ಸಾಂದರ್ಭಿಕ ಚಿತ್ರ 
ರಾಜಕೀಯ

ಮೌಢ್ಯ ನಿಷೇಧ ವಿಧೇಯಕವನ್ನು ತರಾತುರಿಯಲ್ಲಿ ಮಂಡಿಸಲಾಯಿತು: ವಿರೋಧ ಪಕ್ಷದ ನಾಯಕರು

3 ವರ್ಷಗಳಿಂದ ರಾಜ್ಯದಲ್ಲಿ ತೀವ್ರ ಚರ್ಚೆಗೆ ಒಳಗಾಗಿದ್ದ ವಿವಾದಿತ ಮೌಢ್ಯ ಪ್ರತಿಬಂಧಕ ವಿಧೇಯಕವನ್ನು ವಿಧಾನ ಮಂಡಲ ಅಧಿವೇಶನದಲ್ಲಿ ಸರ್ಕಾರದ ತರಾತುರಿಯಲ್ಲಿ ಮಂಡನೆ ಮಾಡಿ. ಅನುಮೋದನೆ ಪಡೆದುಕೊಂಡಿತು...

ಬೆಳಗಾವಿ: 3 ವರ್ಷಗಳಿಂದ ರಾಜ್ಯದಲ್ಲಿ ತೀವ್ರ ಚರ್ಚೆಗೆ ಒಳಗಾಗಿದ್ದ ವಿವಾದಿತ ಮೌಢ್ಯ ಪ್ರತಿಬಂಧಕ ವಿಧೇಯಕವನ್ನು ವಿಧಾನ ಮಂಡಲ ಅಧಿವೇಶನದಲ್ಲಿ ಸರ್ಕಾರದ ತರಾತುರಿಯಲ್ಲಿ ಮಂಡನೆ ಮಾಡಿ. ಅನುಮೋದನೆ ಪಡೆದುಕೊಂಡಿತು ಎಂದು ವಿರೋಧ ಪಕ್ಷಗಳ ನಾಯಕರು ಗುರುವಾರ ಹೇಳಿದ್ದಾರೆ. 
ಮೌಢ್ಯ ನಿಷೇಧ ವಿಧೇಯಕ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಶಾಸಕ ಬಿ.ಆರ್. ಪಾಟೀಲ್ ಅವರು, ಪ್ರಗತಿಪರ ಚಿಂತಕರ ಒತ್ತಡಗಳಿಂದಾಗಿ ಸರ್ಕಾರ ವಿಧೇಯಕವನ್ನು ತರಾತುರಿಯಲ್ಲಿ ಜಾರಿಗೆ ತಂದಿತು ಎಂದು ಹೇಳಿದ್ದಾರೆ. 
ಬಿಜೆಪಿ ಸದಸ್ಯ ವಿಶ್ವೇಶ್ವರ ಹೆಗ್ಡೆ ಕಾಗೇರಿಯವರು ಮಾತನಾಡಿ, ನಂಬಿಕೆ ಕುರಿತ ವ್ಯಾಖ್ಯಾನ ಸಂಕೀರ್ಣವಾದದ್ದು, ನಂಬಿಕೆಯೆಂಬುದು ಸಮಯದೊಂದಿದೆ ಬದಲಾಗುತ್ತದೆ. ಹೀಗಾಗಿ ವಿಧೇಯಕ ಕುರಿತು ತಜ್ಞರು ಹಾಗೂ ಸಂಬಂಧ ಪಟ್ಟಂತಹ ವಿಶ್ಲೇಷಕರೊಂದಿಗೆ ಚರ್ಚೆ ನಡೆಸುವ ಅಗತ್ಯವಿತ್ತು. ಆದರೆ, ಚರ್ಚೆ ನಡೆಸುವುದಕ್ಕೂ ಮುನ್ನವೇ ವಿಧೇಯಕ ಅನುಮೋದನೆ ಪಡೆದುಕೊಂಡಿತು. ಆದರೆ, ವಿಧೇಯಕದ ವಿರುದ್ಧ ನಾನಿಲ್ಲ ಎಂದು ಹೇಳಿದ್ದಾರೆ. 
ಜೆಡಿಎಸ್ ನಾಯಕ ವೈಎಸ್'ವಿ ದತ್ತಾ ಮಾತನಾಡಿ, ಇಂತಹ ವಿಧೇಯಕರವನ್ನು ಒಪ್ಪಿಕೊಳ್ಳುವುದಕ್ಕೂ ಮುನ್ನ ಜನರದಲ್ಲಿರುವ ಮೂಲಭೂತ ಚಿಂತನೆಗಳನ್ನು ಹೆಚ್ಚಿಸಬೇಕು. ಆದರೆ, ಸರ್ಕಾರ ಜಾರಿಗೆ ತಂದಿರುವ ವಿಧೇಯಕದಿಂದ ದೊಡ್ಡ ಕ್ರಾಂತಿಯೇನೂ ಆಗುವುದಿಲ್ಲ ಎಂದಿದ್ದಾರೆ. 
ಜೆಡಿಎಸ್ ನಾಯಕ ಹೆಚ್.ಡಿ. ರೇವಣ್ಣ ಅವರು ಮಾತನಾಡಿ, ಕಾಗೆ ಕುಳಿತ ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಅಧಿಕೃತ ಕಾರನ್ನು ಬದಲಾಯಿಸಿದ್ದರು. ಕಾರು ಬದಲಾಯಿಸಿದ ಬಳಿಕ ಕಾಕತಾಳೀಯವೆಂಬಂತೆ ತಾವು ಈ ಮೊದಲೇ ಕಾರನ್ನು ಬದಲಿಸಬೇಕು ಎಂದುಕೊಂಡಿದ್ದೆ ಎಂದು ಸ್ಪಷ್ಟನೆ ನೀಡಿದ್ದರು. ನನ್ನ ಕಾರಿನ ಮೇಲೆ 20 ಕಾಗೆಗಳು ಕುಳಿತುಕೊಳ್ಳಲಿ. ನಾನು ನನ್ನ ಕಾರನ್ನು ಬದಲಾಯಿಸುವುದಿಲ್ಲ ಎಂದು ತಿಳಿಸಿದ್ದಾರೆ. 
ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಮಾತನಾಡಿ, ಮಾಟಮಂತ್ರ ಮತ್ತು ವಾಮಾಚಾರಗಳಂತಹ ಮೂಢನಂಬಿಕೆಗಳಿಗೆ ಹಿಂದುಳಿದ ವರ್ಗದ ಜನರೇ ಹೆಚ್ಚು ಬಲಿಯಾಗುತ್ತಿದ್ದು, ವಿಧೇಯಕ ಕುರಿತಂತೆ ಅವರಿಗೆ ಸೂಕ್ತ ರೀತಿಯಲ್ಲಿ ಮಾಹಿತಿ ಒದಗಿಸಬೇಕಿದೆ ಎಂದು ಹೇಳಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

ಮಹಿಳಾ ಟೆಕ್ಕಿ ಸಾವಿನ ಕೇಸ್ ಗೆ ಬಿಗ್ ಟ್ವಿಸ್ಟ್: ಹತ್ಯೆಗೂ ಮುನ್ನ PU ವಿದ್ಯಾರ್ಥಿಯಿಂದ ರೇಪ್; ಸಾಕ್ಷಿ ನಾಶಕ್ಕೆ ಬೆಂಕಿ ಹಚ್ಚಿದ ಕರ್ನಲ್ ಕುರೈ!

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

SCROLL FOR NEXT