಟಗಾರರಿಗೆ ಗಾಯಗಳಾಗಿತ್ತು, ಆದರೆ ಅದಕ್ಕಿಂತ ಹೆಚ್ಚು ಪೆಟ್ಟು ಬಿದ್ದಿದ್ದು ಆಸ್ಟ್ರೇಲಿಯಾದ ಅಹಂಕಾರ ಹಾಗೂ ಹೆಮ್ಮೆಗೆ ಎಂದು ಹೇಳಿದ್ದಾ
'ಎಂಥಹ ಅದ್ಭುತ ಟೆಸ್ಟ್ ಪಂದ್ಯ, ಭಾರತದ ಕ್ರಿಕೆಟ್ ನ ಆಳ ನಿಜಕ್ಕೂ ಬೆರಗು, ಭಯ ಮೂಡಿಸುವಂಥದ್ದು ರಿಷಭ್ ಪಂತ್ ಅದ್ಭುತವಾದ ಪ್ರದರ್ಶನ' ಎಂದಿದ್ದಾರೆ ಎಬಿಡಿ ವಿಲ್ಲರ್ಸ್
ಕೆವಿನ್ ಪೀಟರ್ಸನ್ ಭಾರತದ ಗೆಲುವಿನ ಬಗ್ಗೆ ಮಾತನಾಡಿದ್ದು, ಆಸ್ಟ್ರೇಲಿಯಾವನ್ನು ಭಾರತ ಸೋಲಿಸಿರುವುದರ ಹಿಂದೆ ಒಂದೇ ಒಂದು ಕೊರತೆ ಇದೆ ಅದು ಬ್ರಿಸ್ಬೇನ್ ನಲ್ಲಿ ಪಂದ್ಯ ನಡೆದಿದ್ದು, ಅಂತಹ ಅದ್ಭುತ ಘಟನೆಗೆ ತಕ್ಕನಾದ ನಗರ ಬ್ರಿಸ್ಬೇನ್ ಅಲ್ಲ, ರಿಷಭ್ ಪಂತ್ ಕ್ರಿಕೆಟ್ ನ ಭಾಷೆಯಲ್ಲಿ ಹೇಳುವುದಾದರೆ ಶೈಶವಾವಸ್ಥೆಯಿಂದ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಜಮ್ಮು-ಕಾಶ್ಮೀರ: ಮಸೂದ್ ಅಜರ್ ಆಡಿಯೋ ಬೆನ್ನಲ್ಲೇ ಭಾರತದ ಗಡಿಗೆ ನುಗ್ಗಲು 'ಪಾಕ್ ಡ್ರೋನ್' ಗಳು ಯತ್ನ!

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮಗೆ ಅಶ್ಲೀಲ ಕಾಮೆಂಟ್! ಕಿಡಿಗೇಡಿಗಳಿಗೆ ಕೊಟ್ಟ ವಾರ್ನಿಂಗ್ ಏನು?

ಮಿಲಿಟರಿ ದಾಳಿಗೆ ಟ್ರಂಪ್, ನೆತನ್ಯಾಹು ಸಜ್ಜು: ತಿರುಗೇಟು ನೀಡಿದ ಇರಾನ್! ಹೇಳಿದ್ದೇನು ಗೊತ್ತಾ?

ಪಾಕಿಸ್ತಾನದಲ್ಲಿ 'ಗುಂಡಿಟ್ಟು' ಹಿಂದೂ ರೈತನ ಕಗ್ಗೊಲೆ! ಹೈದರಾಬಾದಿನಲ್ಲಿ ಆರೋಪಿಗಳ ಬಂಧನ

SCROLL FOR NEXT