ರಾಜಕೀಯ

ಪ್ರಧಾನಿ ಮೋದಿ ಅವರ ವಿದೇಶಾಂಗ ನೀತಿ ಹೊಗಳಿದ ಎಸ್‌.ಎಂ. ಕೃಷ್ಣ

Shilpa D

ಉಡುಪಿ: ಜಾಗತಿಕ ಮಟ್ಟದಲ್ಲಿ ಪ್ರವಾಸ ಮಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿ  ಭಾರತಕ್ಕೆ ಉತ್ತಮ ಹೆಸರನ್ನು ತಂದು ಕೊಡುತ್ತಿದ್ದಾರೆ. ಆದ್ದರಿಂದ ದೇಶದ ಹಿತದೃಷ್ಟಿಯಿಂದ ಮೋದಿ ಕೈ ಬಲಪಡಿಸಬೇಕು ಎಂದು ಮಾಜಿ ಮುಖ್ಯಮಂತ್ರಿ, ಮಾಜಿ ವಿದೇಶಾಂಗ ಸಚಿವ ಎಸ್‌.ಎಂ. ಕೃಷ್ಣ ಹೇಳಿದ್ದಾರೆ.

ಶ್ರೀಕೃಷ್ಣಮಠದಲ್ಲಿ ಪರ್ಯಾಯ ಶ್ರೀಪೇಜಾವರ ಮಠದಿಂದ ರಾಷ್ಟ್ರರತ್ನ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ನಾನೂ ವಿದೇಶಾಂಗ ಸಚಿವನಾಗಿ ಕೆಲಸ ಮಾಡಿದ್ದೇನೆ. ಈಗ ರಷ್ಯಾ, ಅಮೆರಿಕವೇ ಮೊದಲಾದ ದೇಶಗಳಲ್ಲಿ ಭಾರತಕ್ಕೆ ಉತ್ತಮ ಹೆಸರಿದೆ ಮತ್ತು ಉತ್ತಮ ಸಂಬಂಧವಿದೆ. ಆದರೆ ಚೀನ ಜೊತೆ ಮಾತ್ರ ಹಿಂದೆ ಇದ್ದೇವೆ. ಹಿಂದಿನ ಸರ್ಕಾರಗಳೂ ಚೀನಾ ಜೊತೆ ಸಂಬಂಧ ಇಟ್ಟುಕೊಳ್ಳಲು ಪ್ರಯತ್ನಿಸಿದ್ದವು. ಈಗಲೂ ಆ ಪ್ರಯತ್ನ ನಡೆಯುತ್ತಿದೆ ಎಂದರು.

ಒಂದು ಕಡೆ ಮೌಲ್ಯಗಳು ಕುಸಿಯುತ್ತಿದ್ದರೆ ಇನ್ನೊಂದು ಕಡೆ ಮೌಲ್ಯಗಳನ್ನು ಎತ್ತಿ ಹಿಡಿಯುವ ಪ್ರಯತ್ನ ನಡೆಯುತ್ತಿದೆ. ಚುನಾವಣೆಯಲ್ಲಿ ಹಣದ ಪ್ರಭಾವ ಹೆಚ್ಚಿಗೆ ಆಗಿ ಮೌಲ್ಯ ಕುಸಿಯುತ್ತಿದೆ. ಹಣದೊಂದಿಗೆ ಹಲವು ಆಯಾಮಗಳಿವೆ. ಚುನಾವಣೆಯಲ್ಲಿ ಹಣದ ಪ್ರಭಾವವನ್ನು ಸುಧಾರಿಸುವ ಕೆಲಸವನ್ನು ನರೇಂದ್ರ ಮೋದಿ ಮಾಡಿದರೆ ಜನರು ಅವರನ್ನು ಹಾಡಿ ಹೊಗಳುತ್ತಾರೆ ಎಂದು ಕೃಷ್ಣ ಹೇಳಿದರು.

SCROLL FOR NEXT