ರಾಜಕೀಯ

ಸುಮಲತಾ ಅಂಬರೀಶ್ ಮಂಡ್ಯ ಗೌಡತಿ ಅಲ್ಲ: ಜೆಡಿಎಸ್ ಎಂಎಲ್‌ಸಿ ಶ್ರೀಕಂಠೇಗೌಡ

Vishwanath S
ಮಂಡ್ಯ: ನಟಿ ಸುಮಲತಾ ಅಂಬರೀಶ್ ಅವರು ಗೌಡತಿ ಅಲ್ಲ. ಸುಮಲತಾ ಗೆದ್ದ ಮೇಲೆ ಅವರನ್ನು ಎಲ್ಲಿ ಹುಡುಕುತ್ತೀರಿ? ಎಂದು ವಿಧಾನಪರಿಷತ್ ಸದಸ್ಯ ಕೆಟಿ ಶ್ರೀಕಂಠೇಗೌಡ ಹೇಳಿದ್ದಾರೆ. 
ಅಂಬರೀಶ್ ಪತ್ನಿ ಸುಮಲತಾ ಅವರಿಗೆ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ನಿಂದ ಟಿಕೆಟ್ ನೀಡಲಾಗುತ್ತೆ ಎಂಬ ಸುದ್ದಿ ಹರಿದಾಡತೊಡಗಿದ್ದರೆ, ಮತ್ತೊಂಡೆದೆ ಜೆಡಿಎಸ್ ಕೂಡ ಮನವೊಲಿಸಲು ಸರ್ಕಸ್ ಮಾಡುತ್ತಿದೆ. ಏತನ್ಮಧ್ಯೆ ಜೆಡಿಎಸ್ ಮುಖಂಡ ಎಂಎಲ್ಸಿ ಸುಮಲತಾ ಅವರು ವಿರುದ್ಧ ಕಟುವಾಗಿ ಟೀಕಿಸಿದ್ದಾರೆ. 
ರಾಜಕಾರಣ ಅಂದರೆ ಜನಸೇವೆ  ಮಾಡಬೇಕು ಅಂಬರೀಶ್ ಯಾಕೆ ಮಂಡ್ಯದಿಂದ ಸ್ಪರ್ಧೆ ಮಾಡಲಿಲ್ಲ ಎಂದು ಶ್ರೀಕಂಠೇಗೌಡ ಪ್ರಶ್ನಿಸಿದ್ದಾರೆ. ಅಲ್ಲದೆ ಸುಮಲತಾ ಅವರು ಮೂಲತಃ ಆಂಧ್ರಪ್ರದೇಶದವರು ಅವರು ಗೆದ್ದ ಮೇಲೆ ಎಲ್ಲಿ ಹುಡುಕುತ್ತೀರಿ ಎಂದು ಪ್ರಶ್ನಿಸಿದ್ದಾರೆ.
SCROLL FOR NEXT