ರಾಜಕೀಯ

ಸಿಎಂ ಭೇಟಿಯಾದ ಬಿಜಪಿ ಶಾಸಕ: ಹಲವು ಊಹಾಪೋಹ

Raghavendra Adiga
ಬೆಂಗಳೂರು: ಲೋಕಸಭೆ ಚುನಾವಣೆ ಸೋಲಿನ ಬಳಿಕ ಕಾಂಗ್ರೆಸ್-ಜೆಡಿಎಸ್ ಮೈತ್ರ್ ಪಕ್ಷಗಳಿಗೆ ದಿಕ್ಕು ಕಾಣದಂತಾಗಿದೆ, ಇದರ ನಡುವೆ ಬಿಜೆಪಿ ಆಪರೇಷನ್ ಕಮಲ ನಡೆಸಿ ಇನ್ನಷ್ತು ಶಾಸಕರು, ನಾಯಕರನ್ನು ತನ್ನತ್ತ ಸೆಳೆದುಕೊಳ್ಳುವ ಹವಣಿಕೆಯಲ್ಲಿದೆ. ಆದರೆ ಈ ಎಲ್ಲದರ ನಡುವೆ ಭಾನುವಾರ ಬಿಜೆಪಿ ಶಾಸಕರೊಬ್ಬರು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರನ್ನು ಭೇಟಿಯಾಗಿರುವುದು ಚರ್ಚೆಗೆ ಗ್ರಾಸವಾಗಿದೆ. 
ಕನಕಗಿರಿ ಕ್ಷೇತ್ರದ ಬಿಜೆಪಿ ಶಾಸಕ ಬಸವರಾಜ್ ಧಾದೇಶಪುರ್ ಭಾನುವಾರ ಸಿಎಂ ಕುಮಾರಸ್ವಾಮಿಯವರನ್ನು ಭೇಟಿಯಾಗಿದ್ದಾರೆ. ಬಸವರಾಜ್ ಹಾಗೂ ಸಿಎಂ ಕುಮಾರಸ್ವಾಮಿ ಅವರ ಭೇಟಿಯ ಚಿತ್ರಗಳು ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ. ಶಾಸಕ ಬಸವರಾಜ್ ಬಿಜೆಪಿ ತೊರೆಯಲಿದ್ದಾರೆ ಎಂಬ ಮಾತುಗಳು ಕೇಳುತ್ತಿದೆ. ಆದ್ರೆ ಕೇಸರಿ ಪಕ್ಷ ಇದೆಲ್ಲವನ್ನೂ ಅಲ್ಲಗೆಳೆದಿದೆ.
ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಜಮೀರ್ ಅಹ್ಮದ್ ಒಂದು ಡಜನ್ ನಷ್ಟು ಸಂಖ್ಯೆಯ ಬಿಜೆಪಿ ಶಾಸಕರು ಕಾಂಗ್ರೆಸ್-ಜೆಡಿಎಸ್ ಪಕ್ಷಗಳಿಗೆ ಸೇರಲು ನಿರ್ಧರಿಸಿದ್ದಾರೆ ಎಂದು ಹೇಳಿಕೆ ನೀಡಿರುವ ಬೆನ್ನಲ್ಲೇ ಈ ಭಾವಚಿತ್ರ ವೈರಲ್ ಆಗಿದೆ.. ಆದರೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ "ಈ ಭೇಟಿಯ ಬಗ್ಗೆ ನನಗೆ ಗೊತ್ತಿಲ್ಲ" ಎಂದು ಹೇಳಿದ್ದಾರೆ.
ಇನ್ನು ಸಿಎಂ ಕಛೇರಿಯು ಬಸವರಾಜ್ ಭೇಟಿಯನ್ನು "ಕೇವಲ ಸೌಜನ್ಯದ ಭೇಟಿ" ಎಂದಷ್ಟೇ ಹೇಳಿದೆ.ಬಿಜೆಪಿ ವಕ್ತಾರ ಮಾತನಾಡಿ  "ಓರ್ವ ಶಾಸಕರಾಗಿ ರಾಜ್ಯದ ಮುಖ್ಯಮಂತ್ರಿಯನ್ನು ಬಸವರಾಜ್ ಭೇಟಿಯಾಗಿದ್ದಾರೆ, ಇದಕ್ಕೆ ಪ್ರತ್ಯೇಕ ಅರ್ಥ ಕಲ್ಪಿಸುವ ಅಗತ್ಯವಿಲ್ಲ" ಎಂದರು. 
SCROLL FOR NEXT