ವಿಧಾನಸೌಧ 
ರಾಜಕೀಯ

ದಾಖಲೆ ಬರೆದ 14ನೇ ವಿಧಾನಸಭೆ ಅಧಿವೇಶನ: ಹಾಜರಾತಿಯಲ್ಲಿ ಕಾಂಗ್ರೆಸ್ ಶಾಸಕರೇ ಮುಂದು!

: 14ನೇ ಕರ್ನಾಟಕ ವಿಧಾನಸಭೆ ಅಧಿವೇಶನದಲ್ಲಿ ಹಲವು ದಾಖಲೆಗಳು ಸೇರ್ಪಡೆಯಾಗಿದೆ, ಕಾಂಗ್ರೆಸ್ ನ ಹೆಚ್ಚಿನ ಶಾಸಕರು ಅಧಿವೇಶನಕ್ಕೆ ಹಾಜರಾಗಿದ್ದಾರೆ ...

ಬೆಂಗಳೂರು: 14ನೇ ಕರ್ನಾಟಕ ವಿಧಾನಸಭೆ ಅಧಿವೇಶನದಲ್ಲಿ ಹಲವು ದಾಖಲೆಗಳು ಸೇರ್ಪಡೆಯಾಗಿದೆ, ಕಾಂಗ್ರೆಸ್ ನ ಹೆಚ್ಚಿನ ಶಾಸಕರು ಅಧಿವೇಶನಕ್ಕೆ ಹಾಜರಾಗಿದ್ದಾರೆ ಎಂಬುದು ಮಾಹಿತಿ ಹಕ್ಕಿನಡಿ ತಿಳಿದು ಬಂದಿದೆ. 
ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಪ್ರಕಾರ 14ನೇ ಅಧಿವೇಶನದಲ್ಲಿ ಜೆಡಿಎಸ್ ಶಾಸಕರು ಹೆಚ್ಚಿನ ಪ್ರಶ್ನೆಗಳನ್ನು ಕೇಳಿದ್ದಾರೆ, ಎಲ್ಲಾ ಕಾಂಗ್ರೆಸ್ ಶಾಸಕರುಗಳಿಗಿಂತ ಎನ್ .ಎ ಹ್ಯಾರಿಸ್ ಹೆಚ್ಚು ಸಕ್ರಿಯವಾಗಿದ್ದರು ಎಂಬುದನ್ನು ಅಂಕಿ ಅಂಶ ತಿಳಿಸಿದೆ., 224 ಶಾಸಕರುಗಳಲ್ಲಿ 208 ಶಾಸಕರು ಅಧಿವೇಶನದಲ್ಲಿ  ಹೆಚ್ಚು ಪ್ರಶ್ನೆ ಕೆಳಿದ್ದಾರೆ ಎಂದು ರಾಷ್ಟ್ರೀಯ ಚುನಾವಣಾ ಕಾವಲುಗಾರ ತ್ರಿಲೋಚನ ಶಾಸ್ತ್ರಿ ಹೇಳಿದ್ದಾರೆ.
ಕರ್ನಾಟಕ ವಿಧಾನಸಭೆ ಸಚಿವಲಾಯದ ಪ್ರಕಾರ, 14ನೇ ವಿಧಾನಸಭೆ ಅಧಿವೇಶನದಲ್ಲಿ  216 ದಿನಗಳ ಕಾಲ ಸದನ ನಡೆದಿದೆ, 2013 ಮತ್ತು 2017ರ ನಡುವೆ ನಡೆದ ದೀರ್ಘಕಾಲದ ಅಧಿವೇಶನ ಇದಾಗಿದೆ, ಒಟ್ಟು 15 ಅಧಿವೇಶನಗಳಲ್ಲಿ 8ನೇ ಅಧಿವೇಶನ ಜೂನ್ 29 2015 ಹಾಗೂ ನವೆಂಬರ್ 27 2015ರ ಅಧಿವೇಶನಗಳಲ್ಲಿ ಹೆಚ್ಚಿನ ದಿನ ಸದನ ನಡೆದಿದೆ, 11 ನೇ ಅಧಿವೇಶನದಲ್ಲಿ ಅತಿ ಕಡಿಮೆ ಸಂಖ್ಯೆಯಲ್ಲಿ ಸದನ ಜರುಗಿದೆ, 
ತುಮಕೂರು ನಗರದ ಕಾಂಗ್ರೆಸ್  ಶಾಸಕ, ಡಾ. ರಫೀಖ್ ಅಹ್ಮದ್, ಶಿವಮೊಗ್ಗ ಕ್ಷೇತ್ರದ ಶಾಸಕ ಕೆ,ಬಿ ಪ್ರಸನ್ನ ಕುಮಾರ್, ಸಿರಗುಪ್ಪ ಶಾಸಕ ಬಿ.ಎಂ ನಾಗರಾಜ್ ಅತಿ ಹೆಚ್ಚು ದಿನಗಳ ಕಾಲ ಸದನದಲ್ಲಿ ಪಾಲ್ಗೊಂಡು ಶೇ.95 ರಷ್ಟು ಹಾಜರಾತಿ ಪಡೆದಿದ್ದಾರೆ. 
14ನೇ ವಿಧಾನಸಭೆ ಅಧಿವೇಶನದಲ್ಲಿ 37 ಸಾವಿರ 110 ಪ್ರಶ್ನೆಗಳನ್ನು ಕೇಳಲಾಗಿದೆ, ಅದರಲ್ಲಿ ಜೆಡಿಎಸ್ ಶಾಸಕ ಗೋಪಾಲಯ್ಯ 885  ಮತ್ತು ಮಲ್ಲಿಕಾರ್ಜುನ ಖೂಬಾ 795 ಪ್ರಶ್ನೆಗಳನ್ನು ಕೇಳಿದ್ದಾರೆ.  ಈ ಅದಿವೇಶನದಲ್ಲಿ 216 ಬಿಲ್ ಗಳನ್ನು ಪ್ರಸ್ತಾಪಿಸಿದ್ದು ಅದರಲ್ಲಿ 209 ಮಸೂದೆಗಳು ಪಾಸಾಗಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT