ಅಂಬರೀಶ್ 
ರಾಜಕೀಯ

ಸೋನಿಯಾಗೆ ಅಂಬರೀಶ್ ವಿಧಿಸಿದ್ದ ಷರತ್ತು, ಎಸ್ಎಂ ಕೃಷ್ಣ ಸಿಎಂ ಆಗಿದ್ದು, ಏನಿದು ರೋಚಕ ಸಂಗತಿ!

ರೆಬೆಲ್ ಸ್ಟಾರ್ ಅಂಬರೀಶ್ ಅವರು ತಾವು ಕಾಂಗ್ರೆಸ್ ಗೆ ಸೇರಬೇಕಾದರೆ ನಮ್ಮ ಜಿಲ್ಲೆಯವರೊಬ್ಬರನ್ನು ಮುಖ್ಯಮಂತ್ರಿ ಮಾಡಬೇಕು ಎಂದು ಸೋನಿಯಾಗಾಂಧಿ ಅವರಿಗೆ ಷರತ್ತು ವಿಧಿಸಿದ್ದರು...

ಮಂಡ್ಯ: ರೆಬೆಲ್ ಸ್ಟಾರ್ ಅಂಬರೀಶ್ ಅವರು ತಾವು ಕಾಂಗ್ರೆಸ್ ಗೆ ಸೇರಬೇಕಾದರೆ ನಮ್ಮ ಜಿಲ್ಲೆಯವರೊಬ್ಬರನ್ನು ಮುಖ್ಯಮಂತ್ರಿ ಮಾಡಬೇಕು ಎಂದು ಕಾಂಗ್ರೆಸ್ ಅಧಿನಾಯಕಿ ಸೋನಿಯಾಗಾಂಧಿ ಅವರಿಗೆ ಷರತ್ತು ವಿಧಿಸಿದ್ದರು.
ಹೌದು ಅಂಬರೀಶ್ ಅವರು ಹೀಗೊಂದು ಷರತ್ತನ್ನು ಸೋನಿಯಾ ಗಾಂಧಿಗೆ ಹಾಕಿದ್ದರು. ಅದಕ್ಕೆ ಸೋನಿಯಾ ಸಹ ಒಪ್ಪಿಕೊಂಡಿದ್ದರು ಎಂದು ಸಿವಿ ಶೈಲಜಾ ಸಂಪಾದಕತ್ವದಲ್ಲಿ ಹೊರ ಬಂದಿರುವ ಅಂಬರೀಶ್ ಅಭಿನಂದನಾ ಗ್ರಂಥದ ಕನ್ನಡ ಭಾಗದಲ್ಲಿ ಸ್ವತಃ ಅಂಬರೀಶ್ ಅವರೇ ನೀಡಿರುವ ಹೇಳಿಕೆಯನ್ನು ದಾಖಲಿಸಿದ್ದಾರೆ. 
1999ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಎಂಎಸ್ ಕೃಷ್ಣ ಪಾಂಚಜನ್ಯ ಮೊಳಗಿಸಲು ರೆಡಿಯಾಗಿದ್ದರು. ಈ ಸಮಯದಲ್ಲಿ ಜನತಾದಳದಲ್ಲಿ ಎಸ್ ಡಿ ಜಯರಾಂ ಗರಡಿಯಲ್ಲಿ ಪ್ರಬಲ ರಾಜಕೀಯ ನಾಯಕರಾಗಿ ಬೆಳೆಯುತ್ತಿದ್ದ ಅಂಬರೀಶ್ ಅವರನ್ನು ಖುದ್ದು ಕೃಷ್ಣ ಅವರೇ ಕಾಂಗ್ರೆಸ್ ಪಕ್ಷಕ್ಕೆ ಆಹ್ವಾನಿಸಿದ್ದರು. 
ಕೃಷ್ಣ ಅವರ ಆಹ್ವಾನಕ್ಕೆ ಒಪ್ಪಿದ ಅಂಬರೀಶ್ ಅವರು ಸೋನಿಯಾಗಾಂಧಿ ಮುಂದೆ ಒಂದು ಷರತ್ತು ಇಟ್ಟಿದ್ದರು. ಅದು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದರೆ ಮಂಡ್ಯ ಜಿಲ್ಲೆಯವರನ್ನು ಮುಖ್ಯಮಂತ್ರಿ ಮಾಡಬೇಕು. ಇದಕ್ಕೆ ಒಪ್ಪಿದರೆ ನಾನು ಕಾಂಗ್ರೆಸ್ ಸೇರಲು ಸಿದ್ಧ ಎಂದು ಷರತ್ತು ಹಾಕಿದ್ದರು. ಅದಕ್ಕೆ ಸೋನಿಯಾ ಕೂಡ ಒಪ್ಪಿದ್ದರು. 
ಈ ಚುನಾವಣೆಯಲ್ಲಿ ಕಾಂಗ್ರೆಸ್ ಸ್ವತಂತ್ರವಾಗಿ ಅಧಿಕಾರಕ್ಕೆ ಬಂತು. ಅಂಬರೀಶ್ ಗೆ ಕೊಟ್ಟ ಮಾತಿನಂತೆ ಸೋನಿಯಾಗಾಂಧಿ ಎಸ್ಎಂ ಕೃಷ್ಣ ಅವರನ್ನು ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಿದರು ಎನ್ನಲಾಗಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ, Indian Army ಹೆಲಿಕಾಪ್ಟರ್ ರಣರೋಚಕ ಕಾರ್ಯಾಚರಣೆ! video

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

Shocking: ಆಸಿಸ್ ಕ್ರಿಕೆಟ್ ದಿಗ್ಗಜ Michael Clarkeಗೆ 'ಚರ್ಮದ ಕ್ಯಾನ್ಸರ್'!

'ಮದುವೆಗೆ ಮುನ್ನ ಪೋಷಕರ ಒಪ್ಪಿಗೆ ಕಡ್ಡಾಯಗೊಳಿಸಿ': ಹರಿಯಾಣ BJP ಶಾಸಕ

SCROLL FOR NEXT