ಸೋಮವಾರ ಲಖನೌನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಐಪಿಎಲ್ 2023 ರ ಹಣಾಹಣಿ ವಿರಾಟ್ ಕೊಹ್ಲಿ ಮತ್ತು ಗೌತಮ್ ಗಂಭೀರ್ ನಡುವಿನ ವಾಕ್ಸಮರದಿಂದಾಗಿ ವ್ಯಾಪಕ ಸುದ್ದಿಗೆ ಗ್ರಾಸವಾಗಿದೆ.
ತಮ್ಮ ಅಗ್ರೆಸಿವ್ ನೇಚರ್ ನಿಂದಾಗಿಯೇ ಸಾಕಷ್ಟು ಸುದ್ದಿಯಾಗುತ್ತಿದ್ದ ಕೊಹ್ಲಿ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಶಾಂತವಾಗಿದ್ದರು. ಆದರೆ ನಿನ್ನೆಯ ಲಕ್ನೋ ವಿರುದ್ಧದ ಪಂದ್ಯದಲ್ಲಿ ಅಭಿಮಾನಿಗಳು ಅಕ್ಷರಶಃ ಹಳೆಯ ಕೊಹ್ಲಿಯನ್ನು ನೋಡುವ ಅವಕಾಶ ಸಿಕ್ಕಿತ್ತು.ಎಲ್ಎಸ್ಜಿ ತಮ್ಮ ರನ್ ಚೇಸ್ನಲ್ಲಿ ವಿಕೆಟ್ ಕಳೆದುಕೊಂಡಾಗಲೆಲ್ಲಾ ತಮ್ಮ ಟ್ರೇಡ್ಮಾರ್ಕ್ ಆಕ್ರಮಣಕಾರಿ ಸಂಭ್ರಮಾಚರಣೆಯನ್ನು ತೋರಿಸಿದರು.ಎಲ್ಎಸ್ಜಿ ವಿರುದ್ಧದ ತಮ್ಮ ಹಿಂದಿನ ಪಂದ್ಯದಲ್ಲಿ ಸೋಲನುಭವಿಸಿದ ಆರ್ಸಿಬಿ ಮತ್ತು ಕೊಹ್ಲಿಗೆ ಇದು ಸಿಹಿ ಸೇಡು ತೀರಿಸಿಕೊಂಡಿತು. ಏಕೆಂದರೆ ಅವರು ಕಡಿಮೆ 127 ರನ್ಗಳ ಹೊರತಾಗಿಯೂ 18 ರನ್ಗಳಿಂದ ಗೆದ್ದರು.ಕೋಹ್ಲಿ RCB ಅನ್ನು ಬೆಂಬಲಿಸಲು ಕ್ರೀಡಾಂಗಣದಲ್ಲಿ ಸ್ಥಳೀಯ ಅಭಿಮಾನಿಗಳನ್ನು ಕರೆದು ಕೂಗುವಂತೆ ಹೇಳಿದ್ದು ಈ ಹಿಂದಿನ ಪಂದ್ಯದಲ್ಲಿ ಗೌತಮ್ ಗಂಭೀರ್ ತೋರಿದ್ದ ವರ್ತನೆಗೆ ತಿರುಗೇಟು ಎಂಬಂತೆ ಇತ್ತು.ಕೊಹ್ಲಿ ಅವರ ಅಗ್ರೆಸ್ಸಿವ್ ಗೆ ತುಪ್ಪ ಸುರಿದ್ದು ಲಕ್ನೋ ತಂಡದ ವೇಗಿ ನವೀನ್ ಉಲ್ ಹಕ್.. ಬೌಲಿಂಗ್ ಮತ್ತು ಬ್ಯಾಟಿಂಗ್ ವೇಳೆ ಅವರು ಆರ್ ಸಿಬಿ ಬೌಲರ್ ಗಳನ್ನು ಕಿಚಾಯಿಸಿದ್ದು ಕೊಹ್ಲಿ ಕೋಪ ನೆತ್ತಿಗೇರುವಂತೆ ಮಾಡಿತ್ತು.Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos