ಅಂಬರೀಶ್ 
ರಾಜಕೀಯ

ವಸತಿರಹಿತರಿಗಾಗೇ ಪ್ರತ್ಯೇಕ ಗಣತಿ

ಸರ್ಕಾರ ನಡೆಸುತ್ತಿರುವ ಜಾತಿ ಜನಗಣತಿ ಕಾರ್ಯದಲ್ಲಿ ವಸತಿ ರಹಿತರ ಬಗ್ಗೆ ಮಾಹಿತಿ ಸಿಗದಿದ್ದರೆ ಅವರ ಸಲುವಾಗಿಯೇ ಪ್ರತ್ಯೇಕ...

ಬೆಂಗಳೂರು: ಸರ್ಕಾರ  ನಡೆಸುತ್ತಿರುವ ಜಾತಿ ಜನಗಣತಿ  ಕಾರ್ಯದಲ್ಲಿ ವಸತಿ ರಹಿತರ ಬಗ್ಗೆ ಮಾಹಿತಿ ಸಿಗದಿದ್ದರೆ ಅವರ ಸಲುವಾಗಿಯೇ ಪ್ರತ್ಯೇಕ ಗಣತಿ ನಡೆಸುವುದಾಗಿ ವಸತಿ ಸಚಿವ ಅಂಬರೀಷ್  ಹೇಳಿದ್ದಾರೆ.

ಜಾತಿಗಣತಿ ಹೆಸರಿನಲ್ಲಿ ಮಾಹಿತಿ ಕಲೆ ಹಾಕಲು ಹೋದ ಅಧಿಕಾರಿ ಗಳನ್ನು ಹಲವೆಡೆ ಕುಟುಂಬದ ಮುಖ್ಯಸ್ಥರು ಗೆಟ್‍ಔಟ್ ಎಂದು ಹೊರಗೆ ಕಳಿಸಿದ್ದಾರೆ.ಇದರಿಂದ ಜಾತಿವಾರು ಗಣತಿಯ ಮೂಲಕ ಎಲ್ಲ ವಿವರ ಲಭ್ಯವಾಗುವುದು ಕಷ್ಟ ಎಂದು ಹೇಳಿದ್ದಾರೆ.
ಕೆಪಿಸಿಸಿ ಕಚೇರಿಗೆ ಭೇಟಿ ನೀಡಿ ಕಾರ್ಯಕರ್ತರ ಅಹವಾಲು ಸ್ವೀಕರಿಸಿದ ನಂತರ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು ಜಾತಿ ಗಣತಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯ ವಸತಿ ಇಲಾಖೆಯಿಂದ ನಿವೇಶನ ರಹಿತರ ಸಮೀಕ್ಷೆ ನಡೆಸುವ ಪ್ರಯತ್ನ ನಡೆದಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅದಕ್ಕೆ ಅವಕಾಶ ನೀಡಲಿಲ್ಲ.ಜಾತಿವಾರು ಸಮೀಕ್ಷೆಯ
ಜತೆಯಲ್ಲೇ ನಿವೇಶನ ಮತ್ತು ವಸತಿ ರಹಿತರ ಸಮೀಕ್ಷೆ   ನಡೆಯಬೇಕಿತ್ತು.   ಆದರೆ, ಜಾತಿ ಸಮೀಕ್ಷೆಯಲ್ಲಿ ನಿವೇಶನ ಮತ್ತು ವಸತಿ ರಹಿತರ ನ್ನು ಗುರುತಿಸುವುದು ಕಷ್ಟವಾಗುತ್ತಿದೆ.
ಈ ವಿಚಾರದಲ್ಲಿ ಹಲವಾರು ಪ್ರಶ್ನೆಗಳಿವೆ. ಜಾತಿಯ ಕುರಿತು ಕೇಳುತ್ತಿದ್ದಂತೆ ಕುಟುಂಬ ದವರು ಸಮೀಕ್ಷೆದಾರರನ್ನು ಗದರಿಸಿ ಕಳುಸಿದ್ದಾರೆ. ಹೀಗಾಗಿ ನಿವೇಶನ ನಿವೇಶನ ಮತ್ತು ವಸತಿ ರಹಿತರ ಸಮಗ್ರ ಮಾಹಿತಿ ದೊರೆಯುವುದು ಕಷ್ಟ ಎಂದರು.
ಒಕ್ಕಲಿಗ ಸಮುದಾಯದಲ್ಲಿ 25 ಜಾತಿಗಳಿವೆ. ಎಲ್ಲವನ್ನು ಬಿಡಿಸಿ ಮಾಹಿತಿ  ಕಲೆ ಹಾಕುವುದು ಕಷ್ಟ.  ಈ ಗಣತಿ ಕಾರ್ಯದಲ್ಲಿ ನಿವೇಶನ, ವಸತಿ ರಹಿತರ  ಸಮಗ್ರ ಮಾಹಿತಿ ಸಿಗದೇ ಇದ್ದರೆ ಮತ್ತೊಂದು ಸುತ್ತು ಪ್ರತ್ಯೇಕವಾಗಿ ವಸತಿ ಇಲಾಖೆಯಿಂದ ಸಮೀಕ್ಷೆ ನಡೆಸುವ ಕುರಿತು ಪರಿಶೀಲಿಸಿ ರಹಿತರ ಸಮಗ್ರ ಮಾಹಿತಿ ಸಿಗದೇ ಇದ್ದರೆ ಮತ್ತೊಂದು  ಸುತ್ತು ಪ್ರತ್ಯೇಕವಾಗಿ  ವಸತಿ ಇಲಾಖೆಯಿಂದ ಸಮೀಕ್ಷೆ ನಡೆಸುವ ಕುರಿತು ಪರಿಶೀಲಿಸಲಾಗುವುದಾಗಿ ಹೇಳಿದರು.
ಸಿಎಂ ಆಗುವುದಕ್ಕೆ ವಯಸ್ಸಾಯ್ತು: ಸಚಿವ ಸ್ಥಾನ ಬಿಟ್ಟು, ಕೆಪಿಸಿಸಿ ಅಧ್ಯಕ್ಷರಾಗಿ ಮುಂದೆ ಮುಖ್ಯಮಂತ್ರಿಯಾಗುವ ಗುರಿ ಇಟ್ಟುಕೊಂಡಿದ್ದೀರಾ ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನನ್ನ ಸಾಮಥ್ರ್ಯ ಏನು ಎಂದು ನನಗೆ ಗೊತ್ತಿದೆ. ಈಗಾಗಲೇ 64 ವರ್ಷ ವಯಸ್ಸಾಗಿದೆ. ಪಕ್ಷ ನೀಡುವ ಯಾ ವುದೇ ಜವಾಬ್ದಾರಿಗಳನ್ನು ಪ್ರಾಮಾಣಿಕವಾಗಿ ನಿಭಾಯಿಸುತ್ತೇನೆ. ಆದರೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನಿಭಾಯಿಸುವ ವಯಸ್ಸು ನನ್ನಲ್ಲಿ ಉಳಿದಿಲ್ಲ ಎಂದು ಹೇಳಿದರು. ಸಚಿವರ ಮೌಲ್ಯಮಾಪನ ಮಾಡಬೇಕು ಎಂಬುದೇ ಅರ್ಥಹೀನ. ಪ್ರತಿ ದಿನ ಸಚಿವರ ಕಾರ್ಯ ವೈಖರಿಯ ಬಗ್ಗೆ ಗುಪ್ತಚರ ಇಲಾಖೆ ಸಿಎಂಗೆ ಮಾಹಿತಿ ನೀಡುತ್ತಲೇ ಇರುತ್ತದೆ. ಮಾಧ್ಯಮಗಳಲ್ಲೂ ಎಲ್ಲವೂ ತೋರಿಸುತ್ತಾರೆ. ಅದರ ಹೊರತಾಗಿ ಪ್ರತ್ಯೇಕವಾಗಿ ಮೌಲ್ಯಮಾಪನ ಮಾಡುವುದೇ ಆದರೆ ಅದಕ್ಕೆ ನನ್ನ ಅಭ್ಯಂತರ ಇಲ್ಲ ಎಂದರು.



ರಮ್ಯಾಳನ್ನು ನೀವೇ ಹುಡುಕಿ
ಮಾಜಿ ಸಂಸದೆ ಹಾಗೂ ನಟಿ ರಮ್ಯ ಎಲ್ಲಿದ್ದಾರೆ ಎಂಬ ಪ್ರಶ್ನೆಗೆ ಅವರು ಎಲ್ಲಿದ್ದಾರೆ ಎಂಬುದು ನನಗೂ ಗೊತ್ತಿಲ್ಲ. ನಿಮಗೇನಾದರೂ ಸಿಕ್ಕರೆ ಹುಡುಕಿಕೊಡಿ ಎಂದು ಮಾಧ್ಯಮದವರಿಗೆ ಅಂಬರೀಶ್ ಮರು ಪ್ರಶ್ನೆ ಎಸೆದರು. ಆರು ತಿಂಗಳಲ್ಲೇ ಮಂಡ್ಯದ ಜನ ಚುನಾವಣೆಯಲ್ಲಿ ಸೋಲಿಸಿದರಲ್ಲ ಎಂಬ ಬೇಸರಕ್ಕಾಗಿ ನಾಪತ್ತೆಯಾಗಿರಬಹುದು. ಚುನಾವಣೆಯಲ್ಲಿ ಸೋಲು-ಗೆಲುವು ಸಾಮಾನ್ಯ, ನಾನೂ ಸೋಲು ಕಂಡಿದ್ದೇನೆ. ಹಾಗೆಂದು ನಾನು ಎಲ್ಲಿಯೂ ಹೋಗಿರಲಿಲ್ಲ ಎಂದು ವ್ಯಂಗ್ಯವಾಡಿದರು. ವಸತಿ ಇಲಾಖೆಯಲ್ಲಿ ಸಾಕಷ್ಟು ಹಗರಣಗಳು ನಡೆದಿವೆ. ಅದನ್ನು ನಾನು ಕೆಣಕಲು ಹೋಗುವುದಿಲ್ಲ. ಆರೋಪಗಳನ್ನು ಮಾಡುತ್ತಾ ಕುಳಿತರೆ ಯಾವುದೇ ಸಾಧನೆ ಮಾಡಲು ಆಗುವುದಿಲ್ಲ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT