ರಾಜಕೀಯ

ರಾಜ್ಯ ಅಥವಾ ರಾಷ್ಟ್ರ ರಾಜಕಾರಣ: ಭವಿಷ್ಯದಲ್ಲಿ ಯಡಿಯೂರಪ್ಪ ಪಾತ್ರ ಮೋದಿ ಅಲೆಯಿಂದ ನಿರ್ಧಾರ!

Nagaraja AB
ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿಯ ಸಾಧನೆ ಬಿ.ಎಸ್. ಯಡಿಯೂರಪ್ಪ ಅವರ ಭವಿಷ್ಯವನ್ನು ನಿರ್ಧರಿಸಲಿದೆ.
ಮತ್ತೆ ಅಧಿಕಾರಕ್ಕೆ ಬರುವ ನಿಟ್ಟಿನಲ್ಲಿ ಯಡಿಯೂರಪ್ಪ ನಿರಂತರವಾಗಿ ಪ್ರಯತ್ನಿಸುತ್ತಿದ್ದಾರೆ. ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿ ಆಗುತ್ತಾರೆಯೇ ? ಅಥವಾ ರಾಷ್ಟ್ರ ರಾಜಕಾರಣದಲ್ಲಿ ಪಾತ್ರ ನಿರ್ವಹಿಸಲಿದ್ದಾರೆಯೇ ಎಂಬುದು ಮೋದಿ ಅಲೆಯಿಂದ ನಿರ್ಧಾರವಾಗಲಿದೆ.
ಯಡಿಯೂರಪ್ಪ ಅವರ ಭವಿಷ್ಯದ ಬಗ್ಗೆ ಯಾರೊಬ್ಬರು ಅಧಿಕೃತವಾಗಿ ಮಾತನಾಡುತ್ತಿಲ್ಲ. ಒಂದು ವೇಳೆ 17-19 ಸ್ಥಾನಗಳನ್ನು ಪಡೆದರೆ ಯಡಿಯೂರಪ್ಪ ಪ್ರಮುಖ ನಾಯಕರಾಗಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ.ಆದರೆ, ಕೆಲವರು ಈ ಮಾತನ್ನು ಒಪ್ಪುವುದಿಲ್ಲ. ಇದು ಮೋದಿ ಚುನಾವಣೆ, ತೇಜಸ್ವಿ ಸೂರ್ಯ ಗೆಲುವು ಸಾಧಿಸಿದರೆ ಅದು ಮೋದಿಯಿಂದ, ಯಡಿಯೂರಪ್ಪ ಅವರಿಂದ ಇಲ್ಲ ಎನ್ನುತ್ತಿದ್ದಾರೆ.
SCROLL FOR NEXT