ರಾಜಕೀಯ

ಮುಖ್ಯಮಂತ್ರಿ ಹುದ್ದೆ ಅಲಂಕರಿಸದಿದ್ದಕ್ಕೆ ನನಗೆ ವಿಷಾದವಿಲ್ಲ: ವಿ. ಶ್ರೀನಿವಾಸ್ ಪ್ರಸಾದ್

Shilpa D
ಮೈಸೂರು: ನಾನು ಮೌಲ್ಯಗಳೊಂದಿಗೆ ಬದುಕುಲು ಪ್ರಯತ್ನಿಸಿದ್ದೇನೆ, ನಾನು ಎಂದಿಗೂ ಭ್ರಷ್ಟಾಚಾರಿಯಾಗಿಲ್ಲ ಎಂದು ಮಾಜಿ ಸಚಿವ ಹಾಗೂ ಬಿಜೆಪಿ ಸಂಸದ ವಿ. ಶ್ರೀನಿವಾಸ್ ಪ್ರಸಾದ್ ಹೇಳಿದ್ದಾರೆ.
ಮೈಸೂರಿನ ರಾಣಿ ಬಹದ್ದೂರ್ ಹಾಲ್ ನಡೆದ ತಮ್ಮ 72ನೇ ವರ್ಷದ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀನಿವಾಸ್ ಪ್ರಸಾದ್, ರಾಜಕಾರಣವೆಂದರೇ ಹೊಂದಾಣಿಕೆಗಳ ಸರದಿ ಎಂದು ಹೇಳುತ್ತಾರೆ, ಆದರೆ ನನಗೆ ರಾಜಕೀಯ ಎಂದರೇ ಸಾಮಾಜಿಕ ಬದ್ಧತೆ, ಧ್ವನಿ ಇಲ್ಲದವರಿಗೆ ಧ್ವನಿಯಾಗುವುದು ಎಂದು ಹೇಳಿದ್ದಾರೆ.
ನಾನು ಮುಖ್ಯಮಂತ್ರಿಯಾಗಲಿಲ್ಲ ಎಂದು ನನಗೆ ಯಾವುದೇ ಬೇಸರವಿಲ್ಲ, ಮಾಜಿ ಪ್ರಧಾನಿ ಪಿವಿ ನರಸಿಂಹರಾವ್ ಅವರು ನನ್ನ ಕೇಂದ್ರ ಸಂಪುಟಕ್ಕೆ ಸೇರಿಸಿಕೊಳ್ಳಲಿಲ್ಲ, ಬದಲಾಗಿ 7 ಬಾರಿ ಸಂಸದರಾಗಿದ್ದ ಎಂಪಿ ಶಂಕರಾನಂದ ಅವರನ್ನು ದಲಿತ ಕೋಟಾದಲ್ಲಿ  ಮಂತ್ರಿ ಮಾಡಿದರು ಎಂದು ತಿಳಿಸಿದ್ದಾರೆ. 
SCROLL FOR NEXT