ಸಿ.ಟಿ ರವಿ 
ರಾಜಕೀಯ

ಜೆಡಿಎಸ್ ಶಾಸಕರನ್ನು ಕಾಂಗ್ರೆಸ್ ಗೆ ಸೇರಿಸಿಕೊಂಡಿದ್ದು ಮನೆ ಮುರುಕತನ ಅಲ್ಲವೇ ಸಿದ್ದರಾಮಯ್ಯನವರೇ: ರವಿ

ಹೊಟ್ಟೆಯೊಳಗೆ ವಿಷ ಇಟ್ಟುಕೊಂಡು ಅಧಿಕಾರ ನಡೆಸಿದ ಹೀಗೆ ಆಗುತ್ತೆ. ಸರ್ಕಾರ ಉರುಳಿಸುವ ಕೆಲಸ ನಮ್ಮದಲ್ಲ...

ಬೆಂಗಳೂರು:  ಹೊಟ್ಟೆಯೊಳಗೆ ವಿಷ ಇಟ್ಟುಕೊಂಡು ಅಧಿಕಾರ ನಡೆಸಿದರೆ ಹೀಗೆ ಆಗುತ್ತೆ. ಸರ್ಕಾರ ಉರುಳಿಸುವ ಕೆಲಸ ನಮ್ಮದಲ್ಲ. ನಾವು ಕೂಡ  ಸರ್ಕಾರ ಬೀಳಲಿ ಎಂದೇ ಅಂದುಕೊಂಡಿದ್ದೇವೆ. ಆದರೆ, ಅವರ ಶಾಸಕರು ಪಕ್ಷ ಬಿಟ್ಟು ಹೋದರೆ ನಮ್ಮನು ಏಕೆ ದೂರುವುದು ಎಂದು ಶಾಸಕ ಸಿ.ಟಿ ರವಿ ಪ್ರಶ್ನಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಟಿ ರವಿ,  ಸರ್ಕಾರ ರಚಿಸವು ಅವಕಾಶ ಒದಗಿ ಬಂದರೇ ಖಂಡಿತಾ ರಚಿಸುತ್ತೇವೆ,  ಬಿಜೆಪಿ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಎಂದು ಕಾಂಗ್ರೆಸ್ ಹೇಳುತ್ತಿದೆ, ಕಾಂಗ್ರೆಸ್ ನ ಬಹಳಷ್ಟು ಶಾಸಕರು ಕೂಡ ನಮ್ಮ ಸಂಪರ್ಕದಲ್ಲಿದ್ದಾರೆ, ಆಪರೇಷನ್ ಕಮಲ ಮುಂದುವರೆಯುತ್ತದೆ ಎಂದು ಹೇಳಿದ್ದಾರೆ.
ಅಸಮಾಧಾನ ಹೊಂದಿರುವ ಶಾಸಕರ ವಿರುದ್ಧ ಕ್ರಮ ಕೈಗೊಳ್ಳಿ, ನೀವು ಮಾಡಿದ್ರೆ ಅದು ರಾಜಕಾರಣ, ನಾವು ಮಾಡಿದ್ರೆ ಅದು ಮನೆ ಮುರುಕನನಾ ಎಂದು ರವಿ ಪ್ರಶ್ನಿಸಿದ್ದಾರೆ,  2005 ರಲ್ಲಿ  ಸಿದ್ದರಾಮಯ್ಯ ಕಾಂಗ್ರೆಸ್ ಸೇರಿದರು,  ಜೆಡಿಎಸ್ ಬಿಟ್ಟು ಅವರದೇ ಬಳಗ ಕಟ್ಟಿಕೊ್ಂಡರು, ಆಗ ಅದು ಖರೀದಿ ಆಗಿರಲಿಲ್ಲವಾ? ಜಮೀರ್ ಅಹಮದ್,ಎಚ್. ಸಿ ಬಾಲಕೃಷ್ಣ, ಎನ್.ಚಲುವರಾಯ ಸ್ವಾಮಿ ಸೇರಿದಂತೆ  7 ಶಾಸಕರನ್ನು ಕಾಂಗ್ರೆಸ್ ಗೆ ಸೇರಿಸಿಕೊಂಡರು, ಅದು ಯಾವ ರಾಜಕಾರಣ  ಎಂದು ದೇವೇಗೌಡರು ಹೇಳಬೇಕು.  1999ರಲ್ಲಿ 6 ಜೆಡಿಎಸ್ ಶಾಸಕರು ಕಾಂಗ್ರೆಸ್ ಸೇರಿದರು. ಅದು ಯಾವ ರಾಜಕಾರಣ ಎಂದು ಕಾಂಗ್ರೆಸ್ ನವರು ಹೇಳಬೆಕು ಎಂದು ರವಿ ವಾಗ್ದಾಳಿ ನಡೆಸಿದ್ದಾರೆ.
ನಾವು ಇಲ್ಲಿ ರಾಜಕಾರಣ ಮಾಡುತ್ತಿದ್ದೇವೆ,  ಪರಿಸ್ಥಿತಿಯ ಲಾಭ ಪಡೆದುಕೊಳ್ಳದೇ ಸುಮ್ಮನೆ ಕೈಕಟ್ಟಿ ಕೂರಲು ನಾವು  ಚಾರಿಟಿ ನಡೆಸುತ್ತಿಲ್ಲ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

US tariff: ಚೀನಾ ಮೇಲೆ ಅಮೆರಿಕ ಶೇ.100 ರಷ್ಟು ಸುಂಕ; ಭಾರತಕ್ಕೆ ಎಚ್ಚರಿಕೆಯ ಗಂಟೆ!

ಮಂಗಳೂರು: Muslim ಕ್ಯಾಬ್ ಚಾಲಕನಿಗೆ 'ಭಯೋತ್ಪಾದಕ' ಎಂದು ಕರೆದಿದ್ದ ಕೇರಳ ನಟನ ಬಂಧನ!

2nd Test, Day 2: ವಿಂಡೀಸ್ ವಿರುದ್ಧ ಶತಕ, ವಿರಾಟ್ ಕೊಹ್ಲಿ ದಾಖಲೆ ಸರಿಗಟ್ಟಿದ ಶುಭ್ ಮನ್ ಗಿಲ್!

ಜನಪ್ರಿಯ ಪ್ಯಾಲೆಸ್ತೀನ್ ನಾಯಕ ಮರ್ವಾನ್ ಬರ್ಘೌಟಿ ಬಿಡುಗಡೆಗೆ ಇಸ್ರೇಲ್ ನಕಾರ: 250 ಕೈದಿಗಳ ಪಟ್ಟಿ ಸಿದ್ಧ?

ಅಯೋಧ್ಯೆಯಲ್ಲಿ ಮತ್ತೊಂದು 'ನಿಗೂಢ' ಸ್ಫೋಟ: ಸಾವಿನ ಸಂಖ್ಯೆ 6ಕ್ಕೆ ಏರಿಕೆ, Video Viral

SCROLL FOR NEXT