ರಾಜಕೀಯ

ಇನ್ನು ರಾಜಕಾರಣಕ್ಕೆ ಬರಲ್ಲ: ಕಾಗೋಡು

ವಿಧಾನಸಭೆ: ನಾನು ಇನ್ನು ರಾಜಕಾರಣಕ್ಕೆ ಬರುವುದಿಲ್ಲ ಎಂದು ಸ್ಪೀಕರ್ ಕಾಗೋಡು ತಿಮ್ಮಪ್ಪ ಹೇಳಿದ್ದಾರೆ.

ದೆಹಲಿ ಚುನಾವಣೆ ಫಲಿತಾಂಶದಿಂದ ಎಲ್ಲರೂ ಬೇಸರದಲ್ಲಿ ಇದ್ದಾರೆ. ನಿಮಗೆ ಯಾವುದೇ ಹಂಗಿಲ್ಲ. ಏಕೆಂದರೆ ನೀವೀಗ ಯಾವ ಪಕ್ಷದ ಸದಸ್ಯರೂ ಅಲ್ಲ. ಮುಂದೆ ಬರುವ ಸಾಧ್ಯತೆ ಇದೆಯೇಎಂದು ರಮೇಶ್‍ಕುಮಾರ್ ಕಾಲೆಳೆದಾಗ ಸ್ಪೀಕರ್ ಈ ಉತ್ತರ ನೀಡಿದರು.

ನಾನು ಇನ್ನು ಮುಂದೆ ರಾಜಕಾರಣಕ್ಕೆ ಬರುವುದಿಲ್ಲ. ಈ ಸಲವೂ ಬರಬಾರದು ಎಂದುಕೊಂಡಿದ್ದೆ. ಆದರೆ, ಅರಣ್ಯಭೂಮಿ ಸಮಸ್ಯೆ ಬಗೆಹರಿಸಬೇಕೆಂಬ ಕಾರಣಕ್ಕೆ ಬಂದೆ. ಮಾರ್ಚ್ ಅಂತ್ಯದ ವೇಳೆಗೆ ಸಮಸ್ಯೆ ಬಗೆಹರಿಸಿ ಹಕ್ಕುಪತ್ರ ನೀಡಬೇಕೆಂದುಕೊಂಡಿದ್ದೆ. ಇದಕ್ಕಾಗಿ ತಿರುಗಿ ತಿರುಗಿ ನನ್ನ ಹೆಣ ಬಿದ್ದಿದೆ ಎಂದರು.

SCROLL FOR NEXT