ಭಾರತ್ ಚಿನ್ನದ ಗಣಿ (ಸಂಗ್ರಹ ಚಿತ್ರ) 
ರಾಜಕೀಯ

ದಶಕಗಳ ಕಾಲ ರಾಜ್ಯ ರಾಜಕೀಯ ನಿರ್ಣಾಯಕ ಕೇಂದ್ರವಾಗಿದ್ದ ಕೋಲಾರ ಈಗ ಮಂಕು!

ಕೆಜಿಎಫ್ ಮತ್ತು ಬಂಗಾರಪೇಟೆ ವಿಧಾನಸಭಾ ಕ್ಷೇತ್ರಗಳಿಗೆ ಮತ್ತು ಕೋಲಾರ ಲೋಕಸಭಾ ಕ್ಷೇತ್ರಗಳಲ್ಲಿ ...

ಕೋಲಾರ: ಕೆಜಿಎಫ್ ಮತ್ತು ಬಂಗಾರಪೇಟೆ ವಿಧಾನಸಭಾ ಕ್ಷೇತ್ರಗಳಿಗೆ ಮತ್ತು ಕೋಲಾರ ಲೋಕಸಭಾ ಕ್ಷೇತ್ರಗಳಲ್ಲಿ ಮೂರು ದಶಕಗಳ ಕಾಲ ಅಲ್ಲಿನ ರಾಜಕೀಯವನ್ನು ನಿರ್ಧರಿಸಿದ್ದ ಕೋಲಾರ ಚಿನ್ನದ ಗಣಿ(ಕೆಜಿಎಫ್) ಇಂದು ಕ್ಷೀಣಿಸಿದೆ. ಇಲ್ಲಿನ ಮಾಜಿ ನೌಕರರಲ್ಲಿ ಅಸಮಾಧಾನ, ನೋವಿನ ಹೊಗೆಯಾಡುತ್ತಿದೆ. ಭಾರತ್ ಚಿನ್ನದ ಗಣಿ ಕಂಪೆನಿ(ಬಿಜಿಎಂಎಲ್) ಎಂದು ಮರುನಾಮಕರಣ ಮಾಡಲಾಗಿರುವ ಕೆಜಿಎಫ್ ಈ ಬಾರಿಯ ಚುನಾವಣೆ ಫಲಿತಾಂಶದಲ್ಲಿ ಪ್ರಮುಖ ಪಾತ್ರ ವಹಿಸಲಿದೆ.

ಕೋಲಾರ ಕಾಂಗ್ರೆಸ್ ನ ಹಿರಿಯ ನಾಯಕರಾದ ಸಂಸದ ಕೆ.ಎಚ್.ಮುನಿಯಪ್ಪ, ಭಕ್ತವತ್ಸಲಂ, ರಾಜೇಂದ್ರ ಮೊದಲಾದವರಿಗೆ ರಾಜಕೀಯದಲ್ಲಿ ಭದ್ರ ನೆಲೆ ನೀಡಿದ ಕ್ಷೇತ್ರವಿದು. ಆದರೆ ಇತ್ತೀಚಿಗೆ ಇವರ ಪ್ರಾಬಲ್ಯ, ಪ್ರಭಾವಗಳೆಲ್ಲ ಕುಗ್ಗುತ್ತಿವೆ ಎನ್ನಬಹುದು. ಇವರ ಭರವಸೆಗಳಿಂದ ಸುಸ್ತಾಗಿ ಹೋಗಿದ್ದೇವೆ ಎನ್ನುತ್ತಾರೆ ಮುನಿಸ್ವಾಮಿ ಮತ್ತು ಶಣ್ಮುಗಂ ಎಂಬ ಭಾರತ್ ಚಿನ್ನದ ಗಣಿ ಲಿಮಿಟೆಡ್ ನ ಮಾಜಿ ಉದ್ಯೋಗಿಗಳು. ಇದು ಚುನಾವಣೆಯ ವಿಷಯವಾಗಿಲ್ಲದಿರಬಹುದು. ಆದರೆ ಚಿನ್ನದ ಗಣಿ ಮುಚ್ಚಿರುವುದರಿಂದ ಅಲ್ಲಿನ ಉದ್ಯೋಗಿಗಳಿಗೆ ಪುವರ್ವಸತಿ ಕಲ್ಪಿಸದಿರುವುದು ಮತ್ತು ಆ ಪ್ರದೇಶದಲ್ಲಿ ಆಗಿರುವ ಕುಂಠಿತ ಅಭಿವೃದ್ಧಿ ಜನರಿಗೆ ಅಸಮಾಧಾನ ತಂದಿದೆ.

ಬಿಜಿಎಂಎಲ್ ನಲ್ಲಿ ಕೆಲಸ ಮಾಡುತ್ತಿದ್ದ ಪ್ರಸ್ತುತ ಮರಿಕುಪ್ಪಮ್ ರೈಲ್ವೆ ನಿಲ್ದಾಣದಲ್ಲಿ ಚಹಾ ಮಾರುತ್ತಿರುವ ಮುನಿಸ್ವಾಮಿಗೆ ಇನ್ನೂ ಬಾಕಿ ವೇತನ ಬಂದಿಲ್ಲ. 2011ರಿಂದ ಅದಕ್ಕಾಗಿ ಕಾಯುತ್ತಿದ್ದಾರೆ. ಚಿನ್ನದ ಗಣಿ ಉದ್ಯಮ ಉತ್ತುಂಗದಲ್ಲಿದ್ದಾಗ ಸುಮಾರು 30,000 ಮಂದಿ ನೌಕರರಿದ್ದರು. ಅದು ಮುಚ್ಚುವ ಹೊತ್ತಿಗೆ ನೌಕರರ ಸಂಖ್ಯೆ 3,800 ನೌಕರರಾದರು. ಕೆಜಿಎಫ್ ಮತ್ತು ಬಂಗಾರಪೇಟೆಯ ಆರ್ಥಿಕತೆ ಸಂಪೂರ್ಣವಾಗಿ ಬಿಜಿಎಂಎಲ್ ನ್ನು ನಂಬಿಕೊಂಡಿತ್ತು ಎಂದು ನೆನಪಿಸಿಕೊಳ್ಳುತ್ತಾರೆ ಮುನಿಸ್ವಾಮಿ.

ಬಿಜಿಎಂಎಲ್ ಟೌನ್ ಷಿಪ್ ನಲ್ಲಿ ವಾಸಿಸುತ್ತಿರುವ ಸುಮಾರು 12,000 ಕುಟುಂಬಗಳಿಗೆ ಸರ್ಕಾರದ ಕೊಡುಗೆಯಾಗಿ ಟೈಟಲ್ ಡೀಡ್ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ ಅದನ್ನು ಇದುವರೆಗೆ ಸರ್ಕಾರ ಈಡೇರಿಸಿಲ್ಲ. ಇದು ಜನರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ ಎನ್ನುತ್ತಾರೆ ಬಿಜಿಎಂಎಲ್ ನ ಮಾಜಿ ಎಂಜಿನಿಯರ್ ದಾಸ್ ಚಿನ್ನಸವರಿ. ಇವರು ಈಗ ಕೆಜಿಎಫ್ ನಾಗರಿಕ ರಕ್ಷಣಾ ವೇದಿಕೆಯ ಸಂಚಾಲಕರಾಗಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಭಾರತದ ಮೇಲೆ ಸುಂಕಾಸ್ತ್ರ ಜಾರಿ: ಮತ್ತೆ ಇಂಡೋ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ ಎಂದು ಪುನರುಚ್ಛರಿಸಿದ ಡೊನಾಲ್ಡ್ ಟ್ರಂಪ್

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 30 ಮಂದಿ ಸಾವು

ಬೂಕರ್ ಪ್ರಶಸ್ತಿ ಮಹತ್ವ ತಿಳಿದಿದ್ದರೆ ನನ್ನನ್ನು ಟೀಕಿಸುತ್ತಿರಲಿಲ್ಲ, ಸಾಹಿತ್ಯ ಸಮ್ಮೇಳನದ ವಿಡಿಯೋ ತಿರುಚಲಾಗಿದೆ: ಬಾನು ಮುಷ್ತಾಕ್

SCROLL FOR NEXT