ರಾಜಕೀಯ

ಕಾಂಗ್ರೆಸ್ ಗೆ ಮತ ನೀಡಿ: ಲಿಂಗಾಯತರಿಗೆ ಮಾತೆ ಮಹಾದೇವಿ ಕರೆ

Lingaraj Badiger
ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಈ ಬಾರಿ ಕಾಂಗ್ರೆಸ್ ಗೆ ಮತ ನೀಡುವಂತೆ ಬಸವಧರ್ಮ ಪೀಠಾಧ್ಯಕ್ಷೆ ಮಾತೆ ಮಹಾದೇವಿ ಅವರು ಶನಿವಾರ ಬಹಿರಂಗವಾಗಿಯೇ ಲಿಂಗಾಯತರಿಗೆ ಕರೆ ನೀಡಿದ್ದಾರೆ.
ಚಾಲುಕ್ಯ ವೃತ್ತದ ಬಳಿ ಇರುವ ಬಸವ ಮಂಟಪದಲ್ಲಿ ನಡೆದ ಜಾಗತಿಕ ಲಿಂಗಾಯತ ಮಹಾಸಭಾದಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದ್ದು, ಎಲ್ಲಾ ಲಿಂಗಾಯತರು ಕಾಂಗ್ರೆಸ್‌ ಮತ್ತು ಸಿದ್ದರಾಮಯ್ಯ ಅವರನ್ನು ಬೆಂಬಲಿಸಬೇಕು ಎಂದು ಮಾತೆ ಮಹಾದೇವಿ ಮನವಿ ಮಾಡಿದ್ದಾರೆ.
ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರ ಮೌನ ನಮಗೆ ಯಾವುದೇ ಬೆಂಬಲ ನೀಡಲಿಲ್ಲ. ಇನ್ನು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರು ಲಿಂಗಾಯತ ಧರ್ಮದ ಬಗ್ಗೆ ನೀಡಿರುವ ಹೇಳಿಕೆಗಳಲ್ಲಿ ಗೊಂದಲವಿದೆ ಎಂದು ಮಾತೆ ಮಹಾದೇವಿ ಹೇಳಿದ್ದಾರೆ. ಅಲ್ಲದ ಅಮಿತ್ ಶಾ ಅವರೇ ನೀವು ಜೈನ ಧರ್ಮದವರು , ಭಾರತದ ಐಕ್ಯತೆಗೆ ಭಂಗ ತಂದಿದ್ದೀರಾ? ದೇಶ ಒಡೆದಿದ್ದೀರಾ? ಬೌದ್ಧ ಧರ್ಮವು ಹಿಂದೂ ಧರ್ಮ ಮತ್ತು ದೇಶವನ್ನು ಒಡೆದಿದೆಯೇ? ಎಂದು ಪ್ರಶ್ನಿಸಿದ್ದು, ಲಿಂಗಾಯತ ಹಿಂದೂ ಧರ್ಮ ವಿರೋಧಿಯಲ್ಲ, ಅದಕ್ಕಿಂತ ಭಿನ್ನ ಎಂದು ಹೇಳಿದ್ದಾರೆ.
SCROLL FOR NEXT