ಬೆಂಗಳುರು: ವಿಶ್ವಾಸಮತ ಪ್ರಕ್ರಿಯೆ ಇಂದೇ ಮುಗಿಸಿ ಎಂದು ರಾಜ್ಯಪಾಲ ವಜುಭಾಯಿವಾಲಾ ಕರ್ನಾಟಕ ವಿಧಾನಸಭೆ ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ಸಂದೇಶ ರ್ನಿಡಿದ್ದಾರೆ.
ದಿನದ ಕಲಾಪ ಮುಗಿಯುವುದರೊಳಗೆ ವಿಶ್ವಾಸಮತ ಯಾಚಿಸಿ ಎಂದು ರಾಜ್ಯಪೊಆಲರು ಸದನಕ್ಕೆ ಸಂದೇಶ ರವಾನಿಸಿದ್ದಾರೆ.
ವಿಶ್ವಾಸಮತ ಪ್ರಕ್ರಿಯೆಯ ವೇಳೆ ಸ್ಪೀಕರ್ ವ್ಯಥಾ ಕಾಲಾಹರಣ ಮಾಡುತ್ತಿದ್ದಾರೆ ಎಂದು ವಿಪಕ್ಷಗಳು ಕೋಲಾಹಲ ಪ್ರಾರಂಭಿಸಿರುವ ವೇಳೆಯೇ ರಾಜ್ಯಪಾಲರು ಸದನಕ್ಕೆ ಸಂದೇಶ ರವಾನಿಸಿದ್ದಾರೆ.
ದಿನದಂತ್ಯದ ಒಳಗೇ ವಿಶ್ವಾಸಮತ ಸಾಬಿತುಪಡಿಸಿ ಎಂದು ರಾಜ್ಯಪಾಲರು ತಮಗೆ ಕಳಿಸಿದ್ದ ಸಂದೇಶವನ್ನು ವಿಧಾನಸಭಾಧ್ಯಕ್ಷ ಕೆಆರ್ ರಮೇಶ್ ಕುಮಾರ್ ಸದನದಲ್ಲಿ ಓದಿದ್ದಾರೆ.
ರಾಜ್ಯಪಾಲರ ಈ ಸಂದೇಶವನ್ನು ಕಾಂಗ್ರೆಸ್ ಸೇರಿ ಮೈತ್ರಿ ಪಕ್ಷದ ನಾಯಕರು ಬಲವಾಗಿ ಖಂಡಿಸಿದ್ದಾರೆ.