ಬೆಂಗಳೂರು: ಜೆಡಿಎಸ್ ಬದಲಿಗೆ ಬಿಜೆಪಿಗೆ ಮತ ಹಾಕಿದ್ದರಿಂದ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ದಕ್ಷಿಣ ಕನ್ನಡ 5ನೇ ಸ್ಥಾನಕ್ಕೆ ಕುಸಿದಿದೆ ಎಂದು ಲೋಕೋಪಯೋಗಿ ಸಚಿವ ಹೆಚ್ ಡಿ ರೇವಣ್ಣ ವ್ಯಂಗ್ಯವಾಡಿದ್ದಾರೆ.
ಹಾಸನ ಮೊದಲ ಸ್ಥಾನ ಪಡೆದಿದೆ. ರಾಮನಗರ ದ್ವಿತೀಯ ಸ್ಥಾನ ಪಡೆದಿದೆ. ಇದರಲ್ಲಿ ದೇವೇಗೌಡ ಪಾತ್ರವೂ ಇದೆ. ನನ್ನ ಪತ್ನಿ ಭವಾನಿಯ ಪಾತ್ರವೂ ಇದೆ. ರೋಹಿಣಿ ಸಿಂಧೂರಿ ಅವರ ಕೊಡುಗೆ ಏನೂ ಇಲ್ಲ. ನಾನು ಸಚಿವನಾದ ಬಳಿಕ ಎರಡು ಮಿಟಿಂಗ್ ಗಳನ್ನು ಕರೆದಿದ್ದ ಎಂದರು.
ಇನ್ನು ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ಹಾಸನ ಪ್ರಥಮ ಸ್ಥಾನ ಪಡೆದ ಬಳಿಕ ಸಚಿವ ರೇವಣ್ಣ ಅವರ ಲಿಂಬೆ ಹಣ್ಣಿನ ಪ್ರಭಾವದಿಂದ ಎಂದು ಸಾಮಾಜಿಕ ತಾಣಗಳಲ್ಲಿ ವ್ಯಾಪಕವಾಗಿ ಟ್ರೋಲ್ ಆಗಿತ್ತು.