ಕಂಪ್ಲಿ ಗಣೇಶ್ 
ರಾಜಕೀಯ

ಆನಂದ್ ಸಿಂಗ್ ಅವರು ನನಗೆ ಅಣ್ಣನ ಸಮಾನ, ಅವರ ಮೇಲೆ ಕೈ ಎತ್ತಿಲ್ಲ-ಕಂಪ್ಲಿ ಗಣೇಶ್

ಬಿಡದಿ ರೆಸಾರ್ಟ್‌ನಲ್ಲಿ ಶಾಸಕ ಆನಂದ್ ಸಿಂಗ್ ಅವರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ...

ರಾಮನಗರ: ಬಿಡದಿ ರೆಸಾರ್ಟ್‌ನಲ್ಲಿ ಶಾಸಕ ಆನಂದ್ ಸಿಂಗ್ ಅವರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಕಂಪ್ಲಿ ಗಣೇಶ್ ಅವರ ಕುಟುಂಬದವರಲ್ಲಿ ಕ್ಷಮೆಯಾಚಿಸಿದ್ದಾರೆ.

ಬಿಡದಿಯ ಈಗಲ್ಟನ್ ರೆಸಾರ್ಟ್ ಮುಂಭಾಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಭೀಮಾನಾಯಕ್ ಮತ್ತು ಆನಂದ್ ಮಾತಾಡುತ್ತಿದ್ದಾಗ ಗಲಾಟೆ ಆಯ್ತು. ಅವರಿಬ್ಬರನ್ನು ಒಗ್ಗೂಡಿಸಲು ನಾನು ಹೋದೆ. ಮಾತಿಗೆ ಮಾತು ಬೆಳೆದು ತಪ್ಪಾಗಿದೆ. ಆದರೆ ಮಾಧ್ಯಮಗಳು ಬಿತ್ತರಿಸುತ್ತಿರುವಂತಹದ್ದೇನೂ ನಡೆದಿಲ್ಲ. ನಾನು ಆನಂದ್​ ಸಿಂಗ್​ಗೆ  ಬಾಟಲಿಯಲ್ಲಿ ಹೊಡೆದಿದ್ದೇನೆ ಎಂಬುದು ಸುಳ್ಳು. ಗನ್​ ಮ್ಯಾನ್​ ಮೇಲೆ ಕೂಡ ನಾನು ಹಲ್ಲೆ ನಡೆಸಿಲ್ಲ. ಭೀಮಾ ನಾಯ್ಕ್​ ಹಾಗೂ ಆನಂದ್​ ಸಿಂಗ್​ ನಡುವೆ ಹೊಂದಾಣಿಕೆ ಮಾಡುವಾಗ ವಾಗ್ವಾದ ನಡೆಯಿತು. ಆದರೆ ಹೊಡೆದಾಟ ನಡೆದಿಲ್ಲ ಎಂದರು.

ಆನಂದ್​ ಸಿಂಗ್​ ಅವರಿಗೆ ಮೊದಲೇ ಆರೋಗ್ಯ ಸರಿಯಿರಲಿಲ್ಲ. ಅವರು ಬಿದ್ದ ಪರಿಣಾಮ ಹೀಗೆ ಆಗಿದೆ. ಮಾತಿಗೆ ಮಾತು ಬೆಳೆದು ಗಲಾಟೆಯಾಗಿದ್ದು ನಿಜ. ಆದರೆ ಹಲ್ಲೆ ನಡೆದಿಲ್ಲ. ನಾನು ಇವರ ಮಧ್ಯೆ ಮಧ್ಯಸ್ಥಿಕೆ ನಡೆಸಿದ್ದೆ ಹೊರತು ಹಲ್ಲೆಗೆ ಮುಂದಾಗಿಲ್ಲ.ಕಳೆದ ಶಾಸಕಾಂಗ ಸಭೆಯ ವಿಚಾರಗಳಲ್ಲಿ ಇಬ್ಬರ ಮಧ್ಯೆ ಜಗಳ ನಡೆದದ್ದು ನಿಜ. ಅವರನ್ನು ಬಿಡಿಸಲು ಹೋಗಿ ಈ ಘಟನೆ ನಡೆಯಿತು. ಇದು ಬೇಕೆಂತಲೇ ಆದ ಘಟನೆಯಲ್ಲ, ಆಕಸ್ಮಿಕ ಪ್ರಮಾದ.  ಅವರ ಕುಟುಂಬಕ್ಕೆ ನೋವು ಆಗಿದ್ದರೆ ಮಾಧ್ಯಮಗಳ ಮುಖಾಂತರ ಇಲ್ಲವೇ ಸ್ವತಃ ಅವರ ಬಳಿಯೇ ಹೋಗಿ ಕ್ಷಮೆ ಕೇಳುತ್ತೇನೆ. ಆದರೆ ಮಾಧ್ಯಮಗಳಲ್ಲಿ ವೈಭವೀಕರಿಸಿ ಸುದ್ದಿ ಬಿತ್ತರಿಸಲಾಗಿದೆ. ಆನಂದ್ ಸಿಂಗ್ ಅವರು ನಡೆಯುತ್ತಾ ಹೋಗುತ್ತಿದ್ದಾಗ ಬಿದ್ದು ತಲೆಗೆ ಏಟಾಗಿದೆ. ಅದು ಬಿಟ್ಟರೆ ಬೇರೇನೂ ಆಗಿಲ್ಲ. ಅವರಿಗೆ ಮೊದಲೇ ಸ್ವಲ್ಪ ಆರೋಗ್ಯವಿರಲಿಲ್ಲ ಎಂದು ಹೇಳಿದ್ದಾರೆ.

ವೈಯಕ್ತಿಕವಾಗಿ ಆನಂದ್ ಸಿಂಗ್ ನನಗೆ ಅಣ್ಣನ ಸಮಾನ. ಅವರ ಕುಟುಂಬದ ಜತೆ ಬಹಳ ವರ್ಷಗಳಿಂದ ನಾನು ತುಂಬಾ ಆತ್ಮೀಯವಾಗಿದ್ದೇನೆ. ಪಕ್ಷಕ್ಕೆ ಮುಜುಗರ ಆಗುತ್ತದೆ ಎಂದು ನಾನು ಇಂದು ಮಾಧ್ಯಮಗಳ ಮುಂದೆ ಬಂದು ಹೇಳಿಕೆ ನೀಡುತ್ತಿದ್ದೇನೆ. ನಾನು ನನ್ನ ಕುಟುಂಬ ಇಂದು ಹೋಗಿ ಆನಂದ್ ಸಿಂಗ್ ಬಳಿ ಕ್ಷಮೆ ಕೇಳುತ್ತೇವೆ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ವೆನೆಜುವೆಲಾ ಪರಿಸ್ಥಿತಿ ನಿಮಗೂ ಬರಬಹುದು.. ತಡ ಮಾಡದೇ ನಮ್ ಜೊತೆ ಒಪ್ಪಂದ ಮಾಡ್ಕೊಳ್ಳಿ': ಕ್ಯೂಬಾಗೂ Donald Trump ಎಚ್ಚರಿಕೆ!

ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

ತ್ರಿಪುರದಲ್ಲಿ ಎರಡು ಸಮುದಾಯಗಳ ನಡುವೆ ಘರ್ಷಣೆ: ಉನಕೋಟಿಯಲ್ಲಿ ಮಸೀದಿ-ಮುಸ್ಲಿಂ ಅಂಗಡಿಗಳಿಗೆ ಬೆಂಕಿ

ಒಂದು ವಾರದ ಚಿಕಿತ್ಸೆ ಬಳಿಕ ಆಸ್ಪತ್ರೆಯಿಂದ ಸೋನಿಯಾ ಗಾಂಧಿ ಡಿಸ್ಚಾರ್ಜ್!

Tubelight in his head: ಹಿಮಂತಾ ಬಿಸ್ವಾ ಶರ್ಮಾ ವಿರುದ್ಧ AIMIM ಮುಖ್ಯಸ್ಥ ಓವೈಸಿ ಕಿಡಿ! ಏನಿದು ವಿವಾದ?

SCROLL FOR NEXT