ಸಾಂದರ್ಭಿಕ ಚಿತ್ರ 
ರಾಜಕೀಯ

ಸಾಗರ ಕ್ಷೇತ್ರ: ಅಡಿಕೆ ಬೆಳೆಗಾರರದ್ದೇ ಇಲ್ಲಿನ ಪ್ರಮುಖ ಸಮಸ್ಯೆ

ಸಾಗರ ತಾಲೂಕಿನಲ್ಲಿ ಹಲವು ಏರಿತಗಳ ನಡುವೆ ಕೃಷಿಕ ಸಮುದಾಯ ಅಡಿಕೆ ಬೆಳೆಯನ್ನು ಪ್ರಾಚೀನ ವಂಶಾವಳಿಯಾಗಿ ಎಲ್ಲಾ ಕಾಲದಲ್ಲಿಯೂ ಮುಂದುವರೆಸಿದ್ದಾರೆ.

ಸಾಗರ: ಸಾಗರ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ  ಹಲವು ಏರಿತಗಳ ನಡುವೆ ಕೃಷಿಕ ಸಮುದಾಯ ಅಡಿಕೆ ಬೆಳೆಯನ್ನು   ಪ್ರಾಚೀನ  ವಂಶಾವಳಿಯಾಗಿ  ಎಲ್ಲಾ ಕಾಲದಲ್ಲಿಯೂ ಮುಂದುವರೆಸಿದ್ದಾರೆ.

ನಿರಂತರ ವಿದ್ಯುತ್ ಬಿಕ್ಕಟ್ಟು, ಹಳದಿ ಎಲೆ ಕಾಯಿಲೆ,ಮತ್ತು ಒಣಗಿದ ಕೊಳವೆ ಬಾವಿಗಳ ಮಧ್ಯೆಯೂ   ಕೃಷಿ ಸಮುದಾಯವು  ಅಡಿಕೆ ಬೆಳೆಯನ್ನು ಹೆಚ್ಚಾಗಿ ಬೆಳೆಯುತ್ತಿದೆ.

ಸಣ್ಣ ಮತ್ತು ಅತಿದೊಡ್ಡ ರೈತರು ಸಾಗರದಲ್ಲಿನ ಅಡಿಕೆ ಬೆಳೆಗಾರರ ಒಂದು ದೊಡ್ಡ ಭಾಗವನ್ನು ರೂಪಿಸುತ್ತಾರೆ ಮತ್ತು ಅವರು ಧಾರ್ಮಿಕವಾಗಿ ಅಂತರ-ಬೆಳೆ ವಿಧಾನವನ್ನು ಅನುಸರಿಸುತ್ತಾರೆ. 1 ರಿಂದ 4 ಎಕರೆಗಳವರೆಗೆ ಜಮೀನು  ಹೊಂದಿದವರು, ತಮ್ಮ ತೋಟಗಳಲ್ಲಿ ಬಾಳೆಹಣ್ಣು, ಮೆಣಸು ಮತ್ತು ಇತರ ಮಸಾಲೆಗಳನ್ನು ಬೆಳೆಯುತ್ತಾರೆ.

ಆದಾಗ್ಯೂ, ನೀರಿನ ಕೊರತೆಯಿಂದಾಗಿ ಎಕರೆಗೆ ಇಳುವರಿ 10 ರಿಂದ 6 ಕ್ವಿಂಟಾಲ್ ಗೆ  ಇಳಿದಿದೆ.  ಶರಾವತಿ ನದಿ, ಜೋಗ್ ಜಲಪಾತ ಮತ್ತು ಲಿಂಗನಮಕ್ಕಿ ಅಣೆಕಟ್ಟುಗಳಿಗೆ ಆಶ್ರಯವಾಗಿರುವ ಪ್ರದೇಶದಲ್ಲಿ  ವಿದ್ಯುತ್ ಸರಬರಾಜು ಮತ್ತು ನೀರಿನ ತೀವ್ರ ಕೊರತೆ ಇರುವುದಾಗಿ ಮಾಜಿ ಗ್ರಾಮ ಪಂಚಾಯತ್ ಸದಸ್ಯ ಇಂದಿರಾಮ್ಮ ಹೇಳುತ್ತಾರೆ.

 ಅಂಬ್ಲಿಗೋಲ್ಲ ಜಲಾಶಯವನ್ನು ಹೊಂದಿದ್ದೇವೆ ... ಆದರೆ, ನೀರು ಶಿಖರಿಪುರಕ್ಕೆ ಹರಿಯುತ್ತದೆ ಮತ್ತು ಗೌತಂಪುರಾಗೆ ಅಲ್ಲ. ಹೀಗಾಗಿ  ನಿಯಮಿತ ಬೆಳೆಗಳಿಗೆ ಮಳೆಯನ್ನೆ ನೆಚ್ಚಿಕೊಂಡಿರುವುದಾಗಿ  ಮೈಕ್ರೊ-ಎಂಟರ್ಪ್ರೈಸ್ ಮಾಲೀಕ ಶಿಲ್ಪಾ ಹೇಳುತ್ತಾರೆ, "

ಸೌಲಭ್ಯಗಳ ಕೊರತೆ
ಗೌತಂಪುರಾ ಗ್ರಾಮವು ಸುಮಾರು 1,500 ಜನರನ್ನು ಹೊಂದಿದೆ ಈ ಹಳ್ಳಿಗೆ ಇರುವ  ಏಕೈಕ ರಸ್ತೆ ಸಹ ಭೀಕರ ಸ್ಥಿತಿಯಲ್ಲಿತ್ತು. ಆದಾಗ್ಯೂ, ಶಿಕರಿಪುರದಿಂದ ಆನಂದ್ ಪುರಕ್ಕೆ ಬಿ.ಎಸ್. ಯಡಿಯೂರಪ್ಪರಿಂದ ಅನುಮೋದನೆ ನೀಡಲ್ಪಟ್ಟ 25 ಕಿಮೀ ಉದ್ದದ ಕೆಲಸ ಪ್ರಾರಂಭವಾಯಿತು ಮತ್ತು ಇತ್ತೀಚೆಗೆ ಇದು ವೇಗವನ್ನು ಹೆಚ್ಚಿಸಿದೆ. ಈ ಬಗ್ಗೆ ಜನಪ್ರತಿನಿಧಿಗಳು ನಿರ್ಲಕ್ಷ್ಯ ವಹಿಸಿದ್ದಾರೆ.

ಸಾಗರದಿಂದ  ಐದು ಬಾರಿ ಶಾಸಕರಾಗಿದ್ದ 87 ರ ಹರೆಯದ ಕಾಗೊಡು ತಿಮ್ಮಪ್ಪ ಮತ್ತೆ ಮತ್ತೊಮ್ಮೆ ಸ್ಪರ್ಧಿಸುತ್ತಿದ್ದಾರೆ ಮತ್ತು ಹರತಾಳು  ಹಾಲಪ್ಪ ಬಿಜೆಪಿಯಿಂದು  ಸ್ಪರ್ಧಿಸುತ್ತಿದ್ದಾರೆ. ಬೇಲೂರು ಗೋಪಾಲ್ಕೃಷ್ಣ ಬಿಜೆಪಿಯನ್ನು ತೊರೆದು ತನ್ನ ಚಿಕ್ಕಪ್ಪ ಕಾಗೊಡು ತಿಮ್ಮಪ್ಪ ಅವರೊಂದಿಗೆ ಕೈ ಜೋಡಿಸಿದ್ದು, ವಯಸ್ಸಾದ ರಾಜಕಾರಣಿಗಳ ವಿರುದ್ಧ ಹಾಲಪ್ಪ  ಕಠಿಣ ಹೋರಾಟ ನಡೆಸಿದ್ದಾರೆ.

ಒಳ್ಳೆಯ ಬೆಲೆ
ಈ ಪ್ರದೇಶದ ಆರ್ಥಿಕತೆಯು ಮುಖ್ಯವಾಗಿ ಅಡಿಕೆಯಿಂದ ನಡೆಸಲ್ಪಡುತ್ತಿದೆ. ನವೆಂಬರ್ ನಿಂದ  ಮಾರ್ಚ್ ವರೆಗೆ, ಬಿಳಿ ಅಡಿಕೆಯನ್ನು   ಕೊಯ್ಲು ಮಾಡಲಾಗುತ್ತದೆ ಮತ್ತು ಮಾರುಕಟ್ಟೆಗೆ ಹೊಸ ಅಡಿಕೆ ಆಗಿ ಬಿಡುಗಡೆ ಮಾಡುತ್ತದೆ ಮತ್ತು ಅದು ಪ್ರಸ್ತುತವಾಗಿ ಉತ್ತಮ ಬೆಲೆ ಪಡೆಯುತ್ತಿದೆ. ಕೇಂದ್ರದಿಂದ ಕನಿಷ್ಠ ಆಮದು ಬೆಲೆಯಲ್ಲಿ ಹೆಚ್ಚಳವು ಬಹಳಷ್ಟು ರೈತರಿಗೆ ಲಾಭದಾಯಕವಾಗಿದೆ ಎಂಬ ಅಭಿಪ್ರಾಯಗಳು ಕೇಳಿಬಂದಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

ಶಿಬು ಸೊರೇನ್ 'ರಾಜ್ಯದ ಪಿತಾಮಹ' ಎಂದು ಘೋಷಿಸುವಂತೆ ಜೆಎಂಎಂ ಆಗ್ರಹ

SCROLL FOR NEXT