ರಾಜಕೀಯ

ಬೆನ್ನಿಗೆ ಚೂರಿ ಹಾಕಿದ ನಮ್ಮ ಶಾಸಕರಿಗೆ ಈಗ ನಡುಕ ಶುರುವಾಗಿದೆ: ದಿನೇಶ್ ಗುಂಡೂರಾವ್

Shilpa D
ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳಿಂದ ಕಾಂಗ್ರೆಸ್ ಪಕ್ಷದ ಬೆನ್ನಿಗೆ ಚೂರಿ ಹಾಕಿದ ಶಾಸಕರಿಗೆ ಈಗಾಗಲೇ ನಡುಕ ಆರಂಭವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಅವರ ಹಣೆ ಬರಹ ಏನೇ ಆಗಲಿ ,ಯಾವುದೇ ಕಾರಣಕ್ಕೂ ಅವರಿಗೆ ಪಕ್ಷದಲ್ಲಿ ಸ್ಥಾನ ಇಲ್ಲ ಎಂದು ದಿನೇಶ್ ಗುಂಡೂರಾವ್ ಟ್ವೀಟ್ ಮಾಡಿದ್ದಾರೆ.
ಅತೃಪ್ತರನ್ನು ಯಾವುದೇ ಕಾರಣಕ್ಕೂ ಪಕ್ಷಕ್ಕೆ ಸೇರಿಸಿಕೊಳ್ಳಲ್ಲ, ಇದು ಅವರಿಗೆ ಪಾಠವಾಗಬೇಕು ಎಂದು ಹೇಳಿರುವ ದಿನೇಶ್ ಅತೃಪ್ತ ಶಾಸಕರ ಪಾಲಿಗೆ ಕಾಂಗ್ರೆಸ್ ಮುಚ್ಚಿದ ಬಾಗಿಲು ಎಂದು ತಿಳಿಸಿದ್ದಾರೆ. 
SCROLL FOR NEXT