ಅಂಬರೀಷ್ 
ರಾಜಕೀಯ

ಸಿಎಂ ಜೊತೆ ಮುನಿಸು: ಇಂದಿನ ಸರ್ವಪಕ್ಷ ಸಭೆಗೂ ಅಂಬರೀಷ್ ಗೈರು

ಪದೇ ಪದೇ ಸುಪ್ರೀಂ ಕೋರ್ಟ್ ರಾಜ್ಯದ ವಿರುದ್ಧವಾಗಿಯೇ ತೀರ್ಪು ನೀಡುತ್ತಿದೆ. ಇಷ್ಟಾದರೂ ಮಂಡ್ಯ ಜನರ ಹೋರಾಟಕ್ಕೆ ಸಾಥ್ ನೀಡುವ ಕನಿಷ್ಠ ಪ್ರಯತ್ನ ಮಾಡದ ಮಾಜಿ ಸಚಿವ ಹಾಗೂ ನಟ ಅಂಬರೀಷ್...

ಬೆಂಗಳೂರು: ಕಾವೇರಿ ನೀರಿಗಾಗಿ ಜನರು ಬೀದಿಗಿಳಿದಿದ್ದಾರೆ. ಸತತವಾಗಿ ಹೋರಾಟಗಳು ನಡೆಯುತ್ತಿವೆ. ಪದೇ ಪದೇ ಸುಪ್ರೀಂ ಕೋರ್ಟ್ ರಾಜ್ಯದ ವಿರುದ್ಧವಾಗಿಯೇ ತೀರ್ಪು ನೀಡುತ್ತಿದೆ. ಇಷ್ಟಾದರೂ ಮಂಡ್ಯ ಜನರ ಹೋರಾಟಕ್ಕೆ ಸಾಥ್ ನೀಡುವ ಕನಿಷ್ಠ ಪ್ರಯತ್ನ ಮಾಡದ ಮಾಜಿ ಸಚಿವ ಹಾಗೂ ನಟ ಅಂಬರೀಷ್ ಇಂದು ನಡೆದ ಸರ್ವ ಪಕ್ಷ ಸಭೆಗೂ ಗೈರಾಗಿದ್ದಾರೆ.

ತಮ್ಮನ್ನು ಸಂಪುಟದಿಂದ ತೆಗೆದು ಹಾಕಿದ ನಂತರ ಸಿಎಂ ಜೊತೆ ಮುನಿಸಿಕೊಂಡಂತಿರುವ ಅಂಬರೀಷ್ ಮಂಡ್ಯ ಜಿಲ್ಲೆಯ ರೈತರ ಕಷ್ಟಗಳಿಗಿಂತ ಸಿದ್ದರಾಮಯ್ಯ ಅವರ ವಿರುದ್ಧದ ಕೋಪವೇ ಹೆಚ್ಚಾಯಿತು ಎಂಬಂತೆ ನಡೆದುಕೊಳ್ಳುತ್ತಿದ್ದಾರೆ.  

ಅದೆಲ್ಲಾ ಇರಲಿ ಕಾವೇರಿ ನದಿ ನೀರು ಹಂಚಿಕೆ ವಿವಾದ ಸಂಬಂಧ ಸುಪ್ರೀಂ ಕೋರ್ಟ್ ಆದೇಶ ಪಾಲನೆ ಕುರಿತು ಕರೆದಿರುವ ಸರ್ವಪಕ್ಷ ಸಭೆಯಿಂದಲೂ ದೂರ ಉಳಿದಿದ್ದಾರೆ. ಕಾವೇರಿಗೆ ಸಂಬಂಧಪಟ್ಟಂತೆ ಇಂದು ನಾಲ್ಕನೇ ಸರ್ವಪಕ್ಷ ಸಭೆ ನಡೆಯಿತು. ಈವೆರೆಗಿನ ನಾಲ್ಕೂ ಸಭೆಗಳಿಗೂ ಅಂಬರೀಷ್ ಗೈರಾಗಿದ್ದು, ತವರಿನ ಹಿತ ಕಾಯುವ ಪ್ರಯತ್ನದಿಂದ ದೂರ ಉಳಿದುಕೊಂಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

Indian Navy ಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ! Video

Idre Nemdiyaag Irbek: ಯೂ ಟ್ಯೂಬ್ ನಲ್ಲಿ ಧೂಳೆಬ್ಬಿಸುತ್ತಿರುವಂತೆ ವಿವಾದಕ್ಕೆ ಗುರಿಯಾದ Devil ಸಾಂಗ್! ಟ್ಯೂನ್ ಕದ್ದ ಆರೋಪ!

SCROLL FOR NEXT