ಸಾಂದರ್ಭಿಕ ಚಿತ್ರ 
ರಾಜಕೀಯ

ಮೌಢ್ಯ ನಿಷೇಧ ವಿಧೇಯಕವನ್ನು ತರಾತುರಿಯಲ್ಲಿ ಮಂಡಿಸಲಾಯಿತು: ವಿರೋಧ ಪಕ್ಷದ ನಾಯಕರು

3 ವರ್ಷಗಳಿಂದ ರಾಜ್ಯದಲ್ಲಿ ತೀವ್ರ ಚರ್ಚೆಗೆ ಒಳಗಾಗಿದ್ದ ವಿವಾದಿತ ಮೌಢ್ಯ ಪ್ರತಿಬಂಧಕ ವಿಧೇಯಕವನ್ನು ವಿಧಾನ ಮಂಡಲ ಅಧಿವೇಶನದಲ್ಲಿ ಸರ್ಕಾರದ ತರಾತುರಿಯಲ್ಲಿ ಮಂಡನೆ ಮಾಡಿ. ಅನುಮೋದನೆ ಪಡೆದುಕೊಂಡಿತು...

ಬೆಳಗಾವಿ: 3 ವರ್ಷಗಳಿಂದ ರಾಜ್ಯದಲ್ಲಿ ತೀವ್ರ ಚರ್ಚೆಗೆ ಒಳಗಾಗಿದ್ದ ವಿವಾದಿತ ಮೌಢ್ಯ ಪ್ರತಿಬಂಧಕ ವಿಧೇಯಕವನ್ನು ವಿಧಾನ ಮಂಡಲ ಅಧಿವೇಶನದಲ್ಲಿ ಸರ್ಕಾರದ ತರಾತುರಿಯಲ್ಲಿ ಮಂಡನೆ ಮಾಡಿ. ಅನುಮೋದನೆ ಪಡೆದುಕೊಂಡಿತು ಎಂದು ವಿರೋಧ ಪಕ್ಷಗಳ ನಾಯಕರು ಗುರುವಾರ ಹೇಳಿದ್ದಾರೆ. 
ಮೌಢ್ಯ ನಿಷೇಧ ವಿಧೇಯಕ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಶಾಸಕ ಬಿ.ಆರ್. ಪಾಟೀಲ್ ಅವರು, ಪ್ರಗತಿಪರ ಚಿಂತಕರ ಒತ್ತಡಗಳಿಂದಾಗಿ ಸರ್ಕಾರ ವಿಧೇಯಕವನ್ನು ತರಾತುರಿಯಲ್ಲಿ ಜಾರಿಗೆ ತಂದಿತು ಎಂದು ಹೇಳಿದ್ದಾರೆ. 
ಬಿಜೆಪಿ ಸದಸ್ಯ ವಿಶ್ವೇಶ್ವರ ಹೆಗ್ಡೆ ಕಾಗೇರಿಯವರು ಮಾತನಾಡಿ, ನಂಬಿಕೆ ಕುರಿತ ವ್ಯಾಖ್ಯಾನ ಸಂಕೀರ್ಣವಾದದ್ದು, ನಂಬಿಕೆಯೆಂಬುದು ಸಮಯದೊಂದಿದೆ ಬದಲಾಗುತ್ತದೆ. ಹೀಗಾಗಿ ವಿಧೇಯಕ ಕುರಿತು ತಜ್ಞರು ಹಾಗೂ ಸಂಬಂಧ ಪಟ್ಟಂತಹ ವಿಶ್ಲೇಷಕರೊಂದಿಗೆ ಚರ್ಚೆ ನಡೆಸುವ ಅಗತ್ಯವಿತ್ತು. ಆದರೆ, ಚರ್ಚೆ ನಡೆಸುವುದಕ್ಕೂ ಮುನ್ನವೇ ವಿಧೇಯಕ ಅನುಮೋದನೆ ಪಡೆದುಕೊಂಡಿತು. ಆದರೆ, ವಿಧೇಯಕದ ವಿರುದ್ಧ ನಾನಿಲ್ಲ ಎಂದು ಹೇಳಿದ್ದಾರೆ. 
ಜೆಡಿಎಸ್ ನಾಯಕ ವೈಎಸ್'ವಿ ದತ್ತಾ ಮಾತನಾಡಿ, ಇಂತಹ ವಿಧೇಯಕರವನ್ನು ಒಪ್ಪಿಕೊಳ್ಳುವುದಕ್ಕೂ ಮುನ್ನ ಜನರದಲ್ಲಿರುವ ಮೂಲಭೂತ ಚಿಂತನೆಗಳನ್ನು ಹೆಚ್ಚಿಸಬೇಕು. ಆದರೆ, ಸರ್ಕಾರ ಜಾರಿಗೆ ತಂದಿರುವ ವಿಧೇಯಕದಿಂದ ದೊಡ್ಡ ಕ್ರಾಂತಿಯೇನೂ ಆಗುವುದಿಲ್ಲ ಎಂದಿದ್ದಾರೆ. 
ಜೆಡಿಎಸ್ ನಾಯಕ ಹೆಚ್.ಡಿ. ರೇವಣ್ಣ ಅವರು ಮಾತನಾಡಿ, ಕಾಗೆ ಕುಳಿತ ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಅಧಿಕೃತ ಕಾರನ್ನು ಬದಲಾಯಿಸಿದ್ದರು. ಕಾರು ಬದಲಾಯಿಸಿದ ಬಳಿಕ ಕಾಕತಾಳೀಯವೆಂಬಂತೆ ತಾವು ಈ ಮೊದಲೇ ಕಾರನ್ನು ಬದಲಿಸಬೇಕು ಎಂದುಕೊಂಡಿದ್ದೆ ಎಂದು ಸ್ಪಷ್ಟನೆ ನೀಡಿದ್ದರು. ನನ್ನ ಕಾರಿನ ಮೇಲೆ 20 ಕಾಗೆಗಳು ಕುಳಿತುಕೊಳ್ಳಲಿ. ನಾನು ನನ್ನ ಕಾರನ್ನು ಬದಲಾಯಿಸುವುದಿಲ್ಲ ಎಂದು ತಿಳಿಸಿದ್ದಾರೆ. 
ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಮಾತನಾಡಿ, ಮಾಟಮಂತ್ರ ಮತ್ತು ವಾಮಾಚಾರಗಳಂತಹ ಮೂಢನಂಬಿಕೆಗಳಿಗೆ ಹಿಂದುಳಿದ ವರ್ಗದ ಜನರೇ ಹೆಚ್ಚು ಬಲಿಯಾಗುತ್ತಿದ್ದು, ವಿಧೇಯಕ ಕುರಿತಂತೆ ಅವರಿಗೆ ಸೂಕ್ತ ರೀತಿಯಲ್ಲಿ ಮಾಹಿತಿ ಒದಗಿಸಬೇಕಿದೆ ಎಂದು ಹೇಳಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

SCROLL FOR NEXT