ರಾಜಕೀಯ

ಮೊದಲ ದಿನ ಬಿಜೆಪಿ ಎಚ್ಚರಿಕೆ ಹೆಜ್ಜೆ

Sumana Upadhyaya

ಬೆಂಗಳೂರು: ಭ್ರಷ್ಟಾಚಾರರಹಿತವಾಗಿ ಕಾರ್ಯನಿರ್ವಹಿಸಬೇಕು, ಪಾರದರ್ಶಕತೆಗೆ ಒತ್ತು ನೀಡಬೇಕು, ವೈಯಕ್ತಿಕ ಕೆಲಸಗಳಿಗೆ ಅಧಿಕಾರ ಬಳಸಿಕೊಳ್ಳಬಾರದು, ನಗರ ಸೇವಕರಂತೆ
ಕೆಲಸ ಮಾಡಬೇಕು..ಹೀಗೆ ಹತ್ತು ಹಲವು ಕಟು ಸಂದೇಶದ ಪಾಠ ಕೇಳುವ ಯೋಗ ಪಾಲಿಕೆಯ ನೂತನ ಬಿಜೆಪಿ ಸದಸ್ಯರಿಗೆ ಬುಧವಾರ ಒದಗಿಬಂದಿತ್ತು.

ಫಲಿತಾಂಶ ಪ್ರಕಟಗೊಂಡ 24 ಗಂಟೆಯೊಳಗೆ ನೀತಿಪಾಠದ ತರಗತಿ ಹಮ್ಮಿಕೊಂಡಿದ್ದ ಬಿಜೆಪಿಯು ನೂತನ ಸದಸ್ಯರಿಗೆ ಮಾರ್ಗದರ್ಶನ ಮಾಡುವ ಮೂಲಕ ಆರಂಭದಿಂದಲೇ ಎಚ್ಚರಿಕೆ ಹೆಜ್ಜೆ ಇಟ್ಟಿದೆ.

ಪಕ್ಷದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಕೇಂದ್ರ ಸಚಿವ ಅನಂತಕುಮಾರ್,ಸದಾನಂದ ಗೌಡ ಸೇರಿದಂತೆ ಪಕ್ಷದ ಪ್ರಮುಖರು ಮಾತನಾಡಿ,ನೂತನ ಸದಸ್ಯರು ಹೇಗೆ  ನಡೆದುಕೊಳ್ಳಬೇಕೆಂಬ ಬಗ್ಗೆ ತಿಳಿಸಿಕೊಟ್ಟರು.

ನಗರ ಸೇವಕರಾಗಲು ಸೂಚನೆ:
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಸಚಿವ ಅನಂತಕುಮಾರ್, ನಗರ ಪಾಲಿಕೆ ಸದಸ್ಯರು ನಗರ ಸೇವಕರಂತೆ ಕೆಲಸ ಮಾಡ
ಬೇಕು, ಪ್ರಧಾನಿ ನರೇಂದ್ರ ಮೋದಿ ಅವರ ಪ್ರಧಾನ ಸೇವಕ ಎಂಬ ಕಲ್ಪನೆಯಂತೆಯೇ ನಗರದ ಪಾಲಿಕೆ ಸದಸ್ಯರು ಬೆಂಗಳೂರಿನ ಅಭಿವೃದ್ಧಿಗಾಗಿ ಪಾಲಿಕೆ ಸದಸ್ಯರಿಂದ ಹೆಚ್ಚಾಗಿ ನಗರ ಸೇವಕರಾಗಿ ಕೆಲಸ ಮಾಡಬೇಕಾಗಿದೆ ಎಂದು ಸಲಹೆ ನೀಡಿರುವುದಾಗಿ ತಿಳಿಸಿದರು.

ಜನರ ಪರವಾಗಿ, ವಿನಮೃತವಾಗಿ, ಜವಾಬ್ದಾರಿಯಿಂದ ಜನ ನೀಡಿರುವ ಆದೇಶವನ್ನು ಪಾಲಿಸಬೇಕಾದ ಅಗತ್ಯತೆ ಇದ್ದು, ಈ ಹಿನ್ನಲೆಯಲ್ಲಿ ಪ್ರತಿಯೊಬ್ಬ ಪಾಲಿಕೆ ಸದಸ್ಯರು ಹೆಜ್ಜೆ ಇಡಬೇಕಿದೆ. ಯಾವುದೇ ಕಾರಣಕ್ಕೂ ಸದಸ್ಯರು ತಮ್ಮ ಜವಾಬ್ದಾರಿಯನ್ನು ಮರೆತು
ವರ್ತಿಸಬಾರದು ಎಂದು ತಿಳಿಸಿರುವುದಾಗಿ ಹೇಳಿದರು.

SCROLL FOR NEXT