ಬೆಂಗಳೂರು: ರಾಜರಾಜೇಶ್ವರಿನಗರ ಚುನಾವಣೆ ಫಲಿತಾಂಶ ಹೊರಬಂದಿದ್ದು ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ಅವರು 1 ಲಕ್ಷಕ್ಕೂ ಹೆಚ್ಚು ಮತಗಳನ್ನು ಪಡೆದು ಭರ್ಜರಿ ಗೆಲುವು ಸಾಧಿಸಿದ್ದಾರೆ.
ಬಿಜೆಪಿ ಅಭ್ಯರ್ಥಿ ತುಳಸಿರಾಜು ಗೌಡ ಅವರು 70 ಸಾವಿರ ಹಾಗೂ ಜೆಡಿಎಸ್ ಅಭ್ಯರ್ಥಿ ರಾಮಚಂದ್ರ ಅವರು 54 ಸಾವಿರ ಮತಗಳನ್ನು ಪಡೆದಿದ್ದಾರೆ. ಈ ಮಧ್ಯೆ ಪಕ್ಷೇತ್ತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ನಟ, ನಿರ್ದೇಶಕ ಹುಚ್ಚಾ ವೆಂಕಟ್ ಕುತೂಹಲ ಕೆರಳಿಸಿದ್ದರು.
ಇದೀಗ ಬಂದ ಫಲಿತಾಂಶದ ಪ್ರಕಾರ ಹುಚ್ಚಾ ವೆಂಕಟ್ 600 ರಿಂದ 700 ಮತಗಳನ್ನು ಮಾತ್ರ ಪಡೆದಿದ್ದಾರೆ ಎನ್ನಲಾಗಿದೆ. ಇನ್ನು ಈ ಬಾರಿ ರಾಜರಾಜೇಶ್ವರಿನಗರದಲ್ಲಿ ನೋಟಾ ಮತವೇ 2000 ಇದೆ. ನೋಟಾಗಿಂತ ಕಡಿಮೆ ಮತಗಳನ್ನು ಹುಚ್ಚಾ ವೆಂಕಟ್ ಪಡೆದು ಠೇವಣಿಯನ್ನು ಕಳೆದುಕೊಂಡಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos