ರಾಜಕೀಯ

ಕಾಂಗ್ರೆಸ್ ಪಕ್ಷದಿಂದ ಮಾತ್ರ ಕರ್ನಾಟಕಕ್ಕೆ ಹೆಚ್ಚಿನ ಘನತೆ -ಮೀರಾಕುಮಾರ್

Nagaraja AB

ಬೆಂಗಳೂರು : ಕಾಂಗ್ರೆಸ್ ಪಕ್ಷದ ಆಡಳಿತದಿಂದ  ಮಾತ್ರ ಕರ್ನಾಟಕಕ್ಕೆ ಹೆಚ್ಚಿನ ಘನತೆ ಬರಲು ಸಾಧ್ಯ ಎಂದು ಲೋಕಸಭೆ ಮಾಜಿ ಸ್ಪೀಕರ್ ಮೀರಾಕುಮಾರ್ ಅಭಿಪ್ರಾಯಪಟ್ಟಿದ್ದಾರೆ.

 ಕೆಪಿಸಿಸಿ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು,
ಬಿಜೆಪಿ ಸರ್ಕಾರ ಆಡಳಿತವಿದ್ದಾಗ ಮುಖ್ಯಮಂತ್ರಿ ಮ್ಯೂಸಿಕಲ್ ಚೇರ್ ನಂತ ಮುಖ್ಯಮಂತ್ರಿಯನ್ನು ಬದಲಿಸಲಾಗುತಿತ್ತು. ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದ ಅಂತಹುದೇ ಸ್ಥಿತಿ ಎದುರಾಗಬಹುದು . ಆದ್ದರಿಂದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವಂತೆ ಮನವಿ ಮಾಡಿಕೊಂಡರು.

ಬಿಜೆಪಿ ಮೌನವಾಗಿದ್ದುಕೊಂಡೆ  ದಲಿತರ ಮೇಲಿನ ದೌರ್ಜನ್ಯ  ತಡೆ  ಕಾಯ್ದೆಯನ್ನು ದುರ್ಬಲಗೊಳಿಸಿತು. ದೌರ್ಜನ್ಯ ತಡೆಗಾಗಿ ಇದ್ದ ಈ ಕಾಯ್ದೆಯನ್ನೇ  ದುರ್ಬಲಗೊಳಿಸುವ ಮೂಲಕ ಈ ಜನರ ಹಿತಸಕ್ತಿ ರಕ್ಷಣೆಯಲ್ಲಿ ಬಿಜೆಪಿ ಎಂತಹ ಧೋರಣೆ ಹೊಂದಿದೆ ಎಂಬುದನ್ನು ಅರಿಯಲು ಸಾಧ್ಯವಾಗಿದೆ ಎಂದರು.




SCROLL FOR NEXT