ಬೆಳಗಾವಿ ಅಧಿವೇಶನದ ವೇಳೆ ಕಾಂಗ್ರೆಸ್ ಶಾಸಕಾಂಗ ಸಭೆ (ಸಾಂದರ್ಭಿಕ ಚಿತ್ರ) 
ರಾಜಕೀಯ

ಸಚಿವರ ವಿರುದ್ಧ ಮತ್ತೆ ಸ್ವಪಕ್ಷೀಯ ಗುಡುಗು

ಶಾಸಕಾಂಗ ಸಭೆಯಲ್ಲಿ ಪುನಃ ಅಸಮಾಧಾನ ಸ್ಫೋಟ, ಶಾಸಕರ ಭೇಟಿಗೆ ಸಮಯ ನಿಗದಿ

ಬೆಳಗಾವಿ: ಸಚಿವರು ಮತ್ತು ಆಡಳಿತಾರೂಢ ಶಾಸಕರ ನಡುವಿನ ಅಸಮಾಧಾನ ಬೆಳಗಾವಿಯಲ್ಲಿ ಮತ್ತೆ ಹೊತ್ತಿ ಉರಿದಿದೆ.

ಶಾಸಕಾಂಗ ಪಕ್ಷದ ಸಭೆಯಿಂದ ಸಚಿವರನ್ನು ಹೊರಗಿಡಿ, ಅವರ ವಿರುದ್ಧ ದೂರು ನೀಡಬೇಕು ಎಂಬ ಶಾಸಕರ ಆಕ್ರೋಶ ಭರಿತ ಬೇಡಿಕೆಯಿಂದ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ತಬ್ಬಿಬ್ಬಾದ ಘಟನೆ ಕೂಡ ನಡೆಯಿತು. ಬೆಳಗಾವಿಯ ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನ ಆರಂಭವಾದಾಗಿನಿಂದಲೂ ಸಚಿವರು ಮತ್ತು ಸ್ವಪಕ್ಷೀಯ ಶಾಸಕರ ನಡುವಿನ ಅಸಮಾಧಾನ ಹೊಗೆಯಾಡುತ್ತಲೇ ಇತ್ತು. ಇದಕ್ಕೆ ಬೆಂಕಿ ರೂಪ ಸಿಕ್ಕಿದ್ದು ಬುಧವಾರದ ಶಾಸಕಾಂಗ ಸಭೆ.

ಕ್ಷೇತ್ರಗಳಲ್ಲಿ ಉಸ್ತುವಾರಿ ಸಚಿವರ ಹಸ್ತಕ್ಷೇಪಗಳು, ಕಾರ್ಯವೈಖರಿಯಲ್ಲಿನ ಲೋಪ, ಬೇಡಿಕೆಗಳಿಗೆ ಸಿಗದ ಬೆಲೆಯಂಥ ಸಮಸ್ಯೆಗಳನ್ನು ಮುಂದಿಟ್ಟುಕೊಂಡ ಶಾಸಕರು, ಸಚಿವರನ್ನು ಹೊರಗೆ ಕಳುಹಿಸಿ ಎಂದು ಪಟಚ್ಟು ಹಿಡಿದರು. ಅವರು ಹೊರಹೋದ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ ತಮ್ಮ ಸಮಸ್ಯೆ ಆಲಿಸಬೇಕು ಎಂಬುದು ಅವರ ಬೇಡಿಕೆಯಾಗಿತ್ತು. ಆದರೆ ಶಾಸಕರ ಬೇಡಿಕೆಗೆ ಓಗೋಡದ ಸಿಎಂ ಸಿದ್ದರಾಮಯ್ಯ, ಇನ್ನು ಮುಂದೆ ನಿಮ್ಮ ಸಮಸ್ಯೆಗಳಿಗೆ ನಾನೇ ಒಂದು ಗಂಟೆ ಮೀಸಲಿಡುತ್ತೇನೆ ಎಂದು ಹೇಳಿದ ಮೇಲೆ ಅಸಮಾಧಾನದ ಉರಿ ತಣ್ಣಗಾಯ್ತು.

ನಗೆಪಾಟಲಿನ ಕ್ರಮ
ಸಚಿವರನ್ನು ಹೊರಗಿಟ್ಟು ಶಾಸಕಾಂಗ ಪಕ್ಷದ ಸಭೆ ನಡೆಸುವುದು ಸರಿಯಲ್ಲ. ಇದರಿಂದ ಪಕ್ಷ ತೀವ್ರ ಮುಜುಗರಕ್ಕೆ ಈಡಾಗಬೇಕಾಗುತ್ತದೆ ಎಂಬುದು ಮುಖ್ಯಮಂತ್ರಿ ಅವರ ಅಳಲು. ಹೀಗಾಗಿ ಶಾಸಕರ ಮನವೊಲಿಕೆ ಮಾಡಿದ ಅವರು, ಸಚಿವರ ಕಾರ್ಯವೈಖರಿಯಲ್ಲಿ ಲೋಪವಿದ್ದರೂ ಅವರನ್ನು ಸಭೆಯಿಂದ ಹೊರಗಿಡಲು ಸಾಧ್ಯವಿಲ್ಲ. ಇದಕ್ಕೆ ಕಾರಣ ಅವರೂ ಶಾಸಕಾಂಗ ಪಕ್ಷದ ಸದಸ್ಯರೇ. ಇಂಥ ಬೇಡಿಕೆಗಳನ್ನು ಇಡಬಾರದು ಎಂದರು. ಇನ್ನು ಮುಂದೆ ಬೆ.10ರಿಂದ 11 ಗಂಟೆವರೆಗೆ ನನ್ನನ್ನು ಭೇಟಿ ಮಾಡಿ. ಈ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಬೆಂಬಲಿಗರ ತಂಡವನ್ನು ಕರೆತರಬೇಡಿ ಎಂದೂ ಮನವಿ ಮಾಡಿಕೊಂಡರು ಎಂದು ಹೇಳಲಾಗಿದೆ.

ಮುಜುಗರ ತರಬೇಡಿ
ಸಭೆ ಆರಂಭವಾಗುತ್ತಿದ್ದಂತೆ ಶಾಸಕರನ್ನು ಉದ್ದೇಶಿಸಿ ಮಾತನಾಡಿದ ಮುಖ್ಯ ಸಚೇತಕ ಅಶೋಕ್ ಪಟ್ಟಣ, ಕಳೆದ ಸಭೆಯಲ್ಲಿ ಸಚಿವರ ವಿರುದ್ಧ ವ್ಯಕ್ತಪಡಿಸಿದ ಅಭಿಪ್ರಾಯ ಮಾಧ್ಯಮಗಳಲ್ಲಿ ವರದಿಯಾಗಿದೆ. ಇದರಿಂದ ಪಕ್ಷಕ್ಕೆ, ಸರ್ಕಾರಕ್ಕೆ ಮುಜುಗರವಾಗಿದೆ. ಹೀಗಾಗಿ ಸಚಿವರ ವಿರುದ್ಧ ಮಾತನಾಡಬೇಡಿ. ಏನೇ ಇದ್ದರೂ ಮುಖ್ಯಮಂತ್ರಿಯವರನ್ನು ಖಾಸಗಿಯಾಗಿ ಭೇಟಿ ಮಾಡಿ ಮನವಿ ನೀಡಿ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಉಕ್ರೇನ್ ವಿರುದ್ಧ ರಷ್ಯಾದ ದೀರ್ಘ ಸಂಘರ್ಷಕ್ಕೆ ಭಾರತವೇ ಕಾರಣ, ಇದು 'ಮೋದಿ ಯುದ್ಧ': White House ವ್ಯಾಪಾರ ಸಲಹೆಗಾರ ಪೀಟರ್ ನವರೊ

ಉಳಿಕೆ ಮತ್ತು ಹೂಡಿಕೆ ನಡುವೆ ಸಮತೋಲನವಿರಲಿ! (ಹಣಕ್ಲಾಸು)

ಚಾಮುಂಡೇಶ್ವರಿ ದೇವಿ ಸುತ್ತ ನಡೆಯುತ್ತಿರುವ ರಾಜಕೀಯ ತೀವ್ರ ಬೇಸರ ತರಿಸಿದೆ: ಪ್ರಮೋದಾದೇವಿ ಒಡೆಯರ್

ನಗರ ನಕ್ಸಲರ ಟಾರ್ಗೆಟ್‌ ಚಾಮುಂಡಿ ಬೆಟ್ಟ- ಬಿಎಲ್ ಸಂತೋಷ್: ಸತ್ಯ ಹೇಳಿದರೆ ಕೆಲವರು ಸಹಿಸಲ್ಲ, ಮಾತನಾಡದಿರುವುದೇ ಲೇಸು-dks

Minneapolis Shooter: 'Trump ಸಾವು.. ಭಾರತ ಸರ್ವನಾಶ': ಅಮೆರಿಕ ದಾಳಿಕೋರನ ಬಂದೂಕಿನ ಮೇಲೆ ಶಾಕಿಂಗ್ ಬರಹ!

SCROLL FOR NEXT