ಜೆಡಿಎಸ್ ನಾಯಕ ಹೆಚ್.ಡಿ.ರೇವಣ್ಣ 
ರಾಜಕೀಯ

ಎಸ್.ಎಂ. ಕೃಷ್ಣ ದಂಪತಿ ಆಶೀರ್ವಾದ ಪಡೆದ ರೇವಣ್ಣ!

ಅಮವಾಸ್ಯೆ ಪ್ರಯುಕ್ತ ವಿಶೇಷ ಪೂಜೆ ಸಲ್ಲಿಸುವ ಸಲುವಾಗಿ ಆದಿಚುಂಚನಗಿರಿಯ ಶ್ರೀಕಾಲಭೈರವೇಶ್ವರ ಸನ್ನಿಧಾನಕ್ಕೆ ಆಗಮಿಸಿದ್ದ ಹೆಚ್.ಡಿ.ರೇವಣ್ಣ ಅವರು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ದಂಪತಿಗಳ ಕಾಲಿಗೆರಗಿ...

ಮೈಸೂರು: ಅಮವಾಸ್ಯೆ ಪ್ರಯುಕ್ತ ವಿಶೇಷ ಪೂಜೆ ಸಲ್ಲಿಸುವ ಸಲುವಾಗಿ ಆದಿಚುಂಚನಗಿರಿಯ ಶ್ರೀಕಾಲಭೈರವೇಶ್ವರ ಸನ್ನಿಧಾನಕ್ಕೆ ಆಗಮಿಸಿದ್ದ ಹೆಚ್.ಡಿ.ರೇವಣ್ಣ ಅವರು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ದಂಪತಿಗಳ ಕಾಲಿಗೆರಗಿ ಆಶೀರ್ವಾದ ಪಡೆದುಕೊಂಡಿದ್ದಾರೆ. 
ರಾಜಕೀಯದಲ್ಲಿ ಸ್ಪರ್ಧಿಗಳಾಗಿದ್ದರೂ ಭೀಮನ ಅಮವಾಸ್ಯೆಯ ದಿನವಾಗಿದ್ದ ನಿನ್ನೆ ಎಸ್.ಎಂ.ಕೃಷ್ಣ ಹಾಗೂ ರೇವಣ್ಣ ಅವರು ಆದಿಚುಂಚನಗಿರಿಯ ಶ್ರೀಕಾಲಭೈರವೇಶ್ವರ ಸನ್ನಿಧಾನದಲ್ಲಿ ಒಟ್ಟಿಗೆ ಸೇರಿದ್ದು ವಿಶೇಷವಾಗಿತ್ತು. 
ಅಮವಾಸ್ಯೆ ಹಿನ್ನಲೆಯಲ್ಲಿ ರೇವಣ್ಣ ಮತ್ತು ಭವಾನಿ ರೇವಣ್ಣ ಅವರು ಶ್ರೀಕ್ಷೇತ್ರಕ್ಕೆ ಭೇಟಿ ನೀಡಿದ್ದರು. ಇದೇ ಸಮಯಕ್ಕೆ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಮುಖಂಡ ಎಸ್.ಎಸ್ ಕೃಷ್ಮ ದಂಪತಿಗಳು ಕೂಡ ಆಗಮಿಸಿದ್ದರು. ಎಸ್.ಎಂ.ಕೃಷ್ಣ ದಂಪತಿಗಳು ಆಗಮಿಸಿದ ವಿಚಾರ ತಿಳಿದ ರೇವಣ್ಣ ಅವರು ದಂಪತಿಗಳನ್ನು ಆತ್ಮೀಯವಾಗಿ ಸ್ವಾಗತಿಸಿದರು. ಅಲ್ಲದೆ, ಪೂಜೆ ಬಳಿಕ ರೇವಣ್ಮ ದಂಪತಿಗಳು ಎಸ್.ಎಂ.ಕೃಷ್ಣ ದಂಪತಿಯ ಕಾಲಿಗೆರಗಿ ಆಶೀರ್ವಾದ ಪಡೆದುಕೊಂಡರು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನಾಯಕತ್ವ ಬದಲಾವಣೆ ಜಟಾಪಟಿ: 5 ವರ್ಷವೂ ನಾನೇ ಸಿಎಂ ಎಂದು ಡಿಕೆಶಿ ನೋಡಿದಾಕ್ಷಣ ಸ್ವರ ಬದಲಿಸಿದ ಸಿದ್ದು, ಊಹಾಪೋಹ ಶುರು

ಕೂಡ್ಲಿಗಿ ಕಾರ್ಯಕ್ರಮದಲ್ಲಿ CM-DCM ನಡುವಿನ ವೈಮನಸ್ಸು ಬಹಿರಂಗ; ಅಕ್ಕ ಪಕ್ಕ ಕುಳಿತರೂ ಮಾತನಾಡದ ಸಿದ್ದು-ಡಿಕೆಶಿ..!

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಸಾಮೂಹಿಕ 'ನಮಾಜ್‌': ಅನುಮತಿ ಕೊಟ್ಟವರು ಯಾರು? ಸಿದ್ದರಾಮಯ್ಯಗೆ ಬಿಜೆಪಿ ಪ್ರಶ್ನೆ! Video

ಸಂಬಂಧಪಟ್ಟ ಇಲಾಖೆಗೆ ಕುಂದುಕೊರತೆಗಳ ಬಗ್ಗೆ ದೂರು ನೀಡಲು ತಿಣುಕಾಡುತ್ತಿದ್ದೀರಾ: ರಾಜ್ಯದಲ್ಲಿ ಶೀಘ್ರವೇ ಆರಂಭವಾಗಲಿದೆ AI ಆಧಾರಿತ ವ್ಯವಸ್ಥೆ!

ಲಖನೌ: ವೇಗವಾಗಿ ಚಲಿಸುತ್ತಿದ್ದ ಕಾರಿನಲ್ಲಿ 'ನಗ್ನ ಮಹಿಳೆ'ಯ ಅಪಾಯಕಾರಿ ದುಸ್ಸಾಹಸದ Video ವೈರಲ್, ತೀವ್ರ ಆಕ್ರೋಶ

SCROLL FOR NEXT